ಈ ರಾತ್ರಿ

ಎಲೆಗಳು ಉದುರಿ ಅಂಗಳದ
ತುಂಬೆಲ್ಲಾ ಹರಡಿ ಹಾಸಿ
ಮಳೆ ನೆನೆದ ರಾತ್ರಿ
ಎದೆಯ ನದಿಯ ತುಂಬ ನೀರು ಅಲೆಗಳು

ಮರಿಹಕ್ಕಿಗಳಂತೆ ಮುದುರಿದ
ನೆನಪುಗಳು ಆಕಾಶದಲ್ಲಿ
ಕಳಚಿಬಿದ್ದ ತಾರೆಗಳು
ಕವಳದ ಎಚ್ಚರದ ತುಂಬ ಕನಸುಗಳು

ಅಚ್ಚ ಅಳಿಯದೇ ಉಳಿದುಹೋದ
ಗಾಯದ ಕಲೆಯ ಕೆರೆತ
ಮೆಲುಕುಹಾಕಿದರೆ ಬಹಳ ಪ್ರಳಯ
ಚಳಿಗೆ ಥರಗುಟ್ಟಿದ ಮನಸ್ಸು

ಅಂಗಳದಲಿ ತೇಲಿ ಜೀಕಿದ ಉಯ್ಯಾಲೆ
ಕಂಬಗಳ ಕೌನೆರಳು ಹರಡಿ
ಬಿಸಿ ಹಾಯ್ದ ರಾತ್ರಿ ಬಂಧನ
ಸೆಳೆತದ ಮನೆ ಹನಿಗಳ ಸ್ನಾನ

ರಾತ್ರಿ ಎಚ್ಚರದಲಿ ವಿರಹದ ನೋವು
ಮತ್ತೆ ಕಂಬಳಿಯೊಳಗೆ ಹುದುಗಿದ ಮಾತು
ಮೋಡಗಳು ಸುರಿದ ಖಾಲಿಯಾದ ಆಕಾಶ
ನಿಂತರೂ ಕುಳಿತರೂ ತೊಟ್ಟಿಕ್ಕುವ ಧೂಮಕೇತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರಂಜಿ ಕೆರೆಯ ಬಳಿ
Next post ಸೂರ್ಯೋಪಾಸನೆ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…