ನಾವೈದು ಜನ

ನಾವೈದು ಜನ
ಪಾಂಡವರು
ಯುದ್ದ ಮಾಡೆವು ಕೌರವರೊಡನೆ
ಅನುಭವಿಸೆವು ಸಾಮ್ರಾಜ್ಯವನೆ
ಇದು ಕಲಿಯುಗ
ಸುಮ್ಮನಿರಬೇಕಣ್ಣ
ದೊರೆಯಲು ಮುಕುತಿಯ ಮಣ್ಣ

ನಾವೈದು ಜನ
ಕೂಡಿದರೆ ಮುಷ್ಟಿಯಾದೇವು
ಅಗಲಿದರೆ ಹಸ್ತವಾದೇವು
ಅಂಗೈಲಿ ಕಮಲ ಹಿಡಿದೇವು
ಹೊತ್ತೇವು ತೆನೆ ತಲೆಯ ಮೇಲೆ
ಸಿಕ್ಕೆಸೇವು ಕುಡುಗೋಲು ಸೊಂಟದಲಿ
ಹಾಗೆಂದ ಮಾತ್ರಕ್ಕೆ
ಆಳುವ ಜಾತಿ ನಮ್ಮದಲ್ಲ

ನಾವೈದು ಜನ
ಕೆಲಸ ಮಾಡದ ಸೋಮಾರಿ
ಗಳಲ್ಲ
ಹಿಡಿದದ್ದು ಸಾಧಿಸುವ
ಹಠಮಾರಿಗಳಲ್ಲ
ಬದುಕಿಯೂ
ಸತ್ತಂತೆ ಬದುಕಿರುವ
ನಮ್ಮ
ಸುತ್ತಲಿನ ನಿಮ್ಮ
ಪ್ರತಿನಿಧಿಗಳು

ಖೋಜಾಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೀ ಸೃಷ್ಟಿಯ ಚೆಲುವು!
Next post ಹಂಬಲ ಮತ್ತು ಸ್ವಾಭಿಮಾನ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…