Home / ಕವನ / ಕವಿತೆ / ಚೆಲುವ ನಾರಾಯಣ

ಚೆಲುವ ನಾರಾಯಣ

(ಅಳ್ವಾರರ ಬಗೆಯನ್ನು ಭಗವಂತನು ತುಂಬಿ ನಿಂತುದನ್ನು ಕುರಿತ ಹಾಡು)
(ಸಿರಿಬಾಯಿ ನುಡಿಯ ಒಂದನೇ ನೂರಿನ ಹತ್ತನೇ ಹಾಡು)
ಅರಿಶಿರಗಳನು ತರಿವ ಮಾಶಂಖ ಚಕ್ರಗಳ ಧರಿಸಿದವನು
ಸಿರಿಯ ಚೆಲುನೀಳಡಿಯನೇಳು ಲೋಕಗಳಾದರಿಸುವಂತೆ
ತರಳನಿಂಥವನಿಲ್ಲವೆನುವ ವಾಮನನಾಗಿ ವರ್ಧಿಸಿದವ
ಕರಿಯ ಮಣಿಯಂದ ಕಂಗೊಳುವನಿವನೆನ್ನ ಕಂಗಳೊಳೆ ನಿಂತ.
ಕಂಗಳೊಳಗೆಯೆ ನಿಲ್ವನಿವನನಾವೆರೆಯೆ ಕಾದಲ್ಮೆಯಿಂದ
ಸಂಗಡಿಸುವನು ನೆನೆಯೆ-ಇನ್ನಿವನ ನಾವೇನ ಬೇಡಲಹುದು
ಹೊಂಗುವುರಿ ತಾನಾಗಿ ನಲ್‌ಗಾಳಿ ನೀರಾಗಿ ಬಾನುಮಾಗಿ
ಮಂಗಳದ ನೆಲವಾಗಿ ಬಿತ್ತರಿಸುವೀ ನಮ್ಮ ನಾಥನನ್ನು?
ನಾಥನಿವ ನಮಗೆನ್ನ ತಂದೆಗೂ ತಾತನಿಗು ಮುತ್ತಜ್ಜಗೂ
ನಾಥನಿವ ತಣ್ಣನೆಯ ಚೆಂದಾವರೆಯ ಚೆನ್ನ ಕಂಗಳವನು
ನಾಥನುರದೊಳು ಲತೆಗು ಹಾವಿಗು ನುಣ್ಣ ನಡುವವಳ ತಳೆದ
ನಾಥನೆಮ್ಮವನಿವನ ಬಿಡದೆ ಧರಿಸೌ ನನ್ನ ಮುಗ್ಧ ಹೃದಯ.
ಹೃದಯವೇ ನೀನೊಳ್ಳೆಯವಳೊಳ್ಳೆಯವಳೌ ನಿನ್ನ ನೆರವಿಂ
ಅದನದಾವುದ ಗೈಯೆವಿನ್ನೆಮಗೆ ಏನುಂಟು ಆವ ಕೊರತೆ?
ಹದಗೆಡದ ಹರೆಯದವ, ಮಲರಮಗಳಾಣ್ಮನವ, ನೀನವನನು
ಹೊದದೆ ಇರು ಬಿಡದೆ ನಾನರಿವುಗೆಟ್ಟಿರುವಂದಿಗೂ ಕಂಡೆಯಾ.
ಕಂಡೆಯಾ, ಎಲೆ ನನ್ನ ಹೃದಯವೇ, ಕರ್ಮಗಳು ಫಲಿಸುತಿಹುದ
ಕೊಂಡೆಣಿಕೆಯಿಲ್ಲದೆಯೆ ತಾವಾಗಿ ಫಲಗಳನು ಬಿಡುವ ತೆರವ
ಉಂಡವನನೇಳು ಲೋಕಂಗಳನು, ತೊಣೆಯಿರದ ಮೂರಡಿಗಳ
ಕೊಂಡೆಲ್ಲವಳೆದವನ ಕಂಡುಕೊಂಡಿಹೆಯಲಾ ನೀನುಮಿಂದು?
