ನಾವೈದು ಜನ

ನಾವೈದು ಜನ
ಪಾಂಡವರು
ಯುದ್ದ ಮಾಡೆವು ಕೌರವರೊಡನೆ
ಅನುಭವಿಸೆವು ಸಾಮ್ರಾಜ್ಯವನೆ
ಇದು ಕಲಿಯುಗ
ಸುಮ್ಮನಿರಬೇಕಣ್ಣ
ದೊರೆಯಲು ಮುಕುತಿಯ ಮಣ್ಣ

ನಾವೈದು ಜನ
ಕೂಡಿದರೆ ಮುಷ್ಟಿಯಾದೇವು
ಅಗಲಿದರೆ ಹಸ್ತವಾದೇವು
ಅಂಗೈಲಿ ಕಮಲ ಹಿಡಿದೇವು
ಹೊತ್ತೇವು ತೆನೆ ತಲೆಯ ಮೇಲೆ
ಸಿಕ್ಕೆಸೇವು ಕುಡುಗೋಲು ಸೊಂಟದಲಿ
ಹಾಗೆಂದ ಮಾತ್ರಕ್ಕೆ
ಆಳುವ ಜಾತಿ ನಮ್ಮದಲ್ಲ

ನಾವೈದು ಜನ
ಕೆಲಸ ಮಾಡದ ಸೋಮಾರಿ
ಗಳಲ್ಲ
ಹಿಡಿದದ್ದು ಸಾಧಿಸುವ
ಹಠಮಾರಿಗಳಲ್ಲ
ಬದುಕಿಯೂ
ಸತ್ತಂತೆ ಬದುಕಿರುವ
ನಮ್ಮ
ಸುತ್ತಲಿನ ನಿಮ್ಮ
ಪ್ರತಿನಿಧಿಗಳು

ಖೋಜಾಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೀ ಸೃಷ್ಟಿಯ ಚೆಲುವು!
Next post ಹಂಬಲ ಮತ್ತು ಸ್ವಾಭಿಮಾನ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…