ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ

ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ
ನನ್ನೆಲ್ಲ ಕೊರಗಿಗೂ ಕೊನೆಯ ತಂದ.

ಹರಿಯ ತಲೆಮೇಲಿತ್ತು ನವಿಲಿನ ಕಿರೀಟ
ಹೊಳೆವ ಪೀತಾಂಬರ ಮೈಯ ಮೇಲೆ,
ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ
ಕಸ್ತೂರಿ ತಿಲಕ ಹಣೆಯ ಮೇಲೆ

ರಾಧೆ ನಾ ನಾಚಿದೆ ಕರಗಿ ನೀರಾದೆ
ನಲ್ಲ ತಾನೇ ಬಂದ ನನ್ನ ಮನೆಗೆ
ಕನಕಾಂಬರೀ ಬಣ್ಣ ಪತ್ತಲವ ಉಟ್ಟೆ
ಕಪ್ಪು ರವಿಕೆಯ ತೊಟ್ಟು ಬಂದೆ ಹೊರಗೆ

ಆಹ ಎಂಥ ಚೆಲುವ ಕೃಷ್ಣ ಗಿರಿಧರನು
ಎಂಥ ಮೋಹನನೇ ಯಶೋದೆ ಮಗನು
ಇಂಥ ನಲ್ಲ ನನಗೆ ಹೇಗೆ ದೊರಕಿದನೇ
ಬೇರೆ ಯಾರೇ ಇವನ ಸಮನಿರುವನು

ಬಾಚಿದ ಕಣ್ಣಲ್ಲೆ ಚಾಚಿ ತನ್ನಧರವ
ನಾಚುತ್ತಿದ್ದ ನನ್ನ ಸೆಳೆದೆ ಬಿಟ್ಟ
ತೋಚಲಿಲ್ಲ ಏನೂ, ದಿಗ್ಭ್ರಾಂತಿ ಸಂಭ್ರಮ
ಆಚೀಚೆ ಜನ ನೋಡಿ ಏನಂದರೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೭
Next post ಲಿಂಗಮ್ಮನ ವಚನಗಳು – ೧೦೧

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys