Home / ಲೇಖನ / ಕೃಷಿ / ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಚಿತ್ರ: ಐಲೋನ

ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ ಹೊಸ ಸಸ್ಯಗಳು ಅದರ ಅಡಿಯಲ್ಲಿ ಬೆಳೆಯುವುದುದಿಲ್ಲ. ಇದನ್ನು ಗಮನಿಸಿದ್ದೀರಾ? ಇದಕ್ಕೆ ಕಾರಣ ಸಸ್ಯಗಳಲ್ಲಿ ನಡೆಯುವ ರಾಸಾಯನಿಕ ಸಮರ! ಅಂದರೆ ಕೆಲವು ಸಸ್ಯಗಳು ನಿಷೇಧಕ ರಾಶಯನಿಕಗಳನ್ನು ತಯಾರಿಸಿ ಇನ್ನಿತರ ಸಸ್ಯಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ.

ಕಳೆನಾಶಕ ರಸಾಯನ
ಸಸ್ಯಗಳಲ್ಲಿ ದ್ವಿತೀಯಕ ಪದಾರ್ಥಗಳು ಉತ್ಪತ್ತಿಯಾಗುತ್ತವಷ್ಟೇ. ಅವು ಬೇರು ಅಥವಾ ಎಲೆಗಳ ಮುಖಾಂತರ ಮಣ್ಣನ್ನು ಸೇರುತ್ತವೆ. ಅಲ್ಲಿ ಕಳೆನಾಶಕ ರಸಾಯನದ ಹಾಗೆ ವರ್ತಿಸುತ್ತವೆ.

ಅಕ್ರೋಡ ಗಿಡದ ಸುತ್ತಮುತ್ತಲಿನ ಸಸ್ಯಗಳು ಮತ್ತು ಹುಲ್ಲು ಸರಿಯಾಗಿ ಏಕೆ ಬೆಳೆಯುತ್ತಿಲ್ಲ ಎಂದು ವಿಜ್ಞಾನಿಗಳು ಪ್ರಶ್ನೆ ಹಾಕಿಕೊಂಡು ಸಂಶೋಧನೆ ನಡೆಸಿದರು. ಪರೀಕ್ಷಿಸಿದಾಗ ಅದರ ಎಲೆ, ತೊಗಟೆ, ಹಣ್ಣಿನ ಸಿಪ್ಪೆ ಮತ್ತಿತರ ಅಂಗಾಂಗಗಳಿಂದ ‘ಜುಗ್ಲೋನ್’ ಎಂಬ ರಾಸಾಯನಿಕ ಬೇರ್ಪಡಿಸಲಾಯಿತು. ಈ ರಾಸಾಯನಿಕ ಮಣ್ಣನ್ನು ಸೇರಿ, ಆಕ್ಸೀಡೀಕರಣವಾಗಿ ಇತರ ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸಿತ್ತು.

ಮಣ್ಣಿಗೆ ಆವಿಶೀಲ ತೈಲ
ಸಾಲ್ವಿಯಾ ಜಾತಿಯ ಮರಗಳ ಎಲೆಗಳು ನೆಲಕ್ಕೆ ಬಿದ್ದಾಗ ಆವಿಶೀಲ ತೈಲವನ್ನು ಮಣ್ಣಿಗೆ ಬಿಡುತ್ತವೆ. ಅದು ಇನ್ನಿತರ ಸಸ್ಯಗಳ ಬೀಜಗಳು ಮೊಳಕೆಒಡೆಯದ ಹಾಗೆ ತಡೆ ಒಡ್ಡುತ್ತವೆ. ಕ್ಲಿರೋಡೆಂಡ್ರಾನ್ ಸಸ್ಯವು ವಿಸರ್ಜಿಸುವ ರಾಸಾಯನಿಕದಿಂದ ತುರುಬಿಗಿಡ, ಮುಳ್ಳ ಕೀರೆ ಸೊಪ್ಪು, ಚಗಚಿ ಇತ್ಯಾದಿ ಸಸ್ಯಗಳು ಒಣಗಿಹೋಗುತ್ತವೆ. ಪಾರ್ಥೇನಿಯಂ, ಆಡನ್‌ಸೋನಿಯ ಮತ್ತಿತರ ಸಸ್ಯಗಳೂ ರಾಸಾಯನಿಕಗಳನ್ನು ವಿಸರ್ಜಿಸುತ್ತವೆ.

ಮಣ್ಣಿನಲ್ಲಿರುವ ಪೆನಿಸಿಲಿಯಂ ಶಿಲೀಂಧ್ರ ಪ್ರತಿ ಜೈವಿಕ ಪದಾರ್ಥ ಉತ್ಪತ್ತಿ ಮಾಡಿ ಬಿಡುಗಡೆ ಮಾಡುತ್ತದೆ. ಅದರಿಂದ ಅನೇಕ ಬ್ಯಾಕ್ಟೀರಿಯಾ ಪ್ರಭೇದಗಳು ನಾಶವಾಗುತ್ತವೆ. ಹೀಗೆ ಸಸ್ಯಗಳು ಒಸರುವ ರಾಸಾಯನಿಕಗಳಲ್ಲಿ ಕೆಲವನ್ನು ಮಾತ್ರ ಗುರುತಿಸಲಾಗಿದೆ. ಅವು ಫಿನೋಲಿಕ್ ಆಮ್ಲ, ಲ್ಯಾಕ್ಟೋನ್‌ಗಳು, ಕ್ಯಾಂಫರ್‍, ನಾರಿಂಗಿನಿನ್, ಸ್ಕೇಲಿನ್, ಆರ್ಬುಟಿವ್ ಇತ್ಯಾದಿ. ಗುರುತಿಸಲಾಗದ ಅನೇಕ ರಾಸಾಯನಿಕಗಳು ಸವಾಲಾಗಿ ನಿಂತಿವೆ. ಸಸ್ಯಗಳು ವಿಸರ್ಜಿಸುವ ರಾಸಾಯನಿಕವು ಒಂದು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದರೆ ಇನ್ನೊಂದರ ಬೆಳವಣಿಗೆ ಶೀಘ್ರಗೊಳಿಸಲೂಬಹುದು!

ಸಸ್ಯಗಳು ರಾಸಾಯನಿಕ ಸಮರದಿಂದ ತಮ್ಮ ವೈರಿಯನ್ನು ಹೀಗೆ ಹತೋಟಿಯಲ್ಲಿಡುತ್ತವೆ. ಇದು ವಿನಾಶಕಾರಿ ಕಳೆ ಗಿಡಗಳನ್ನು ನಿಯಂತ್ರಿಸಲು ಹೊಸದೊಂದು ಪರಿಣಾಮಕಾರಿ ರಾಸಾಯನಿಕಗಳ ಆವಿಷ್ಕಾರಕ್ಕೆ ನಾಂದಿ ಆಗಬಹುದು.
*****

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...