ನೀನುಮಂತೆಯೆ ನಾನುಮೀನೇರನಿಂತಿರಲು ಇನ್ನು ಮುನ್ನು
ಏನೊಂದು ನೋವನೂ ಬಳಿಸಾರಗೊಡ, ಕೇಳು, ನನ್ನ ಮನವೇ
ತಾನೆ ತಾಯಾಗಿ ತಂದೆಯುಮಾಗಿ ಈ ಲೋಕದೊಳಗೆ ಮೈಯ-
ನಾನುವೀಶನು ಮಣಿಯ ಬಣ್ಣದೊಡಲಿನ ಚೆಲುವ ನನ ತಂದೆ.
ತಂದೆಯೇ ಎಂದೆನುತ ನನ್ನೊಡೆಯ ಎನ್ನುತ್ತ ನೆನೆದು ಮನಕೆ
ತಂದಿಟ್ಟುಕೊಳ್ಳುತ್ತ ಸೊಲ್ಲಿನೊಳು ಮೊರೆಯಿಡುವ ಪಾಪಿ ನಾನು
ತಂದೆಯೇ ನಮ್ಮೊಡೆಯ ಎನ್ನುತ್ತ ಬಾನವರು ನೆನೆದು ಮನದಿ
ತಂದಿಟ್ಟುಕೊಳ್ಳುತ್ತ ಸೊಲ್ಲಿನೊಳು ಕೊಂಡಾಡುವೀ ಚೆಲುವನನ್ನು.
ಚೆಲುವ ನಾರಾಯಣಾ ಎಂಬ ಸೊಲ್ಲೆನ್ನ ಕಿವಿಸೋಕೆ ಸಾಕು
ಮಳಮಳನೆ ಕಣ್ಣ ಹನಿಯುದುರುವುದು ಹುಡುಕುವೆನು-
ಸೋಜಿಗವಿದು!
ನಲುಮೆಯಿರುಳೊಳಗಂತೆ ಹಗಲೊಳೂ ಎಡಬಿಡವೆ ಒಡಗೂಡುತ
ಒಲುಮೆಯಿಂದೀ ಪೂರ್ಣನೆನ್ನ ಬಿಡದಿರುವನೈ ನನ್ನ ನಂಬಿ.
ನಂಬಿಯನು ಸಿರಿಕುರುಂಗಡಿಯೆಂಬ ಪುರದೊಳಗೆ ನಿಂತವನನು
ಚೆಂಬೊನ್ನಿನಂತೆಯೇ ಹೊಳೆಯುತಿಹ ಸಿರಿಮೂರ್ತಿಯುಳ್ಳವನನು
ಚೆಂಬೊಗರ ತಳೆದವನ ಮೇಗಳಿನ ಬಾನವರಿಗಾದಿಮನನು
ಎಂಬೆ ನಾನೇನೆಂದು ನನ್ನೊಡೆಯಗೇನೊರೆದು ನಾ ಮರೆವೆನು?
೧೦
ಮರವೆಯಿದು ಅರಿಮೆಯಿದು ಎಂದು ನಾನೊಂದನೂ ತಿಳಿದರಿಯೆನು
ಮರೆವನಿವನೆಂದೆಯೇ ಚೆಂದಾವರೆಯ ಚೆಲುವ ಕಂಗಳಾಂತು
ಮರವೆಯಳಿವಂತೆನ್ನ ಹೃದಯದೊಳು ನಿತ್ಯವೂ ನೆಲಸಿರುವನ
ಮರೆವೆನೇ ನಾನಿನ್ನು ನನ್ನ ಈ ನೀಲಮಣಿಯಂದದವನ.
೧೧
ಮಣಿಯನ್ನು ಬಾನವರ ನೆಲೆಯ ನಡಸುವನನ್ನು ತನಗೆ ತಾನೆ
ಎಣೆಯಾದ ಒಡವೆಯನು ಚೆಲುವು ಕುರಕೂರವನು ಶಡಗೋಪನು
ಅಣಿಗೊಂಡ ನುಡಿಗಳಿಂ ನುತಿಸಿರುವ ಸಾಸಿರದೊಳೀ ಹತ್ತನು
ದಣಿವಿಲ್ಲದಂದದೊಳು ಕಲಿವವರ ಕಲಿವು ಹಾಯುವುದು ನೆಲೆಗೆ.
*****
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...