Home / ಕವನ / ಹಾಯ್ಕು / ಹಾಯ್ಕಗಳು

ಹಾಯ್ಕಗಳು

ಬೇಸಿಗೆಯ ಸಂಜೆ
ತಂಗಾಳಿ ಬೀಸಿತು
ತಂಪಿನಲಿ ಅವನ ಉಸಿರಿತ್ತು.

ರಾತ್ರಿಯಲಿ ಆಕಾಶದ
ತುಂಬ ಬೆಳದಿಂಗಳು ಹರಡಿದೆ
ಅಂಗಳದಲಿ ಮಕ್ಕಳು ತುಂಬಿಕೊಂಡಿವೆ.

ಮುಂಜಾವಿನಲಿ
ಹನಿಹನಿ ಇಬ್ಬನಿ ಹಾಸಿವೆ
ನನ್ನಲ್ಲಿ ಕವಿತೆಯ ಜೀವ ಒಸರುತಿದೆ.

ಮಧ್ಯಾಹ್ನದಲಿ
ಒಂದು ಚಮಚ ನೀರು
ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ.

ಓಣಿಯಲಿ ನಡುರಾತ್ರಿ
ಹೆಜ್ಜೆ ಸಪ್ಪಳಗಳು
ನಾಯಿಗಳು ತುಂಬ ಊಳಿಡುತ್ತವೆ.

ಮಗು ಗಲಗಲ ತೊದಲಿತು
ಎದೆಯಲಿ
ದೇವಸ್ಥಾನದ ಗಂಟೆಗಳು ಮೊಳಗಿದವು.

ಅಮವಾಸ್ಯೆಯ ನಂತರ
ಚಂದ್ರ ಹುಟ್ಟುತ್ತಾನೆ
ಕಲ್ಲು ಸಂದಿಯಿಂದ ಕಪ್ಪೆಗಳು ವಟಗುಟ್ಟುತ್ತವೆ.

ಚಿಟ್ಟೆ ಕೆಂಪು ದಾಸವಾಳದ
ಮೇಲೆ ಹಾರಾಡುತ್ತವೆ
ಸೂರ್ಯ ಕೆಂಪಾಗಿ ಉದಯಿಸುತ್ತಾನೆ.

ಮಾಗಿಯ ಚಳಿಯಲಿ
ಹೊದ್ದ ಕಂಬಳಿಯಿಂದ
ನೆನಪಿನ ಕಂಬಳಿ ಹುಳಗಳಿದ್ದವು.

ಚಳಿಗಾಲದ ಸಂಜೆ
ಗಾಳಿ ಸವರುತ್ತವೆ ಜೀವವ
ದೂರದಿಂದ ಉದುರುತ್ತದೆ ನೆರಳು

ಬೇಸಿಗೆಯಲಿ ಅಕಾಲಿಕ ಮಳೆ
ಮಣ್ಣವಾಸನೆಗೆ
ಎದೆಯ ಕನಸುಗಳು ಬಿರಿದವು.

ಸಮುದ್ರದ ದಂಡೆಯಲಿ
ಅಲೆಗಳು ಅಪ್ಪಳಿಸಿವೆ
ನಾನಿನ್ನು ಜೀವಂತವಾಗಿರುವೆ.

ಸಂಜೆ ಹೂವು ಗಿಡ
ಮುಲುಕಾಡಿ ಕಂಪಿಸಿವೆ
ಚಿಟ್ಟೆಭಾರ ಹೆಗಲಿಗೇರಿಸಿಕೊಂಡಿವೆ.

ಅವಳು ಬದುಕು ಬೇಡ ಅಂದಳು.
ಸಾಯಂಕಾಲ ದೇವರ ಮನೆ ನೀಲಾಂಜನದಲಿ
ಮಕ್ಕಳ ಕಣ್ಣುಗಳು ಮಿನುಗಿದವು.

ಈದ್ ಚಾಂದ ಹರಡಿವೆ ತಿಳಿ ಬೆಳದಿಂಗಳು
ಓಣಿಯಲಿ ಹಲಗೆಗಳು ಭಾರಿಸುತ್ತಲಿದೆ
ಬಣ್ಣದ ಹೋಳಿ ಮೃದುವಾಗಿ ಸಿಂಗರಿಸಿದೆ ಊರನು.

ಸಾವಿನ ಕರಿನೆರಳು ತಬ್ಬಿ
ತಲೆಯ ಕೂದಲೆಲ್ಲಾ ಬೋಳು
ವಸಂತನ ಆಗಮವಾಗಿದೆ ಹಸಿರು ಚಿಗುರುತ್ತದೆ.

ಬದುಕಿನ ಕೊನೆಯ ಕ್ಷಣಗಳು
ಸಾವು ತಬ್ಬಿದೆ ಎಷ್ಟೊಂದು
ಶಾಂತಿ ಹಿತಗಳು ಅರಳಿವೆ ಎದೆಯೊಳಗೆ.

ಆ ಪಕ್ಷಿಯ ಏಕಾಂತರ ಹಾಡು
ನೇವರಿಸುತ್ತದೆ ಅವಳ ಕೂದಲು
ಎಲ್ಲಾ ಕಣಿವೆಗಳು ಬೆಳಕು ಹರಡುತ್ತಿದೆ.

ವಸಂತ ಮತ್ತೆ ಬಂದಿದ್ದಾನೆ.
ಪುಟ್ಟ ಹುಲ್ಲುಗರಿಯ ಬೆನ್ನ ಮೇಲೆ
ಹನಿ ಇಬ್ಬನಿ ಕುಳಿತಿದೆ ಒಂದೇ.

ಮಳೆ ಬಿದ್ದು ಒದ್ದೆಯಾದ ಮಣ್ಣು
ಅರಳಿದವು ಕವಿತೆಯ ಕಣ್ಣು
ನಿಶ್ಶಬ್ದದಲಿ ಕವಿ ಕುಳಿತಿದ್ದಾನೆ ಒಬ್ಬನೇ.

ಈ ಮಧ್ಯಾಹ್ನದ ಬಿಸಿಲಿಗೆ
ಬೋಧಿ ಮರದ
ನೆರಳಿನ ಕನವರಿಕೆ.

ಉದಯಿಸುತ್ತಿರುವ ಮಂಕಾದ
ಸೂರ್ಯ ಕಂಬದ ಮೇಲೆ
ಒಂಟಿ ಹಕ್ಕಿ ನೆನಪು.

ಅಂಗಳದ ಸರಿಗೆ ತುಂಬ
ಬಟ್ಟೆಗಳು
ಹಾರಾಡಿವೆ ಬಣ್ಣದ ಚಿಟ್ಟೆಗಳು.

ನೀಲಿ ಬಾನ ತುಂಬ ನಕ್ಷತ್ರಗಳು
ಅರಳಿವೆ ಸುಗಂಧಿ ಅಂಗಳದಲಿ
ಮಿನುಗಿವೆ ಅವಳ ಕಣ್ಣುಗಳು.

ನಿರಂತರ ಚಲನೆಯ ದಾರಿ
ಮೂಡಿದ ಹೆಜ್ಜೆ ಗುರುತುಗಳು
ಅಳಿಸಿವೆ ಅವನ ನೆನಪು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...