Home / ಕವನ / ಕವಿತೆ / ನಳಿನಾಕ್ಷಿಯ ಕಂಡೆ ನಾ

ನಳಿನಾಕ್ಷಿಯ ಕಂಡೆ ನಾ

ನಳಿನಾಕ್ಷಿಯ ಕಂಡೆ ನಾ
ತಿಳವಳ್ಳಿಯ ಕಳಿಯುಳ್ಳ ಮೋಜಿನ್ಹೆಣ್ಣ
ಹೊಳಿವ ಚಂದುಟಿ ಎಳಿವ ಮುಡಿ
ಥಳ ಥಳ ಪದಕ ಒಪ್ಪಿನ ಜಾಣೆ
ತನ್ನ ಕಲಶ ಕುಚಯುಗದಲಿ
ಸರಿಯ ಗರತಿಯರೋಳು ಮೇಲ್ ||೧||

ಕುಸುಮಶರನ ರಾಣಿಯೋ
ಕೊರಳೆಸೆವ ಪಲ್ಲವ ಪಾಣಿಯೋ
ಬಿಸಿಜಿಕೊರಕ ಸ್ಥಾನವೋ
ಯೋಚಿಸಿ ರೂಪ ಮಧುರ ಪಲ್ಲವ ಪಾಣಿಯೋ
ವಸುಧಿಯೊಳು ಕಡುಜಾಣ ರೀತಿಯ
ಕುಶಲ ರತಿಯಲೆ ಕೂಡಿದ್ಹೇಳ್
ಅಸು ನೀಗದೆ ಬಿಡರು ಎಮ್ಮನು
ಮಸಣಿಸಿ ಮುಂದೆ ಹೋಗಲೊಲ್ಲದು ||೨||

ಸರಳ ಬೈತಲಿ ಮರನ ಸಿಂಗಾಡಿಯು
ತೀಡಿ ಪೊರ್ಬಿನ ಕೊರಳೊಳ್
ಹಾರ ಮುತ್ತಿನ ರತ್ನಗಳಿಂದ ಮೆರೆಯುತಿಹುದು ಒಡ್ಡ್ಯಾಣ
ತರುಣಿ ಕರ್ಣದೊಳಿಟ್ಟು ಆಭರಣ
ಅಪರಿಮಿತ ಇನ್ನೆಷ್ಟು ಹೇಳಲಿ
ನೆರೆದ ಜನರ್ಬಾಯ್ದೆರೆವರೀಕೆಯ
ತುರುಬ ಚಲ್ವಿಕೆಗೆ ಮರುಳಗೊಂಡರು ||೩||

ಹವಳದುಟಿಯ ಬಾವಲಿಯು
ಕುವಲನೇತ್ರ ದಿವಿಜಲೋಕದ ಸ್ತ್ರೀ
ಅಯ್ಯಯ್ಯೋ ನವಮೋಹನದ ನಿಧಿಯು
ಭವದ ಅಜನ ಪಟ್ಟದ ರಾಣಿಯು
ಶಿವಶಿವಾ ಹೆಣ್ಣಿವಳ ರೂಪಕ
ಅವನೀಪತಿ ಕಡೆಯಿಲ್ಲ ದೇವರು
ಪವನಸುತ ಘನರೂಪ ಮಾರುತಿ
ಅವನ ಬಲದಿಂದುಳಿದೆನು ಜವದಿ ||೪||

****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...