Home / ಕವನ / ಕವಿತೆ / ಏನೊ ಏನೋ ಕೇಳಿದಂಗಾಯ್ತು

ಏನೊ ಏನೋ ಕೇಳಿದಂಗಾಯ್ತು

ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ
ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು

ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು
ಯಾವುದೋ ಲೋಕದಾಗ ಸುತ್ತಿದಂಗಾಯ್ತು
ಯಾವ್ದೊ ಸೀಮೇ ಸೇರಿದಂಗಾಯ್ತು

ಯಾವುದೋ ಜೇನು ಕುಡಿದಂಗಾಯ್ತು
ಯಾವ್ದೊ ಮಾತು ಕೇಳಿದಂಗಾಯ್ತು
ಗೋಪಾಲಕೃಷ್ಣನ ಕೊಳಲಿನ ಗಾನಾ | ಸರಸೋತಮ್ಮನ ವೀಣೆ ಗಾನಾ
ನಾರದ ರಾಯರ ತಂಬೂರಿ ಗಾನಾ | ದೇವಕನ್ನೇರ ಇಂಪಾದ ಗಾನಾ

ಏನೋ ಏನೋ ಕೇಳಿದಂಗಾಯ್ತು | ಹಾಲು ಬೆಲ್ಲ ಕುಡಿದಂಗಾಯ್ತು
ಏನೋ ಏನೋ ಕಂಡಂಗಾಯ್ತು | ಸವಿಸವಿ ಊಟ ಉಂಡಂಗಾಯ್ತು

ಗಂಗಿ ಉತ್ಯುಕ್ಕಿ ಹರದಂಗಾಯ್ತು
ತುಂಬಿ ತುಂತುಂಬಿ ಹಾಡಿದಂಗಾಯ್ತು
ಹೂವೂ ಗಮಗಮ ನಾರಿದಂಗಾಯ್ತು
ಸೀಯಾದ ಹಣ್ಣು ತಿಂದಂಗಾಯ್ತು

ಮಕ್ಳು ಸಕ್ರಿ ನಕ್ಕಂಗಾಯ್ತು | ಚಂದ್ರ ನಕ್ಕು ನಗಿಸಿದಂಗಾಯ್ತು
ಮೈಯಾಗೇನೋ ಹೊಕ್ಕಂಗಾಯ್ತು | ಇಮ್ಮಡಿ ಶಕ್ತಿ ಬಂದಂಗಾಯ್ತು

ಎಲ್ಲೆಲ್ಲೂ ರಸ ತುಂಬಿದಂಗಾಯ್ತು | ಕಸಾ ಕೂಡಾ ರಸವೆ ಆಯ್ತು
ಕಲ್ಲಿನ್ಯಾಗ ಸೆಲೇ ಉಕ್ಕಿದಂಗಾಯ್ತು | ಹೆಣದಾಗ ಜೀವ ಬಂದಂಗಾಯ್ತು

ಬೆಕ್ಕು ಕಣ್ಣು ಹೊಡೆದಂಗಾಯ್ತು| ಹೂವು ಹಾಡು ಹೇಳಿದಂಗಾಯ್ತು
ಎಲೆಗಳೇನೋ ನುಡಿದಂಗಾಯ್ತು| ಹುಲ್ಲೆ ಪಿಸುಮಾತಾಡಿದಂಗಾಯ್ತು

ಸೃಷ್ಟಿ ಸೆಡವು ಬಿಟ್ಟಂಗಾಯ್ತು| ಕೆಟ್ಟದ್ದಲ್ಲ ಸುಟ್ಟಂಗಾಯ್ತು
ಕಂಡೂ ಕಂಡೂ ತೋರ್ಸಾಕಾದ್ದು | ಕೇಳಿ ಕೇಳೀ ಹೇಳಾಕಾಗ್ದು

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...