Home / ಲೇಖನ / ಇತರೆ / ಸ್ವಾಭಿಮಾನ- ರೊಟ್ಟಿಯ ಹೊಡೆದಾಟ – ಗಂಡನ ಶೂರತನ

ಸ್ವಾಭಿಮಾನ- ರೊಟ್ಟಿಯ ಹೊಡೆದಾಟ – ಗಂಡನ ಶೂರತನ

ತಂದೆಗೆ ತನ್ನ ಮಕ್ಕಳು ಬಲು ಚಂದ! ಚಿತ್ರಕಾರನಿಗೆ ತನ್ನ ಚಿತ್ರಗಳು ಬಹಳ ಸುಂದರ! ಕವಿಗೆ ತನ್ನ ಕವಿತೆಗಳೆ ಬಲು ಪ್ರಿಯ. ಗ್ರಂಥಕರ್ತನಿಗೆ ತನ್ನ ಗ್ರಂಥಗಳು ಮೇಲಾದವು. ಹಾಗೆಯೇ ತಂಗಾಳಿಯ ಅಭಿಮಾನ ನನಗೆ ಬಹಳ. ವರ್ತಮಾನಪತ್ರ ಬಂದ ಕೂಡಲೆ ಪ್ರಥಮತಃ ಹುಡುಕುವದು “ತಂಗಾಳಿ”ಯ ಕಾಲಮ್’! ಓದುತ್ವ ನಗುವೆ, ನಗುತ್ತ ಓದುವೆ ! ಒಂದೆರಡು ಸಾರೆಯಲ್ಲ, ಅನೇಕ ಸಾರೆ ತಿರುತಿರುಗಿ ಓದುತ್ತೇನೆ. ನನಗೆ ವರ್ತಮಾನಪತ್ರವೆಂದರೆ ತಂಗಾಳಿ ! ತಂಗಾಳಿಯೆಂದರೆ ವರ್ತಮಾನಪತ್ರ !!
****
ಸಿಟ್ಟಿನ ಕೈಯಲ್ಲಿ ಬುದ್ದಿ ಕೊಡಬಾರದು. ಸಿಟ್ಟಿನಲ್ಲಿದ್ದ ಮನುಷ್ಯನಿಗೆ ತನ್ನ ಕೈಯಲ್ಲಿ ಅಥವಾ ಎದುರಿಗೆ ಏನಿರುವದೆಂಬ ಅರಿವೇ ಇರುವದಿಲ್ಲ, ಕೈಗೆ ಸಿಕ್ಕದ್ದನ್ನು ಬೀಸಿ ಒಗೆಯುವನು, ಕೇವಲ ಕಲ್ಲು, ಕಟ್ಟಿಗೆ ಸಿಕ್ಕರೆ ವಿರೋಧಿಯ ಪುಣ್ಯ! ಯಾಕಂದರೆ ಬಡಿಗೆ-ಕಲ್ಲುಗಳು ಮನುಷ್ಯನಿಂದ ನಿತ್ಯ ಬಡಿದಾಟದಲ್ಲಿ ಉಪಯೋಗಿಸಲ್ಪಡುವ ಸಾಮಾನ್ಯ ಆಯುಧಗಳು !
  * * * *
ಜೇಗ್ರೆಡ್ ಜೈಲಿನಲ್ಲಿ ಕೈದಿಗಳಿಗೆ ಕಲ್ಲಿನಷ್ಟು ಬಿರುಸಾದ ರೊಟ್ಟಿಗಳನ್ನು ಕೊಡುತ್ತಿದ್ದರು. ಕೈದಿಗಳು ತಕರಾರು ಮಾಡಿದರೂ ಕೇಳಲಿಲ್ಲ. ಒಮ್ಮೆ ಕೈದಿಗಳು ಊಟಕ್ಕೆ ಕೂತಾಗ ಅವರಿಗೆ ತೀರ ಬಿರಸು ರೊಟ್ಟಿಗಳನ್ನು ಕೊಟ್ಟರು. ಕೈದಿಗಳು ರೊಚ್ಚಿಗೆದ್ದು ರೊಟ್ಟಿಗಳನ್ನೇ ಬೀಸಿ ಅಧಿಕಾರಿಗಳ ಕಡೆಗೆ ಎಸೆದರು ! “ಗಾಯ ಮಾಡುವ ಉದ್ದೇಶದಿಂದ ಬಿರಸು ಪದಾರ್ಥಗಳನ್ನು ಒಗೆದರು ” ಎಂದು ಅಧಿಕಾರಿಗಳು ಕೈದಿಗಳ ಮೇಲೆ ಆರೋಪ ಇಡುವಂತಿದ್ದಿಲ್ಲ. ಯಾಕಂದರೆ ರೊಟ್ಟಿಗಳು ಬಿರಸು ಇದ್ದವೆಂದು ತಾವೇ ಒಪ್ಪಿದಂತಾಗುತ್ತಿತ್ತು.  ರೊಟ್ಟಿಯಿಂದ ಹೊಡೆದ ಈ ಪ್ರಸಂಗವೇನೂ ಹೊಸದಲ್ಲ. ನಮ್ಮಲ್ಲಿ ಅತ್ತೆಯು ಸಿಟ್ಟಾಗಿ ಸೋಸಿಗೆ ರೊಟ್ಟಿಯಿಂದ ಹೊಡೆದದ್ದನ್ನು ಕೇಳಿರಬಹುದು. ಅಥವಾ ಸೊಸಿಯು ಅತ್ತೆಗೆ ಹೊಡೆದಿರಬಹುದು. ಗಂಡನು ಹೆಂಡತಿಗಾಗಲಿ ಅಥವಾ ದಿಟ್ಟ ಹೆಂಡತಿಯು ಗಂಡನಿಗಾಗಲಿ ಹೊಡೆದಿರಬಹುದು !
