ನಿಂತ ನೀರ ಕಲಕಬೇಡಿ

ಪ್ರಿಯ ಸಖಿ,
ಕೆಲವರಿಗೆ ಅನ್ಯರ ಖಾಸಗಿ ಬದುಕಿನ ಒಳ-ಹೊರಗನ್ನು ಕೆದಕುವುದೆಂದರೆ ಬಹುಪ್ರಿಯ. ತಮ್ಮ ಬದುಕಿನ ಬಟ್ಟೆ ಚಿಂದಿಚಿಂದಿಯಾಗಿದ್ದರೂ ಅನ್ಯರ ಬದುಕಿನ ಬಟ್ಟೆಯ ಸಣ್ಣ ತೂತಿನಲ್ಲಿ ಕೈಯಾಡಿಸುವುದು. ಅದನ್ನು ಮತ್ತಷ್ಟು ಹರಿಯುವುದು ಇಂತಹಾ ಕೀಳು ಅಭಿರುಚಿ. ಇದನ್ನು ಕಂಡ ಕವಿ ಎನ್. ಎಸ್. ಲಕ್ಷ್ಮೀನಾರಾಯಣಭಟ್ಟರು ತಮ್ಮ ‘ನಿಂತ ನೀರ ಕಲಕಬೇಡಿ” ಎಂಬ ಕವನದಲ್ಲಿ
ನಿಂತ ನೀರ ಕಲಕಬೇಡಿ ಕಲ್ಲುಗಳೇ
ಹೂದಳಗಳ ಇರಿಯಬೇಡಿ ಮುಳ್ಳುಗಳೇ
ಏನಿದೆಯೋ ನೋವು ಅದಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೇ
ಎನ್ನುತ್ತಾರೆ. ಎಷ್ಟೊಂದು ಮಾರ್ಮಿಕವಾದ ಮಾತಲ್ಲವೇ ಸಖಿ? ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಗಿ ಬದುಕೊಂದು ಇದ್ದೇ ಇರುತ್ತದೆ. ಅಲ್ಲಿ ನೋವು,
ದುಃಖ, ದುಮ್ಮಾನ, ಹೇಳಲಾಗದ ಅನೇಕ ಭಾವಗಳು ಮಡುಗಟ್ಟಿ ನಿಂತಿರುತ್ತವೆ. ಅದನ್ನು ಕಲಕಲು, ಕೆದಕಲು, ಯಾರಿಗೂ ಅಧಿಕಾರ ಇರುವುದಿಲ್ಲ. ಆದರೆ ಕೆಲವು ಅಧಿಕಪ್ರಸಂಗಿಗಳು ಅನ್ಯರ ಖಾಸಗಿ ಬದುಕಿನಲ್ಲಿ ಮೂಗು ತೂರಿಸಿ ಅವರಿಗೆ ಹಿಂಸೆ ನೀಡಿ ತಾವು ವಿಚಿತ್ರ ಸುಖವನ್ನು ಅನುಭವಿಸುತ್ತಾರೆ. ಕವನದ ಕೊನೆಯಲ್ಲಿ ಇಂತಹವರಿಗೆ ಕವಿ
ಯಾವ ಜೀವ ಯಾವ ನೋವಿಗೀಡೋ
ಯಾವ ಭಾವ ನೆಮ್ಮಿ ಅದರ ಪಾಡೋ
ಮಾಡಲು ಬಿಡಿ ತನ್ನ ಯಾತ್ರೆ ತಾನು
ನೀಡಲು ಬಿಡಿ ತನ್ನೊಳಗಿನ ಜೇನು
ಎಂದು ಹೇಳುತ್ತಾರೆ. ಯಾವ ಜೀವಿಗೆ ಅವನ ಅಂತರಾಳದಲ್ಲಿ ಯಾವ ನೋವಿದೆಯೋ? ಯಾವ ಭಾರ್ವೊತ್ಕರ್ಷದಲ್ಲಿ ಅವನು ಬೇಯುತ್ತಿದ್ದಾನೋ ಅವನ ನೋವನ್ನು ಅವನೇ ಅನುಭವಿಸಬೇಕು. ಅದನ್ನು ಕೆದಕಿ ಮತ್ತಷ್ಟು ನೋವು ಕೊಡುವುದರ ಬದಲು ಅವನು ಏಕಾಂತದಲ್ಲಿ ತಾನೇ ನೋವನನುಭವಿಸಿ ಅದರಲ್ಲೇ ಮಾಗಿ ಪರಿಪಕ್ವವಾಗಿ
ನೋವೆಲ್ಲವ ನುಂಗಿ ಸಿಹಿಯಾದ ಜೇನನ್ನು ಕೊಡುವವರೆಗೂ ಕಾಯೋಣ ಎನ್ನುತ್ತಾರೆ ಕವಿ. ನಿಜಕ್ಕೂ ಇದೇ ಸರಿಯಾದ ಮಾರ್ಗವೂ ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟಾಣಿ ಇರುವೆ
Next post ಎರಡು ಆತ್ಮ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…