ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಚಿತ್ರ: ಐಲೋನ

ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ ಹೊಸ ಸಸ್ಯಗಳು ಅದರ ಅಡಿಯಲ್ಲಿ ಬೆಳೆಯುವುದುದಿಲ್ಲ. ಇದನ್ನು ಗಮನಿಸಿದ್ದೀರಾ? ಇದಕ್ಕೆ ಕಾರಣ ಸಸ್ಯಗಳಲ್ಲಿ ನಡೆಯುವ ರಾಸಾಯನಿಕ ಸಮರ! ಅಂದರೆ ಕೆಲವು ಸಸ್ಯಗಳು ನಿಷೇಧಕ ರಾಶಯನಿಕಗಳನ್ನು ತಯಾರಿಸಿ ಇನ್ನಿತರ ಸಸ್ಯಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ.

ಕಳೆನಾಶಕ ರಸಾಯನ
ಸಸ್ಯಗಳಲ್ಲಿ ದ್ವಿತೀಯಕ ಪದಾರ್ಥಗಳು ಉತ್ಪತ್ತಿಯಾಗುತ್ತವಷ್ಟೇ. ಅವು ಬೇರು ಅಥವಾ ಎಲೆಗಳ ಮುಖಾಂತರ ಮಣ್ಣನ್ನು ಸೇರುತ್ತವೆ. ಅಲ್ಲಿ ಕಳೆನಾಶಕ ರಸಾಯನದ ಹಾಗೆ ವರ್ತಿಸುತ್ತವೆ.

ಅಕ್ರೋಡ ಗಿಡದ ಸುತ್ತಮುತ್ತಲಿನ ಸಸ್ಯಗಳು ಮತ್ತು ಹುಲ್ಲು ಸರಿಯಾಗಿ ಏಕೆ ಬೆಳೆಯುತ್ತಿಲ್ಲ ಎಂದು ವಿಜ್ಞಾನಿಗಳು ಪ್ರಶ್ನೆ ಹಾಕಿಕೊಂಡು ಸಂಶೋಧನೆ ನಡೆಸಿದರು. ಪರೀಕ್ಷಿಸಿದಾಗ ಅದರ ಎಲೆ, ತೊಗಟೆ, ಹಣ್ಣಿನ ಸಿಪ್ಪೆ ಮತ್ತಿತರ ಅಂಗಾಂಗಗಳಿಂದ ‘ಜುಗ್ಲೋನ್’ ಎಂಬ ರಾಸಾಯನಿಕ ಬೇರ್ಪಡಿಸಲಾಯಿತು. ಈ ರಾಸಾಯನಿಕ ಮಣ್ಣನ್ನು ಸೇರಿ, ಆಕ್ಸೀಡೀಕರಣವಾಗಿ ಇತರ ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸಿತ್ತು.

ಮಣ್ಣಿಗೆ ಆವಿಶೀಲ ತೈಲ
ಸಾಲ್ವಿಯಾ ಜಾತಿಯ ಮರಗಳ ಎಲೆಗಳು ನೆಲಕ್ಕೆ ಬಿದ್ದಾಗ ಆವಿಶೀಲ ತೈಲವನ್ನು ಮಣ್ಣಿಗೆ ಬಿಡುತ್ತವೆ. ಅದು ಇನ್ನಿತರ ಸಸ್ಯಗಳ ಬೀಜಗಳು ಮೊಳಕೆಒಡೆಯದ ಹಾಗೆ ತಡೆ ಒಡ್ಡುತ್ತವೆ. ಕ್ಲಿರೋಡೆಂಡ್ರಾನ್ ಸಸ್ಯವು ವಿಸರ್ಜಿಸುವ ರಾಸಾಯನಿಕದಿಂದ ತುರುಬಿಗಿಡ, ಮುಳ್ಳ ಕೀರೆ ಸೊಪ್ಪು, ಚಗಚಿ ಇತ್ಯಾದಿ ಸಸ್ಯಗಳು ಒಣಗಿಹೋಗುತ್ತವೆ. ಪಾರ್ಥೇನಿಯಂ, ಆಡನ್‌ಸೋನಿಯ ಮತ್ತಿತರ ಸಸ್ಯಗಳೂ ರಾಸಾಯನಿಕಗಳನ್ನು ವಿಸರ್ಜಿಸುತ್ತವೆ.

ಮಣ್ಣಿನಲ್ಲಿರುವ ಪೆನಿಸಿಲಿಯಂ ಶಿಲೀಂಧ್ರ ಪ್ರತಿ ಜೈವಿಕ ಪದಾರ್ಥ ಉತ್ಪತ್ತಿ ಮಾಡಿ ಬಿಡುಗಡೆ ಮಾಡುತ್ತದೆ. ಅದರಿಂದ ಅನೇಕ ಬ್ಯಾಕ್ಟೀರಿಯಾ ಪ್ರಭೇದಗಳು ನಾಶವಾಗುತ್ತವೆ. ಹೀಗೆ ಸಸ್ಯಗಳು ಒಸರುವ ರಾಸಾಯನಿಕಗಳಲ್ಲಿ ಕೆಲವನ್ನು ಮಾತ್ರ ಗುರುತಿಸಲಾಗಿದೆ. ಅವು ಫಿನೋಲಿಕ್ ಆಮ್ಲ, ಲ್ಯಾಕ್ಟೋನ್‌ಗಳು, ಕ್ಯಾಂಫರ್‍, ನಾರಿಂಗಿನಿನ್, ಸ್ಕೇಲಿನ್, ಆರ್ಬುಟಿವ್ ಇತ್ಯಾದಿ. ಗುರುತಿಸಲಾಗದ ಅನೇಕ ರಾಸಾಯನಿಕಗಳು ಸವಾಲಾಗಿ ನಿಂತಿವೆ. ಸಸ್ಯಗಳು ವಿಸರ್ಜಿಸುವ ರಾಸಾಯನಿಕವು ಒಂದು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದರೆ ಇನ್ನೊಂದರ ಬೆಳವಣಿಗೆ ಶೀಘ್ರಗೊಳಿಸಲೂಬಹುದು!

ಸಸ್ಯಗಳು ರಾಸಾಯನಿಕ ಸಮರದಿಂದ ತಮ್ಮ ವೈರಿಯನ್ನು ಹೀಗೆ ಹತೋಟಿಯಲ್ಲಿಡುತ್ತವೆ. ಇದು ವಿನಾಶಕಾರಿ ಕಳೆ ಗಿಡಗಳನ್ನು ನಿಯಂತ್ರಿಸಲು ಹೊಸದೊಂದು ಪರಿಣಾಮಕಾರಿ ರಾಸಾಯನಿಕಗಳ ಆವಿಷ್ಕಾರಕ್ಕೆ ನಾಂದಿ ಆಗಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಬಳಿಹುಳ
Next post ರೆಸೆಪ್ಷನ್

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys