Home / ಲೇಖನ / ಕೃಷಿ / ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಹೊಲದ ತುಂಬೆಲ್ಲಗರಿಕೆ, ಕಲ್ಲು ನಿರುಪಯುಕ್ತ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ರೈತರಿಗೆ ಇದೀಗ ಹೂಸ ‘ಕ್ಷ’ ಕಿರಣವೊಂದು ಮೂಡಿ ಬಂದಿದೆ. ಕ್ಷಾರಯುಕ್ತ ಅಥವಾ ಅಯೋಗ್ಯ ಎನ್ನುವ ಭೂಮಿಯಲ್ಲಿ ಫಲವತ್ತಾಗಿ ಸಮೃದ್ಧಿವಾಗಿ ಬೆಳೆಬರುವುದೆಂದರೆ ಬೇಡವೆಂದವರಾರು? ಇಂಥಹ ಬರಡು ಭೂಮಿಯನ್ನು ಸಂಪದ್ಭರಿತ ಗೊಳಿಸುವಲ್ಲಿ ಪ್ರಯತ್ನ ಪೂರ್ವಕವಾಗಿ ಶೋಧನೆ ನಡಿಸಿ ಫಲಕಂಡರು. ಉತ್ತರ ಪ್ರದೇಶದ ಕಬ್ಬು ಸಂಶೋಧನಾ ಮಂಡಳಿಯ ವಿಜ್ಞಾನಿಗಳು. ಸಕ್ಕರೆ ಕಾರ್ಖಾನೆಗಳಲ್ಲಿತಯಾರಾಗುವ ಅದರ ಕೊಳೆಯನ್ನು ಜೈವಿಕ ಕಾರ್ಬೋನಿಕ್ ಗೊಬ್ಬರವಾಗಿ ಪರಿವರ್ತಿಸಿ ಗದ್ದೆಹೊಲಗಳಿಗೆ ಹಾಕಿದರೆ ಸಾಕು. ಬಂಜರುತನ ಕಳೆದುಕೊಂಡು ಫಲವತ್ತೆಗೊಳ್ಳುತ್ತದೆ. ಸಕ್ಕರೆಯ ಕೊಳೆಯಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ಶೇ. ೩೪ ಜೈವಿಕ್ ಕಾರ್ಬನ್, ಶೇ. ೧.೬೩ ನೆಟ್ರೋಜಿನ್ ಶೇ. ೨.೫೨ ಪಾಸ್ಫೇಟ್, ಶೇ. ೦.೫೫ ಪೋಟ್ಯಾಶ್, ಶೇ ೪.೭೪ ಕ್ಯಾಲ್ಸಿಯಂ ಆಕ್ಸೈಡ್ ಅಲ್ಲದೆ ಕಬ್ಬಿಣ ಮ್ಯಾಂಗನೀಸ್ ಮತ್ತು ಜಿಂಕ್ ಸಹ ಅಡಕವಾಗಿರುತ್ತದೆ.

ಈ ಸಕ್ಕರೆಯ ಕೊಳೆಯಲ್ಲಿರುವ ಜೈವಿಕ ಕಾರ್ಬನನ್ನು ಗೊಬ್ಬರವಾಗಿ ಉಪಯೋಗಿಸುವುದರಿಂದ ಭೂಮಿಯ ಭೌತಿಕ ಸ್ವರೂಪವು, ಜಲರಕ್ಷಣೆಯ ಸಾಮರ್ಥ್ಯ ಹಾಗೂ ಫಲವತ್ತತೆಯಲ್ಲಿ ಅಭಿವೃದ್ದಿ ಆಗುವುದು ಮತ್ತು ಜಮೀನಿನೊಳಗೆ ವಾಯುವಿನ ಸುಗಮ ಚಲನವಲನಕ್ಕೂ ಅನುಕೂಲವಾಗುವುದು. ಇದರ ಬಳಕೆಯ ಕುರಿತು ವಿಜ್ಞಾನಿಗಳು ರೈತರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತಾರೆ. ಇದನ್ನು ನೇರವಾಗಿ ಹೊಲದಲ್ಲಿ ಹಾಕದೇ ಸಗಣಿ, ಸೊಪ್ಪು, ಕಸಕಡ್ಡಿ ಒಂದಿಷ್ಟು ಪಾಸ್ಫೇಟ್ ಹಾಗೂ ಜೀವಾಣು ಪಲ್ಪರ್ ಸೇರಿಸಿ ಕನಿಷ್ಟ ೯೦ ದಿನಗಳವರೆಗೆ ಕೊಳೆಯಿಸಿ ನಂತರವೇ ಗದ್ದೆಗಳಲ್ಲಿ ಪ್ರಯೋಗಿಸಬೇಕು. ಇದರಂತೆ ಒದಗಿಸಿದಲ್ಲಿ ಬಂಜರು ಭೂಮಿಯನ್ನು ಫಲವತ್ತತೆಯನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಕಂಡು ಹಿಡಿದ ಈ ನಾಡಿನಲ್ಲಿ೩೨ ಲಕ್ಷ ರೈತರು ೨೦ ಲಕ್ಷ ಹೆಕ್ಟೇರುಗಳಲ್ಲಿ ಇದನ್ನು ಹಾಕಿ ಕೃಷಿ ಮಾಡುತ್ತಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...