Home / ಲೇಖನ / ಕೃಷಿ / ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಹೊಲದ ತುಂಬೆಲ್ಲಗರಿಕೆ, ಕಲ್ಲು ನಿರುಪಯುಕ್ತ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ರೈತರಿಗೆ ಇದೀಗ ಹೂಸ ‘ಕ್ಷ’ ಕಿರಣವೊಂದು ಮೂಡಿ ಬಂದಿದೆ. ಕ್ಷಾರಯುಕ್ತ ಅಥವಾ ಅಯೋಗ್ಯ ಎನ್ನುವ ಭೂಮಿಯಲ್ಲಿ ಫಲವತ್ತಾಗಿ ಸಮೃದ್ಧಿವಾಗಿ ಬೆಳೆಬರುವುದೆಂದರೆ ಬೇಡವೆಂದವರಾರು? ಇಂಥಹ ಬರಡು ಭೂಮಿಯನ್ನು ಸಂಪದ್ಭರಿತ ಗೊಳಿಸುವಲ್ಲಿ ಪ್ರಯತ್ನ ಪೂರ್ವಕವಾಗಿ ಶೋಧನೆ ನಡಿಸಿ ಫಲಕಂಡರು. ಉತ್ತರ ಪ್ರದೇಶದ ಕಬ್ಬು ಸಂಶೋಧನಾ ಮಂಡಳಿಯ ವಿಜ್ಞಾನಿಗಳು. ಸಕ್ಕರೆ ಕಾರ್ಖಾನೆಗಳಲ್ಲಿತಯಾರಾಗುವ ಅದರ ಕೊಳೆಯನ್ನು ಜೈವಿಕ ಕಾರ್ಬೋನಿಕ್ ಗೊಬ್ಬರವಾಗಿ ಪರಿವರ್ತಿಸಿ ಗದ್ದೆಹೊಲಗಳಿಗೆ ಹಾಕಿದರೆ ಸಾಕು. ಬಂಜರುತನ ಕಳೆದುಕೊಂಡು ಫಲವತ್ತೆಗೊಳ್ಳುತ್ತದೆ. ಸಕ್ಕರೆಯ ಕೊಳೆಯಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ಶೇ. ೩೪ ಜೈವಿಕ್ ಕಾರ್ಬನ್, ಶೇ. ೧.೬೩ ನೆಟ್ರೋಜಿನ್ ಶೇ. ೨.೫೨ ಪಾಸ್ಫೇಟ್, ಶೇ. ೦.೫೫ ಪೋಟ್ಯಾಶ್, ಶೇ ೪.೭೪ ಕ್ಯಾಲ್ಸಿಯಂ ಆಕ್ಸೈಡ್ ಅಲ್ಲದೆ ಕಬ್ಬಿಣ ಮ್ಯಾಂಗನೀಸ್ ಮತ್ತು ಜಿಂಕ್ ಸಹ ಅಡಕವಾಗಿರುತ್ತದೆ.

ಈ ಸಕ್ಕರೆಯ ಕೊಳೆಯಲ್ಲಿರುವ ಜೈವಿಕ ಕಾರ್ಬನನ್ನು ಗೊಬ್ಬರವಾಗಿ ಉಪಯೋಗಿಸುವುದರಿಂದ ಭೂಮಿಯ ಭೌತಿಕ ಸ್ವರೂಪವು, ಜಲರಕ್ಷಣೆಯ ಸಾಮರ್ಥ್ಯ ಹಾಗೂ ಫಲವತ್ತತೆಯಲ್ಲಿ ಅಭಿವೃದ್ದಿ ಆಗುವುದು ಮತ್ತು ಜಮೀನಿನೊಳಗೆ ವಾಯುವಿನ ಸುಗಮ ಚಲನವಲನಕ್ಕೂ ಅನುಕೂಲವಾಗುವುದು. ಇದರ ಬಳಕೆಯ ಕುರಿತು ವಿಜ್ಞಾನಿಗಳು ರೈತರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತಾರೆ. ಇದನ್ನು ನೇರವಾಗಿ ಹೊಲದಲ್ಲಿ ಹಾಕದೇ ಸಗಣಿ, ಸೊಪ್ಪು, ಕಸಕಡ್ಡಿ ಒಂದಿಷ್ಟು ಪಾಸ್ಫೇಟ್ ಹಾಗೂ ಜೀವಾಣು ಪಲ್ಪರ್ ಸೇರಿಸಿ ಕನಿಷ್ಟ ೯೦ ದಿನಗಳವರೆಗೆ ಕೊಳೆಯಿಸಿ ನಂತರವೇ ಗದ್ದೆಗಳಲ್ಲಿ ಪ್ರಯೋಗಿಸಬೇಕು. ಇದರಂತೆ ಒದಗಿಸಿದಲ್ಲಿ ಬಂಜರು ಭೂಮಿಯನ್ನು ಫಲವತ್ತತೆಯನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಕಂಡು ಹಿಡಿದ ಈ ನಾಡಿನಲ್ಲಿ೩೨ ಲಕ್ಷ ರೈತರು ೨೦ ಲಕ್ಷ ಹೆಕ್ಟೇರುಗಳಲ್ಲಿ ಇದನ್ನು ಹಾಕಿ ಕೃಷಿ ಮಾಡುತ್ತಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...