Home / ಲೇಖನ / ಇತರೆ / ಸ್ವಾಭಿಮಾನ- ರೊಟ್ಟಿಯ ಹೊಡೆದಾಟ – ಗಂಡನ ಶೂರತನ

ಸ್ವಾಭಿಮಾನ- ರೊಟ್ಟಿಯ ಹೊಡೆದಾಟ – ಗಂಡನ ಶೂರತನ

ತಂದೆಗೆ ತನ್ನ ಮಕ್ಕಳು ಬಲು ಚಂದ! ಚಿತ್ರಕಾರನಿಗೆ ತನ್ನ ಚಿತ್ರಗಳು ಬಹಳ ಸುಂದರ! ಕವಿಗೆ ತನ್ನ ಕವಿತೆಗಳೆ ಬಲು ಪ್ರಿಯ. ಗ್ರಂಥಕರ್ತನಿಗೆ ತನ್ನ ಗ್ರಂಥಗಳು ಮೇಲಾದವು. ಹಾಗೆಯೇ ತಂಗಾಳಿಯ ಅಭಿಮಾನ ನನಗೆ ಬಹಳ. ವರ್ತಮಾನಪತ್ರ ಬಂದ ಕೂಡಲೆ ಪ್ರಥಮತಃ ಹುಡುಕುವದು “ತಂಗಾಳಿ”ಯ ಕಾಲಮ್’! ಓದುತ್ವ ನಗುವೆ, ನಗುತ್ತ ಓದುವೆ ! ಒಂದೆರಡು ಸಾರೆಯಲ್ಲ, ಅನೇಕ ಸಾರೆ ತಿರುತಿರುಗಿ ಓದುತ್ತೇನೆ. ನನಗೆ ವರ್ತಮಾನಪತ್ರವೆಂದರೆ ತಂಗಾಳಿ ! ತಂಗಾಳಿಯೆಂದರೆ ವರ್ತಮಾನಪತ್ರ !!
****
ಸಿಟ್ಟಿನ ಕೈಯಲ್ಲಿ ಬುದ್ದಿ ಕೊಡಬಾರದು. ಸಿಟ್ಟಿನಲ್ಲಿದ್ದ ಮನುಷ್ಯನಿಗೆ ತನ್ನ ಕೈಯಲ್ಲಿ ಅಥವಾ ಎದುರಿಗೆ ಏನಿರುವದೆಂಬ ಅರಿವೇ ಇರುವದಿಲ್ಲ, ಕೈಗೆ ಸಿಕ್ಕದ್ದನ್ನು ಬೀಸಿ ಒಗೆಯುವನು, ಕೇವಲ ಕಲ್ಲು, ಕಟ್ಟಿಗೆ ಸಿಕ್ಕರೆ ವಿರೋಧಿಯ ಪುಣ್ಯ! ಯಾಕಂದರೆ ಬಡಿಗೆ-ಕಲ್ಲುಗಳು ಮನುಷ್ಯನಿಂದ ನಿತ್ಯ ಬಡಿದಾಟದಲ್ಲಿ ಉಪಯೋಗಿಸಲ್ಪಡುವ ಸಾಮಾನ್ಯ ಆಯುಧಗಳು !
  * * * *
ಜೇಗ್ರೆಡ್ ಜೈಲಿನಲ್ಲಿ ಕೈದಿಗಳಿಗೆ ಕಲ್ಲಿನಷ್ಟು ಬಿರುಸಾದ ರೊಟ್ಟಿಗಳನ್ನು ಕೊಡುತ್ತಿದ್ದರು. ಕೈದಿಗಳು ತಕರಾರು ಮಾಡಿದರೂ ಕೇಳಲಿಲ್ಲ. ಒಮ್ಮೆ ಕೈದಿಗಳು ಊಟಕ್ಕೆ ಕೂತಾಗ ಅವರಿಗೆ ತೀರ ಬಿರಸು ರೊಟ್ಟಿಗಳನ್ನು ಕೊಟ್ಟರು. ಕೈದಿಗಳು ರೊಚ್ಚಿಗೆದ್ದು ರೊಟ್ಟಿಗಳನ್ನೇ ಬೀಸಿ ಅಧಿಕಾರಿಗಳ ಕಡೆಗೆ ಎಸೆದರು ! “ಗಾಯ ಮಾಡುವ ಉದ್ದೇಶದಿಂದ ಬಿರಸು ಪದಾರ್ಥಗಳನ್ನು ಒಗೆದರು ” ಎಂದು ಅಧಿಕಾರಿಗಳು ಕೈದಿಗಳ ಮೇಲೆ ಆರೋಪ ಇಡುವಂತಿದ್ದಿಲ್ಲ. ಯಾಕಂದರೆ ರೊಟ್ಟಿಗಳು ಬಿರಸು ಇದ್ದವೆಂದು ತಾವೇ ಒಪ್ಪಿದಂತಾಗುತ್ತಿತ್ತು.  ರೊಟ್ಟಿಯಿಂದ ಹೊಡೆದ ಈ ಪ್ರಸಂಗವೇನೂ ಹೊಸದಲ್ಲ. ನಮ್ಮಲ್ಲಿ ಅತ್ತೆಯು ಸಿಟ್ಟಾಗಿ ಸೋಸಿಗೆ ರೊಟ್ಟಿಯಿಂದ ಹೊಡೆದದ್ದನ್ನು ಕೇಳಿರಬಹುದು. ಅಥವಾ ಸೊಸಿಯು ಅತ್ತೆಗೆ ಹೊಡೆದಿರಬಹುದು. ಗಂಡನು ಹೆಂಡತಿಗಾಗಲಿ ಅಥವಾ ದಿಟ್ಟ ಹೆಂಡತಿಯು ಗಂಡನಿಗಾಗಲಿ ಹೊಡೆದಿರಬಹುದು !
