Home / ಕವನ / ಕವಿತೆ / ಏನೊ ಏನೋ ಕೇಳಿದಂಗಾಯ್ತು

ಏನೊ ಏನೋ ಕೇಳಿದಂಗಾಯ್ತು

ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ
ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು

ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು
ಯಾವುದೋ ಲೋಕದಾಗ ಸುತ್ತಿದಂಗಾಯ್ತು
ಯಾವ್ದೊ ಸೀಮೇ ಸೇರಿದಂಗಾಯ್ತು

ಯಾವುದೋ ಜೇನು ಕುಡಿದಂಗಾಯ್ತು
ಯಾವ್ದೊ ಮಾತು ಕೇಳಿದಂಗಾಯ್ತು
ಗೋಪಾಲಕೃಷ್ಣನ ಕೊಳಲಿನ ಗಾನಾ | ಸರಸೋತಮ್ಮನ ವೀಣೆ ಗಾನಾ
ನಾರದ ರಾಯರ ತಂಬೂರಿ ಗಾನಾ | ದೇವಕನ್ನೇರ ಇಂಪಾದ ಗಾನಾ

ಏನೋ ಏನೋ ಕೇಳಿದಂಗಾಯ್ತು | ಹಾಲು ಬೆಲ್ಲ ಕುಡಿದಂಗಾಯ್ತು
ಏನೋ ಏನೋ ಕಂಡಂಗಾಯ್ತು | ಸವಿಸವಿ ಊಟ ಉಂಡಂಗಾಯ್ತು

ಗಂಗಿ ಉತ್ಯುಕ್ಕಿ ಹರದಂಗಾಯ್ತು
ತುಂಬಿ ತುಂತುಂಬಿ ಹಾಡಿದಂಗಾಯ್ತು
ಹೂವೂ ಗಮಗಮ ನಾರಿದಂಗಾಯ್ತು
ಸೀಯಾದ ಹಣ್ಣು ತಿಂದಂಗಾಯ್ತು

ಮಕ್ಳು ಸಕ್ರಿ ನಕ್ಕಂಗಾಯ್ತು | ಚಂದ್ರ ನಕ್ಕು ನಗಿಸಿದಂಗಾಯ್ತು
ಮೈಯಾಗೇನೋ ಹೊಕ್ಕಂಗಾಯ್ತು | ಇಮ್ಮಡಿ ಶಕ್ತಿ ಬಂದಂಗಾಯ್ತು

ಎಲ್ಲೆಲ್ಲೂ ರಸ ತುಂಬಿದಂಗಾಯ್ತು | ಕಸಾ ಕೂಡಾ ರಸವೆ ಆಯ್ತು
ಕಲ್ಲಿನ್ಯಾಗ ಸೆಲೇ ಉಕ್ಕಿದಂಗಾಯ್ತು | ಹೆಣದಾಗ ಜೀವ ಬಂದಂಗಾಯ್ತು

ಬೆಕ್ಕು ಕಣ್ಣು ಹೊಡೆದಂಗಾಯ್ತು| ಹೂವು ಹಾಡು ಹೇಳಿದಂಗಾಯ್ತು
ಎಲೆಗಳೇನೋ ನುಡಿದಂಗಾಯ್ತು| ಹುಲ್ಲೆ ಪಿಸುಮಾತಾಡಿದಂಗಾಯ್ತು

ಸೃಷ್ಟಿ ಸೆಡವು ಬಿಟ್ಟಂಗಾಯ್ತು| ಕೆಟ್ಟದ್ದಲ್ಲ ಸುಟ್ಟಂಗಾಯ್ತು
ಕಂಡೂ ಕಂಡೂ ತೋರ್ಸಾಕಾದ್ದು | ಕೇಳಿ ಕೇಳೀ ಹೇಳಾಕಾಗ್ದು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...