  * * * *
ಒಮ್ಮೆ ಹೆಂಡತಿಯನ್ನು ಹೊಡೆದ ಆರೋಪದ ಮೇಲೆ ಗಂಡನನ್ನು ಕೋರ್ಟಿಗೆ ಎಳೆದರು. ಹೊಡೆವ ಕಾರಣವೇನೆಂದು ನ್ಯಾಯಾಧೀಶನು ಆರೋಪಿಯ(ಗಂಡನ)ನ್ನು ವಿಚಾರಿಸಿದನು. ಆಗ ಗಂಡನು ಸಮರ್ಥಿಸಿಕೊಂಡ : ‘ನನ್ನ ಹೆಂಡತಿಯು ನನ್ನನ್ನು ಬಹಳವಾಗಿ ಪೀಡಿಸುತ್ತಿದ್ದಳು. ಆದರೆ ಸೇಡು ತೀರಿಸಿಕೊಳ್ಳುವ ಸಮಯವು ಇಲ್ಲಿಯ ವರೆಗೆ ದೊರೆತಿದ್ದಿಲ್ಲ. ಇಂದು ಅವಳ ಕೈಯಲ್ಲಿ ಏನೂ ಇದ್ದಿಲ್ಲ. ಅವಳ ಸಮೀಪದಲ್ಲಿ ಬಡಿಗೆ, ಕಲ್ಲು, ಮುಂತಾದ ಯಾವ ವಸ್ತುವೂ ಇದ್ದಿಲ್ಲ. ಅಕಸ್ಮಾತ್ ನನ್ನ ಕಡೆಗೆ ಬೆನ್ನು ಮಾಡಿ ನಿಂತಿದ್ದಳು. ನಾನು ಅರಿವೆ ತೊಟ್ಟು ಕೊಂಡು ಹೊರಗೆ ಹೋಗುವ ಸಿದ್ಧತೆಯಲ್ಲಿದ್ದೆನು. ಮುಂದಿನ ಬಾಗಿಲು ತೆರೆದಿತ್ತು. ಇದೇ ಸಮಯವೆಂದು ಸಾಧಿಸಿ ಬೆನ್ನ ಮೇಲೆ ಒಂದು ಏಟು ಕೊಟ್ಟವನೇ ಹೊರಗೆ ಓಡಿ ಹೋದೆ.”  ಮತ್ತೊಮ್ಮೆ ಒಬ್ಬ ಕಳ್ಳನು ಒಂದು ಮನೆಯನ್ನು ಹೊಕ್ಕನು. ಮನೆಯ ಯಜಮಾನನು ಮನೆಯಲ್ಲಿದ್ದಿಲ್ಲ. ಅವನ ಹೆಂಡತಿಯು ಕಳ್ಳನನ್ನು ನೋಡಿ, “ಸುಮ್ಮನೆ ಹೊರಗೆ ಹೋಗುವೆಯೋ ಅಥವಾ ನನ್ನ ಗಂಡನನ್ನು ಕರೆಯಲೋ ? ” ಎಂದು ಅಂದಳು. ಆಗ ಕಳ್ಳನು ಅಂದ: ” ನಿನ್ನ ಗಂಡನು ಎಷ್ಟು ಶೂರನಿರುವನೆಂಬದು ನನಗೆ ಗೊತ್ತಿದೆ. ನಿನ್ನೆ ನಾನು ಬಂದಾಗ ಅವನು ಮನೆಯಲ್ಲಿದ್ದನು, ನೀನು ಮನೆಯಲ್ಲಿದ್ದಿಲ್ಲ. ಆಗ ನನಗೆ ‘ಹೊರಗೆ ಹೋಗುವಿಯೋ ಅಥವಾ ನನ್ನ ಹೆಂಡತಿಯನ್ನು ಕರೆಯಲೋ’ ಎಂದು  ಆಂದಿದ್ದನು.
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...