  * * * *
ಒಮ್ಮೆ ಹೆಂಡತಿಯನ್ನು ಹೊಡೆದ ಆರೋಪದ ಮೇಲೆ ಗಂಡನನ್ನು ಕೋರ್ಟಿಗೆ ಎಳೆದರು. ಹೊಡೆವ ಕಾರಣವೇನೆಂದು ನ್ಯಾಯಾಧೀಶನು ಆರೋಪಿಯ(ಗಂಡನ)ನ್ನು ವಿಚಾರಿಸಿದನು. ಆಗ ಗಂಡನು ಸಮರ್ಥಿಸಿಕೊಂಡ : ‘ನನ್ನ ಹೆಂಡತಿಯು ನನ್ನನ್ನು ಬಹಳವಾಗಿ ಪೀಡಿಸುತ್ತಿದ್ದಳು. ಆದರೆ ಸೇಡು ತೀರಿಸಿಕೊಳ್ಳುವ ಸಮಯವು ಇಲ್ಲಿಯ ವರೆಗೆ ದೊರೆತಿದ್ದಿಲ್ಲ. ಇಂದು ಅವಳ ಕೈಯಲ್ಲಿ ಏನೂ ಇದ್ದಿಲ್ಲ. ಅವಳ ಸಮೀಪದಲ್ಲಿ ಬಡಿಗೆ, ಕಲ್ಲು, ಮುಂತಾದ ಯಾವ ವಸ್ತುವೂ ಇದ್ದಿಲ್ಲ. ಅಕಸ್ಮಾತ್ ನನ್ನ ಕಡೆಗೆ ಬೆನ್ನು ಮಾಡಿ ನಿಂತಿದ್ದಳು. ನಾನು ಅರಿವೆ ತೊಟ್ಟು ಕೊಂಡು ಹೊರಗೆ ಹೋಗುವ ಸಿದ್ಧತೆಯಲ್ಲಿದ್ದೆನು. ಮುಂದಿನ ಬಾಗಿಲು ತೆರೆದಿತ್ತು. ಇದೇ ಸಮಯವೆಂದು ಸಾಧಿಸಿ ಬೆನ್ನ ಮೇಲೆ ಒಂದು ಏಟು ಕೊಟ್ಟವನೇ ಹೊರಗೆ ಓಡಿ ಹೋದೆ.”  ಮತ್ತೊಮ್ಮೆ ಒಬ್ಬ ಕಳ್ಳನು ಒಂದು ಮನೆಯನ್ನು ಹೊಕ್ಕನು. ಮನೆಯ ಯಜಮಾನನು ಮನೆಯಲ್ಲಿದ್ದಿಲ್ಲ. ಅವನ ಹೆಂಡತಿಯು ಕಳ್ಳನನ್ನು ನೋಡಿ, “ಸುಮ್ಮನೆ ಹೊರಗೆ ಹೋಗುವೆಯೋ ಅಥವಾ ನನ್ನ ಗಂಡನನ್ನು ಕರೆಯಲೋ ? ” ಎಂದು ಅಂದಳು. ಆಗ ಕಳ್ಳನು ಅಂದ: ” ನಿನ್ನ ಗಂಡನು ಎಷ್ಟು ಶೂರನಿರುವನೆಂಬದು ನನಗೆ ಗೊತ್ತಿದೆ. ನಿನ್ನೆ ನಾನು ಬಂದಾಗ ಅವನು ಮನೆಯಲ್ಲಿದ್ದನು, ನೀನು ಮನೆಯಲ್ಲಿದ್ದಿಲ್ಲ. ಆಗ ನನಗೆ ‘ಹೊರಗೆ ಹೋಗುವಿಯೋ ಅಥವಾ ನನ್ನ ಹೆಂಡತಿಯನ್ನು ಕರೆಯಲೋ’ ಎಂದು  ಆಂದಿದ್ದನು.
*****
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...