Home / ಲೇಖನ / ಇತರೆ / ಕವಿ, ಪ್ರೇಮಿ, ಹುಚ್ಚ

ಕವಿ, ಪ್ರೇಮಿ, ಹುಚ್ಚ

ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್
ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್

ಪ್ರಿಯ ಸಖಿ,
ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು  ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು ಅರಳಿಸುವ ಶಕ್ತಿ, ಪ್ರತಿಭೆ ಹೊರಹಾಕುವ ಒಂದು ಮಾರ್ಗ, ಬೌದ್ಧಿಕ ಆಟ, ಹಣ ಹೆಸರು ಮಾಡುವ ಒಂದು ದಾರಿ, ಆತ್ಮಸಂತೋಷ ನೀಡುವ ಸಾಧನ… ಹೀಗೆ ಒಬ್ಬೊಬ್ಬರದು ಒಂದೊಂದು ಉತ್ತರ. ಹಾಗೆ ನೋಡಿದರೆ ಕವಿತೆಯೊಂದು ಹೀಗೆ ಇರಬೇಕು. ಇಷ್ಟು ಸಾಲುಗಳು ಇಂತದೇ ರೂಪದಲ್ಲಿರಬೇಕು ಎಂದು ಯಾರೂ ಚೌಕಟ್ಟು ಹಾಕುವಂತಿಲ್ಲ. ಏಕೆಂದರೆ ಕಾವ್ಯ ಸೃಷ್ಟಿಯೆಂಬುದು ಅತ್ಯಂತ ವೈಯಕ್ತಿಕವಾದ ಸೃಜನಶೀಲ ಸೃಷ್ಠಿಕ್ರಿಯೆ. ಎಲ್ಲ ಚೌಕಟ್ಟುಗಳನ್ನು ಮೀರಿ ಕಾವ್ಯ ರಚಿಸುವುದೇ ಹೊಸ ಕಾವ್ಯದ ಸೃಷ್ಠಿಗೆ ಕಾರಣವಾಗುತ್ತದೆ!

ಎಷ್ಟೋ ಬಾರಿ ಕವನಗಳು ಓದುಗರಿಗೆ ಅರ್ಥವಾಗದೇ ಇರುವುದೂ ಉಂಟು. ಕವಿಯ ಭಾವೋತ್ಕಟತೆಯ ಹಂತವಮ್ನ ಮುಟ್ಟದೇ ಕಾವ್ಯದೊಳಗೆ ಪರಕಾಯ ಪ್ರವೇಶವನ್ನು ಮಾಡದ ಹೊರತು ಸಹೃದಯನಿಗೆ ಕವಿತೆ ಅರ್ಥವಾಗುವುದು ಸಾಧ್ಯವಿಲ್ಲ. ಹೀಗೆಂದೇ ಕವಿತೆಯೊಂದರ ಓದು ಬೇರೆ ಪ್ರಕಾರಗಳ ಸಾಹಿತ್ಯದ ಓದಿಗಿಂತಾ ಹೆಚ್ಚಿನ ಏಕಾಗ್ರತೆಯನ್ನು, ಏಕಾಂತವನ್ನು, ನಿರ್ಮಲ ಪ್ರಶಾಂತ ಮನಸ್ಥಿತಿಯನ್ನು ಅರ್ಥೈಸುವಿಕೆಯ ನಿಟ್ಟಿನಲ್ಲಿ ದೀರ್ಘಸಮಯವನ್ನು ಬಯಸುತ್ತದೆ.

