ಹಂಬಲ ಮತ್ತು ಸ್ವಾಭಿಮಾನ

ಅವನು-,
ಸ್ವಚ್ಛಂದವಾಗಿ ನಗುವ
ಜೋಡಿಗಳನು ನೋಡಿ ಕರಬುತ್ತಿದ್ದೇನೆ
ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ
ಸೋನೆ ಮಳೆ ಸುರಿಸು.

ಅವಳು-,
ಚಂದಿರ ನಗುನಗುತ ಬೆಂಕಿಹಚ್ಚಿದರೆ
ಸೂರ್ಯ ಉರಿದುರಿದು ಕರಕಲಾಗಿಸಿದ
ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ
ಕಣ್ಣೀರು ಸುರಿಸುವಂತೆ ಮಾಡು.

ಇಬ್ಬರಿಗೂ,
ಧಾರಾಕಾರವಾಗಿ ಸುರಿವಮಳೆ ಹೊರಗೆ
ಮನೆ ತುಂಬ ಆವರಿಸಿದ ಕಗ್ಗತ್ತಲು
ಪ್ರೀತಿ ಹೊತ್ತಿಕೊಳ್ಳಲು ಹೇಳಿದಂತಿತ್ತು
ಏನಾದರೂ ಮಾತನಾಡಲು ಒಳಗೊಳಗೇ ಹಂಬಲ
ಆದರೂ ಮತ್ತೆ ಮತ್ತೆ ಮನಕೆ ಮಳೆಯ ರಭಸ
ಮೌನ ಮುರಿಯಲಿಲ್ಲ
ಧ್ವನಿ ಚಿಗುರಲೇ ಇಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೈದು ಜನ
Next post ಹಬ್ಬಗಳು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…