Home / ಲೇಖನ / ಕೃಷಿ / ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಚಿತ್ರ: ಐಲೋನ

ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ ಹೊಸ ಸಸ್ಯಗಳು ಅದರ ಅಡಿಯಲ್ಲಿ ಬೆಳೆಯುವುದುದಿಲ್ಲ. ಇದನ್ನು ಗಮನಿಸಿದ್ದೀರಾ? ಇದಕ್ಕೆ ಕಾರಣ ಸಸ್ಯಗಳಲ್ಲಿ ನಡೆಯುವ ರಾಸಾಯನಿಕ ಸಮರ! ಅಂದರೆ ಕೆಲವು ಸಸ್ಯಗಳು ನಿಷೇಧಕ ರಾಶಯನಿಕಗಳನ್ನು ತಯಾರಿಸಿ ಇನ್ನಿತರ ಸಸ್ಯಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ.

ಕಳೆನಾಶಕ ರಸಾಯನ
ಸಸ್ಯಗಳಲ್ಲಿ ದ್ವಿತೀಯಕ ಪದಾರ್ಥಗಳು ಉತ್ಪತ್ತಿಯಾಗುತ್ತವಷ್ಟೇ. ಅವು ಬೇರು ಅಥವಾ ಎಲೆಗಳ ಮುಖಾಂತರ ಮಣ್ಣನ್ನು ಸೇರುತ್ತವೆ. ಅಲ್ಲಿ ಕಳೆನಾಶಕ ರಸಾಯನದ ಹಾಗೆ ವರ್ತಿಸುತ್ತವೆ.

ಅಕ್ರೋಡ ಗಿಡದ ಸುತ್ತಮುತ್ತಲಿನ ಸಸ್ಯಗಳು ಮತ್ತು ಹುಲ್ಲು ಸರಿಯಾಗಿ ಏಕೆ ಬೆಳೆಯುತ್ತಿಲ್ಲ ಎಂದು ವಿಜ್ಞಾನಿಗಳು ಪ್ರಶ್ನೆ ಹಾಕಿಕೊಂಡು ಸಂಶೋಧನೆ ನಡೆಸಿದರು. ಪರೀಕ್ಷಿಸಿದಾಗ ಅದರ ಎಲೆ, ತೊಗಟೆ, ಹಣ್ಣಿನ ಸಿಪ್ಪೆ ಮತ್ತಿತರ ಅಂಗಾಂಗಗಳಿಂದ ‘ಜುಗ್ಲೋನ್’ ಎಂಬ ರಾಸಾಯನಿಕ ಬೇರ್ಪಡಿಸಲಾಯಿತು. ಈ ರಾಸಾಯನಿಕ ಮಣ್ಣನ್ನು ಸೇರಿ, ಆಕ್ಸೀಡೀಕರಣವಾಗಿ ಇತರ ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸಿತ್ತು.

ಮಣ್ಣಿಗೆ ಆವಿಶೀಲ ತೈಲ
ಸಾಲ್ವಿಯಾ ಜಾತಿಯ ಮರಗಳ ಎಲೆಗಳು ನೆಲಕ್ಕೆ ಬಿದ್ದಾಗ ಆವಿಶೀಲ ತೈಲವನ್ನು ಮಣ್ಣಿಗೆ ಬಿಡುತ್ತವೆ. ಅದು ಇನ್ನಿತರ ಸಸ್ಯಗಳ ಬೀಜಗಳು ಮೊಳಕೆಒಡೆಯದ ಹಾಗೆ ತಡೆ ಒಡ್ಡುತ್ತವೆ. ಕ್ಲಿರೋಡೆಂಡ್ರಾನ್ ಸಸ್ಯವು ವಿಸರ್ಜಿಸುವ ರಾಸಾಯನಿಕದಿಂದ ತುರುಬಿಗಿಡ, ಮುಳ್ಳ ಕೀರೆ ಸೊಪ್ಪು, ಚಗಚಿ ಇತ್ಯಾದಿ ಸಸ್ಯಗಳು ಒಣಗಿಹೋಗುತ್ತವೆ. ಪಾರ್ಥೇನಿಯಂ, ಆಡನ್‌ಸೋನಿಯ ಮತ್ತಿತರ ಸಸ್ಯಗಳೂ ರಾಸಾಯನಿಕಗಳನ್ನು ವಿಸರ್ಜಿಸುತ್ತವೆ.

ಮಣ್ಣಿನಲ್ಲಿರುವ ಪೆನಿಸಿಲಿಯಂ ಶಿಲೀಂಧ್ರ ಪ್ರತಿ ಜೈವಿಕ ಪದಾರ್ಥ ಉತ್ಪತ್ತಿ ಮಾಡಿ ಬಿಡುಗಡೆ ಮಾಡುತ್ತದೆ. ಅದರಿಂದ ಅನೇಕ ಬ್ಯಾಕ್ಟೀರಿಯಾ ಪ್ರಭೇದಗಳು ನಾಶವಾಗುತ್ತವೆ. ಹೀಗೆ ಸಸ್ಯಗಳು ಒಸರುವ ರಾಸಾಯನಿಕಗಳಲ್ಲಿ ಕೆಲವನ್ನು ಮಾತ್ರ ಗುರುತಿಸಲಾಗಿದೆ. ಅವು ಫಿನೋಲಿಕ್ ಆಮ್ಲ, ಲ್ಯಾಕ್ಟೋನ್‌ಗಳು, ಕ್ಯಾಂಫರ್‍, ನಾರಿಂಗಿನಿನ್, ಸ್ಕೇಲಿನ್, ಆರ್ಬುಟಿವ್ ಇತ್ಯಾದಿ. ಗುರುತಿಸಲಾಗದ ಅನೇಕ ರಾಸಾಯನಿಕಗಳು ಸವಾಲಾಗಿ ನಿಂತಿವೆ. ಸಸ್ಯಗಳು ವಿಸರ್ಜಿಸುವ ರಾಸಾಯನಿಕವು ಒಂದು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದರೆ ಇನ್ನೊಂದರ ಬೆಳವಣಿಗೆ ಶೀಘ್ರಗೊಳಿಸಲೂಬಹುದು!

ಸಸ್ಯಗಳು ರಾಸಾಯನಿಕ ಸಮರದಿಂದ ತಮ್ಮ ವೈರಿಯನ್ನು ಹೀಗೆ ಹತೋಟಿಯಲ್ಲಿಡುತ್ತವೆ. ಇದು ವಿನಾಶಕಾರಿ ಕಳೆ ಗಿಡಗಳನ್ನು ನಿಯಂತ್ರಿಸಲು ಹೊಸದೊಂದು ಪರಿಣಾಮಕಾರಿ ರಾಸಾಯನಿಕಗಳ ಆವಿಷ್ಕಾರಕ್ಕೆ ನಾಂದಿ ಆಗಬಹುದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...