ಕವಿ, ಪ್ರೇಮಿ, ಹುಚ್ಚ ಇವರು ಮೂವರು ಹೆಚ್ಚು ಕಡಿಮೆ ಒಂದೇ ಮನಸ್ಥಿತಿಯವರೆಂದು ಹಿಂದಿನಿಂದ ಹೇಳುತ್ತಾ ಬಂದಿದ್ದಾರೆ. ಹುಚ್ಚನ ಮನೋವ್ಯಾಪಾರ ಸಾಮಾನ್ಯರಿಗೆ ನಿಲುಕುವಂತಹದ್ದಲ್ಲ. ಅವನು ಭಾವೋತ್ಕರ್ಷದಲ್ಲಿ ಮಾತನಾಡುವಾಗ ಎದುರಿನವರಿಗೆ ಅದರ ಹಿನ್ನೆಲೆ, ತಲೆಬುಡ ಒಂದೂ ತಿಳಿಯುವುದಿಲ್ಲ. ಪ್ರೇಮಿಯೊಬ್ಬನ ಸ್ಥಿತಿಯೂ ಇಂತಹುದೇ ಉತ್ಕಟ ಪ್ರೇಮದ ಅಮಲಿನಲ್ಲಿರುವವನಿಗೆ/ಳಿಗೆ, ಪ್ರಪಂಚದ ತುಂಬೆಲ್ಲಾ ತನ್ನ ಪ್ರೇಮಿಯ ಪ್ರತಿರೂಪವೇ ಕಾಣುತ್ತಿರುತ್ತದೆ. ಹಗಲುಗನಸು ಕಾಣುತ್ತಾ ಲೋಕವನ್ನೇ ಮರೆತು ತಮ್ಮಷ್ಟಕ್ಕೆ ನಗುತ್ತಿರುವುದು ಪ್ರೇಮ ತೀವ್ರತೆಯಲ್ಲಿ ನಡೆಸುವ ಹುಚ್ಚಾಟಗಳು, ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಸಹಜವಾಗಿ ಅದವರಿಗೆ ಒಂದು ರೀತಿಯ ಹುಚ್ಚು ಎನ್ನಿಸುತ್ತದೆ. ಹಾಗೇ ಕವಿ ಕೂಡ. ಭಾವಜೀವಿಯಾದ ತನ್ನ ಭಾವತೀವ್ರತೆಯಲ್ಲಿ ಉಕ್ಕಿದ ಭಾವನೆಗಳನ್ನು ಕವನವಾಗಿಸುವ ಅವನ ಮನಸ್ಥಿತಿಯೂ ಎಲ್ಲರಿಗೂ ಅರ್ಥವಾಗುವಂತಹುದಲ್ಲ.

ಉಕ್ಕುವ ಕಡಲಾಗಿಬಿಟ್ಟೆ
ಬಯಲಿನ ಒಡಲಾಗಿಬಿಟ್ಟೆ
ಈ ಜಗದ ತಾಯಾಗಿಬಿಟ್ಟೆ!
ಎಂಬ ಸಾಲುಗಳನ್ನು ಓದಿದಾಗ ಹೀಗಾಗಲು ವಾಸ್ತವದಲ್ಲಿ ಎಂದಾದರೂ ಸಾಧ್ಯವೇ? ಎನಿಸಿ ಬಿಡುತ್ತದೆ. ಆದರೆ ಕವಿಯ ಭಾವ ಲೋಕದ ತೀವ್ರ ಸ್ಪಂದನೆಯಲ್ಲಿ ಎಲ್ಲವೂ ಸಾಧ್ಯ. ಈ ನಿಟ್ಟಿನಲ್ಲಿ ಕವಿಯೂ ಕೂಡ ಅರ್ಥವಾಗದವನೇ ! ಅವನನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಹೀಗಿರಬಹುದು, ಹಾಗಿರಬಹುದು ಎಂದು ಆರೋಪಿಸಿಕೊಂಡು ಕವನವನ್ನು ಓದುವವರೇ, ಅರ್ಥೈಸಿಕೊಳ್ಳುವವರೇ ಬಹುಮಂದಿ!

ಸಖಿ, ಕವಿ, ಹುಚ್ಚ, ಪ್ರೇಮಿಗಳು ಅರ್ಥವಾಗಲು ಅವರಂತದೇ ಸೂಕ್ಷ್ಮ ಸಂವೇದನೆಗಳುಳ್ಳ ಸಹೃದಯರಿಗೆ ಮಾತ್ರ ಸಾಧ್ಯ ಅಲ್ಲವೇ ? ಅಂತಹ ಸಹೃದಯರು ಇರಲಿ ಬಿಡಲಿ ಕವಿ, ಪ್ರೇಮಿಗಳು ಮಾತ್ರ ಎಲ್ಲ ಕಾಲದಲ್ಲೂ ಇರುತ್ತಾರೆ. ತಮ್ಮ ಸಂವೇವನೆಗಳನ್ನು ತಮ್ಮದೇ ಭಾವಲೋಕದ ಭಾಷೆಯಲ್ಲಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲವೇ ಸಖಿ ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...