ಹಾಯ್ಕಗಳು

ಬೇಸಿಗೆಯ ಸಂಜೆ
ತಂಗಾಳಿ ಬೀಸಿತು
ತಂಪಿನಲಿ ಅವನ ಉಸಿರಿತ್ತು.

ರಾತ್ರಿಯಲಿ ಆಕಾಶದ
ತುಂಬ ಬೆಳದಿಂಗಳು ಹರಡಿದೆ
ಅಂಗಳದಲಿ ಮಕ್ಕಳು ತುಂಬಿಕೊಂಡಿವೆ.

ಮುಂಜಾವಿನಲಿ
ಹನಿಹನಿ ಇಬ್ಬನಿ ಹಾಸಿವೆ
ನನ್ನಲ್ಲಿ ಕವಿತೆಯ ಜೀವ ಒಸರುತಿದೆ.

ಮಧ್ಯಾಹ್ನದಲಿ
ಒಂದು ಚಮಚ ನೀರು
ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ.

ಓಣಿಯಲಿ ನಡುರಾತ್ರಿ
ಹೆಜ್ಜೆ ಸಪ್ಪಳಗಳು
ನಾಯಿಗಳು ತುಂಬ ಊಳಿಡುತ್ತವೆ.

ಮಗು ಗಲಗಲ ತೊದಲಿತು
ಎದೆಯಲಿ
ದೇವಸ್ಥಾನದ ಗಂಟೆಗಳು ಮೊಳಗಿದವು.

ಅಮವಾಸ್ಯೆಯ ನಂತರ
ಚಂದ್ರ ಹುಟ್ಟುತ್ತಾನೆ
ಕಲ್ಲು ಸಂದಿಯಿಂದ ಕಪ್ಪೆಗಳು ವಟಗುಟ್ಟುತ್ತವೆ.

ಚಿಟ್ಟೆ ಕೆಂಪು ದಾಸವಾಳದ
ಮೇಲೆ ಹಾರಾಡುತ್ತವೆ
ಸೂರ್ಯ ಕೆಂಪಾಗಿ ಉದಯಿಸುತ್ತಾನೆ.

ಮಾಗಿಯ ಚಳಿಯಲಿ
ಹೊದ್ದ ಕಂಬಳಿಯಿಂದ
ನೆನಪಿನ ಕಂಬಳಿ ಹುಳಗಳಿದ್ದವು.

ಚಳಿಗಾಲದ ಸಂಜೆ
ಗಾಳಿ ಸವರುತ್ತವೆ ಜೀವವ
ದೂರದಿಂದ ಉದುರುತ್ತದೆ ನೆರಳು

ಬೇಸಿಗೆಯಲಿ ಅಕಾಲಿಕ ಮಳೆ
ಮಣ್ಣವಾಸನೆಗೆ
ಎದೆಯ ಕನಸುಗಳು ಬಿರಿದವು.

ಸಮುದ್ರದ ದಂಡೆಯಲಿ
ಅಲೆಗಳು ಅಪ್ಪಳಿಸಿವೆ
ನಾನಿನ್ನು ಜೀವಂತವಾಗಿರುವೆ.

ಸಂಜೆ ಹೂವು ಗಿಡ
ಮುಲುಕಾಡಿ ಕಂಪಿಸಿವೆ
ಚಿಟ್ಟೆಭಾರ ಹೆಗಲಿಗೇರಿಸಿಕೊಂಡಿವೆ.

ಅವಳು ಬದುಕು ಬೇಡ ಅಂದಳು.
ಸಾಯಂಕಾಲ ದೇವರ ಮನೆ ನೀಲಾಂಜನದಲಿ
ಮಕ್ಕಳ ಕಣ್ಣುಗಳು ಮಿನುಗಿದವು.

ಈದ್ ಚಾಂದ ಹರಡಿವೆ ತಿಳಿ ಬೆಳದಿಂಗಳು
ಓಣಿಯಲಿ ಹಲಗೆಗಳು ಭಾರಿಸುತ್ತಲಿದೆ
ಬಣ್ಣದ ಹೋಳಿ ಮೃದುವಾಗಿ ಸಿಂಗರಿಸಿದೆ ಊರನು.

ಸಾವಿನ ಕರಿನೆರಳು ತಬ್ಬಿ
ತಲೆಯ ಕೂದಲೆಲ್ಲಾ ಬೋಳು
ವಸಂತನ ಆಗಮವಾಗಿದೆ ಹಸಿರು ಚಿಗುರುತ್ತದೆ.

ಬದುಕಿನ ಕೊನೆಯ ಕ್ಷಣಗಳು
ಸಾವು ತಬ್ಬಿದೆ ಎಷ್ಟೊಂದು
ಶಾಂತಿ ಹಿತಗಳು ಅರಳಿವೆ ಎದೆಯೊಳಗೆ.

ಆ ಪಕ್ಷಿಯ ಏಕಾಂತರ ಹಾಡು
ನೇವರಿಸುತ್ತದೆ ಅವಳ ಕೂದಲು
ಎಲ್ಲಾ ಕಣಿವೆಗಳು ಬೆಳಕು ಹರಡುತ್ತಿದೆ.

ವಸಂತ ಮತ್ತೆ ಬಂದಿದ್ದಾನೆ.
ಪುಟ್ಟ ಹುಲ್ಲುಗರಿಯ ಬೆನ್ನ ಮೇಲೆ
ಹನಿ ಇಬ್ಬನಿ ಕುಳಿತಿದೆ ಒಂದೇ.

ಮಳೆ ಬಿದ್ದು ಒದ್ದೆಯಾದ ಮಣ್ಣು
ಅರಳಿದವು ಕವಿತೆಯ ಕಣ್ಣು
ನಿಶ್ಶಬ್ದದಲಿ ಕವಿ ಕುಳಿತಿದ್ದಾನೆ ಒಬ್ಬನೇ.

ಈ ಮಧ್ಯಾಹ್ನದ ಬಿಸಿಲಿಗೆ
ಬೋಧಿ ಮರದ
ನೆರಳಿನ ಕನವರಿಕೆ.

ಉದಯಿಸುತ್ತಿರುವ ಮಂಕಾದ
ಸೂರ್ಯ ಕಂಬದ ಮೇಲೆ
ಒಂಟಿ ಹಕ್ಕಿ ನೆನಪು.

ಅಂಗಳದ ಸರಿಗೆ ತುಂಬ
ಬಟ್ಟೆಗಳು
ಹಾರಾಡಿವೆ ಬಣ್ಣದ ಚಿಟ್ಟೆಗಳು.

ನೀಲಿ ಬಾನ ತುಂಬ ನಕ್ಷತ್ರಗಳು
ಅರಳಿವೆ ಸುಗಂಧಿ ಅಂಗಳದಲಿ
ಮಿನುಗಿವೆ ಅವಳ ಕಣ್ಣುಗಳು.

ನಿರಂತರ ಚಲನೆಯ ದಾರಿ
ಮೂಡಿದ ಹೆಜ್ಜೆ ಗುರುತುಗಳು
ಅಳಿಸಿವೆ ಅವನ ನೆನಪು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ
Next post ಪಯಣ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys