ನಿಂತ ನೀರ ಕಲಕಬೇಡಿ

ಪ್ರಿಯ ಸಖಿ,
ಕೆಲವರಿಗೆ ಅನ್ಯರ ಖಾಸಗಿ ಬದುಕಿನ ಒಳ-ಹೊರಗನ್ನು ಕೆದಕುವುದೆಂದರೆ ಬಹುಪ್ರಿಯ. ತಮ್ಮ ಬದುಕಿನ ಬಟ್ಟೆ ಚಿಂದಿಚಿಂದಿಯಾಗಿದ್ದರೂ ಅನ್ಯರ ಬದುಕಿನ ಬಟ್ಟೆಯ ಸಣ್ಣ ತೂತಿನಲ್ಲಿ ಕೈಯಾಡಿಸುವುದು. ಅದನ್ನು ಮತ್ತಷ್ಟು ಹರಿಯುವುದು ಇಂತಹಾ ಕೀಳು ಅಭಿರುಚಿ. ಇದನ್ನು ಕಂಡ ಕವಿ ಎನ್. ಎಸ್. ಲಕ್ಷ್ಮೀನಾರಾಯಣಭಟ್ಟರು ತಮ್ಮ ‘ನಿಂತ ನೀರ ಕಲಕಬೇಡಿ” ಎಂಬ ಕವನದಲ್ಲಿ
ನಿಂತ ನೀರ ಕಲಕಬೇಡಿ ಕಲ್ಲುಗಳೇ
ಹೂದಳಗಳ ಇರಿಯಬೇಡಿ ಮುಳ್ಳುಗಳೇ
ಏನಿದೆಯೋ ನೋವು ಅದಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೇ
ಎನ್ನುತ್ತಾರೆ. ಎಷ್ಟೊಂದು ಮಾರ್ಮಿಕವಾದ ಮಾತಲ್ಲವೇ ಸಖಿ? ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಗಿ ಬದುಕೊಂದು ಇದ್ದೇ ಇರುತ್ತದೆ. ಅಲ್ಲಿ ನೋವು,
ದುಃಖ, ದುಮ್ಮಾನ, ಹೇಳಲಾಗದ ಅನೇಕ ಭಾವಗಳು ಮಡುಗಟ್ಟಿ ನಿಂತಿರುತ್ತವೆ. ಅದನ್ನು ಕಲಕಲು, ಕೆದಕಲು, ಯಾರಿಗೂ ಅಧಿಕಾರ ಇರುವುದಿಲ್ಲ. ಆದರೆ ಕೆಲವು ಅಧಿಕಪ್ರಸಂಗಿಗಳು ಅನ್ಯರ ಖಾಸಗಿ ಬದುಕಿನಲ್ಲಿ ಮೂಗು ತೂರಿಸಿ ಅವರಿಗೆ ಹಿಂಸೆ ನೀಡಿ ತಾವು ವಿಚಿತ್ರ ಸುಖವನ್ನು ಅನುಭವಿಸುತ್ತಾರೆ. ಕವನದ ಕೊನೆಯಲ್ಲಿ ಇಂತಹವರಿಗೆ ಕವಿ
ಯಾವ ಜೀವ ಯಾವ ನೋವಿಗೀಡೋ
ಯಾವ ಭಾವ ನೆಮ್ಮಿ ಅದರ ಪಾಡೋ
ಮಾಡಲು ಬಿಡಿ ತನ್ನ ಯಾತ್ರೆ ತಾನು
ನೀಡಲು ಬಿಡಿ ತನ್ನೊಳಗಿನ ಜೇನು
ಎಂದು ಹೇಳುತ್ತಾರೆ. ಯಾವ ಜೀವಿಗೆ ಅವನ ಅಂತರಾಳದಲ್ಲಿ ಯಾವ ನೋವಿದೆಯೋ? ಯಾವ ಭಾರ್ವೊತ್ಕರ್ಷದಲ್ಲಿ ಅವನು ಬೇಯುತ್ತಿದ್ದಾನೋ ಅವನ ನೋವನ್ನು ಅವನೇ ಅನುಭವಿಸಬೇಕು. ಅದನ್ನು ಕೆದಕಿ ಮತ್ತಷ್ಟು ನೋವು ಕೊಡುವುದರ ಬದಲು ಅವನು ಏಕಾಂತದಲ್ಲಿ ತಾನೇ ನೋವನನುಭವಿಸಿ ಅದರಲ್ಲೇ ಮಾಗಿ ಪರಿಪಕ್ವವಾಗಿ
ನೋವೆಲ್ಲವ ನುಂಗಿ ಸಿಹಿಯಾದ ಜೇನನ್ನು ಕೊಡುವವರೆಗೂ ಕಾಯೋಣ ಎನ್ನುತ್ತಾರೆ ಕವಿ. ನಿಜಕ್ಕೂ ಇದೇ ಸರಿಯಾದ ಮಾರ್ಗವೂ ಅಲ್ಲವೇ ಸಖಿ?
*****

One thought on “0

  1. ಭಾವಗೀತೆಯ ಭಾವ ಅರ್ಥ ತುಂಬಾ ಸೊಗಸಾಗಿದೆ. ಪ್ರತಿಯೊಂದು ಶಬ್ದ ಕೂಡ ಅರ್ಥ ಕೊಡುತ್ತ ಸಾಗುತ್ತೆ. ಹಾಡತ ಇರೋಣ ಅನಿಸುತ್ತೆ. ಲಕ್ಷ್ಮೀನಾರಾಯಣ ಭಟ್ಟರಿಗೆ ಅನಂತ ಧನ್ಯವಾದಗಳು.🙏🙏🙏

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟಾಣಿ ಇರುವೆ
Next post ಎರಡು ಆತ್ಮ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys