Home / ಬಾಲ ಚಿಲುಮೆ / ಕಥೆ / ಒದಿದ ದಡ್ಡರ ಕಥೆ

ಒದಿದ ದಡ್ಡರ ಕಥೆ

ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರಲ್ಲಿ ಮೂವರು ಶಾಸ್ತ್ರವನ್ನು ಚೆನ್ನಾಗಿ ಓದಿದವರು. ಆದರೂ ಬುದ್ಧಿಯಿಲ್ಲದವರು.  ಉಳಿದ ನಾಲ್ಕನೆಯವನು ಬುದ್ಧಿವಂತನಾದರೂ ಶಾಸ್ತ್ರವನ್ನು ಅರಿಯದವನು. ಅವರು ನಾಲ್ವರೂ ಒಂದು ದಿನ ಒಂದು ಕಡೆ ಸೇರಿ ಯೋಚಿಸಿದರು: “ವಿದ್ಯೆಯನ್ನು ಕಲಿತುದಕ್ಕೆ ದೇಶಾಂತರಗಳಿಗೆ ಹೋಗಿ ನರಪತಿಗಳನ್ನು ಸಂತೋಷಪಡಿಸಿ ಬೇಕಾದ ಹಾಗೆ ಹಣವನ್ನು ಸಂಪಾದಿಸಬೇಕು. ಇಲ್ಲದಿದ್ದರೆ ಏನು ಫಲ?” ಎಂದು ಒಬ್ಬನು ಹೇಳಿದನು. ಹಾಗೇ ಆಗಲೆಂದು ಎಲ್ಲರೂ ದೇಶಾಟನಕ್ಕೆ (ದೇಶಗಳನ್ನು ತಿರುಗುವುದು) ಹೊರಟರು.
ಅಷ್ಟು ದೂರ ಹೋದಮೇಲೆ ಅವರೆಲ್ಲೆಲ್ಲಾ ದೊಡ್ಡವನು “ನಮ್ಮಲ್ಲಿ ಇವನು ಬುದ್ಧಿವಂತನಾದರೂ ವಿದ್ಯಾವಂತನಲ್ಲ. ವಿದ್ಯೆಯಿಲ್ಲದೆ ರಾಜರನ್ನು ಮೆಚ್ಚಿಸುವುದೆಂತು? ನಾನು ಸಂಪಾದಿಸುವುದರಲ್ಲಿ ಇವನಿಗೆ ನಾನು ಪಾಲು ಕೊಡುವುದಿಲ್ಲ. ಅದರಿಂದ, ಇವನು ಬೇಕಾದರೆ ಈಗಲೇ ಮನೆಗೆ ಹೋಗಲಿ” ಎಂದನು. ಎರಡನೆಯವನು “ನಿಜ ಅಯ್ಯಾ ಸುಬುದ್ಧಿ, ನೀನು ಹಿ೦ತಿರುಗು. ನೀನು ವಿದ್ಯಾವಂತನಲ್ಲ.” ಎಂದನು. ಮೂರನೆಯವನು “ಎಲಾ, ಇದು ಸರಿಯಲ್ಲ. ನಾವು ನಾಲ್ವರೂ ಬಾಲ್ಯದಿಂದಲೂ ಒಟ್ಟಿಗಿದ್ದು ಬಂದುದನ್ನೆಲ್ಲಾ ಸಮವಾಗಿ ಅನುಭವಿಸಿದವರು. ಅಲ್ಲದೆ,
ತನ್ನವನಿವನವ ಬೇರೆಂಬಿಣಿಕೆ.| ನಿಜದಿಂ ನೋಡಲು ಸಣ್ಣದು ಮನಕೆ || 
ಎಲ್ಲರು ತನ್ನವರೆಂಬುವ ಎಣಿಕೆ | ಸತ್ಯವು ಕೇಳಾ ಹಿರಿಯಮನಕ್ಕೆ ||೧೭||
ಅದರಿಂದ ಎಲ್ಲರೂ ಸೇರಿ ಹೊಗೋಣ” ಎಂದನು. ಎಲ್ಲರೂ ಹಾಗೇ ಆಗಲಿ ಎಂದು ಮುಂದೆ ಹೋದರು.
ಹಾದಿಯು ಕಾಡಿನಲ್ಲಿ ಹಾದು ಹೋಗುವುದು. ದಾರಿಯಲ್ಲಿ ಒ೦ದು ಸಿಂಹದ ಮೂಳೆಗಳು ಚೆಲ್ಲಾಡಿದ್ದುವು. ಅದನ್ನು ಕಂಡು ಒಬ್ಬನು “ಇದೋ, ಇಲ್ಲಿ ಯಾವುದೋ ಪ್ರಾಣಿಯು ಸತ್ತು ಬಿದ್ದಿದೆ. ಇದಕ್ಕೆ ನಮ್ಮ ವಿದ್ಯಾ ಪ್ರಭಾವದಿಂದ ಜೀವವು ಬರುವಂತೆ ಮಾಡೋಣ. ನಾನು ಈ ಅಸ್ಥಿಗಳನ್ನು ಸರಿಯಾಗಿ ಜೋಡಿಸುವೆನು.” ಎಂದು ಆ ಮೂಳೆಗಳನ್ನೆಲ್ಲ ಜೋಡಿಸುವೆನು. “ಎರಡನೆಯವನು ತನ್ನ ವಿದ್ಯಾಬಲದಿಂದ ಚರ್ಮ ಮಾಂಸ ರಕ್ತಗಳು ಬರುವಂತೆ ಮಾಡಿದನು. ಮೂರನೆಯವನು ಜೀವವನ್ನು ಬರಿಸುವೆನೆಂದು ಹೊರಟನು.
ಅಷ್ಟರಲ್ಲಿ ಸುಬುದ್ದಿಯು ಮುಂದೆ ಬಂದು ತಡೆದು, “ಎಲೈ ನಿಲ್ಲು, ಇದು ಸಿಂಹ! ಇದನ್ನು ಬದುಕಿಸಿದರೆ ಇದು ನಮ್ಮೆಲ್ಲರನ್ನೂ ಸಂಹರಿಸುವುದು” ಎಂದನು. ಅವನಿಗೆ ಕೋಪಬಂತು. ಅವನು ಛೇ, ಮೂರ್ಖ! ನನ್ನ ವಿದ್ಯೆಯನ್ನು ತೋರಿಸಬೇಡ ಎನ್ನುವೆಯಾ?” ಎಂದು ಅವನನ್ನು ಹೊಡೆಯುವುದಕ್ಕೆ ಹೋದನು. ಆದಕ್ಕವನು, “ಹಾಗಾದಕ್ಕೆ ಕೊಂಚ ತಡೆ, ನಾನು ಮರವನ್ನು ಹತ್ತಿ ಕೂಳ್ಳುವೆನು” ಎಂದು ಸರಸರನೆ ಮರವನ್ನು ಹತ್ತಿದನು.
ಅನಂತರ ಅವನು ಮಂತ್ರವನ್ನು ಹಾಕಿದನು. ಸಿಂಹಕ್ಕೆ ಜೀವವೂ ಬಂತು. ಅದು ಅವರ ಮೇಲೆಯೇ ಬಿದ್ದು ಅವರು ಮೂವರನ್ನೂ ಕೊಂದೂ ಹಾಕಿತು. ಆ ಸಿಂಹವು ಅವರನ್ನು ತಿಂದು ತೇಗಿ ಹೊರಟು ಹೋದಮೇಲೆ, ಸುಬುದ್ದಿಯು ಮರದಿಂದಿಳಿದು ಮನೆಗೆ ಹೋದನು. “ಅದರಿಂದ ವಿದ್ಯೆಗಿಂತ ಬುದ್ಧಿಯು ಹೆಚ್ಚು.” ಎಂದು ಹೇಳಿದೆನು. ಅಲ್ಲದೆ,
ಶಾಸ್ತ್ರವ ಬಲ್ಲೊಡೆ ಸಾಲದು ಕೇಳೈ | ಲೋಕಾಚಾರವ ತಿಳಿದಿರಬೇಕೈ ॥ 
ಮೂರ್ಖರು ಪಂಡಿತರಾಗೇನಾಯಿತು? ಅಪಹಾಸ್ಯವ ಪಡೆದರು ಸರ್ವತ್ರ ॥೧೮॥
ಎನ್ನಲು ಚಕ್ರಧರನು “ಅದೆಂತು?” ಎಂದು ಕೇಳಿದನು.
‘ಸುವರ್ಣಸಿದ್ಧಿಯು ಹೇಳಿದನು:-
*****
ಮೂರ್ಖ ಪಂಡಿತರ ಕಥೆ ಓದಿ
Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...