Home / ಕವನ / ಕವಿತೆ / ಈ ರಾತ್ರಿ – ಇಂದು ಮಹಶಿವರಾತ್ರಿ!

ಈ ರಾತ್ರಿ – ಇಂದು ಮಹಶಿವರಾತ್ರಿ!

[ವಿಖ್ಯಾತ ನರ್ತನಗಾರರಾದ ಶ್ರೀ!! ಸೋಹನ್ ಲಾಲ್ ರವರ ನೃತ್ಯಭಂಗಿಯೊಂದರಿಂದ ರೂಪುಗೊಳಿಸಿದೆ. ವಿಷಯಸಂಗ್ರಹವು ಈ ರೀತಿ : ಮಹಾ ಶಿವರಾತ್ರಿಯ ಶುಭದಿನದಲ್ಲಿ ಭಕ್ತರು ಶಿವನ ಪೂಜೆಯ ಸಲುವಾಗಿ ಮಂದಿರದಲ್ಲಿ ಬಂದು ಸೇರುವರು. ವಿವಿಧ ನೈವೇದ್ಯ ಫಲ ಮತ್ತು ಮಧುವನ್ನು ಶಂಕರನ ತೃಪ್ತಿಗಾಗಿ ತಂದು ಅರ್ಪಿಸುವರು. ಶಿವನ ಲೀಲಾಸ್ತೋತ್ರದಲ್ಲಿ ಮುಳುಗಿದವರಾಗಿ, ತಮಟೆ ಮದ್ದಲೆಗಳ ಸದ್ದಿನಲ್ಲಿ ತಲ್ಲೀನರಾಗಿ, ಲೀಲಾಜಾಲದಿಂದ ನರ್ತಿಸಿ, ಶಿವನೂ ಅವರೊಡನೆ ಆತನು ಸೃಷ್ಟಿಸಿದ ಎಲ್ಲಾ ವಸ್ತುಗಳ ಜೊತೆಯೊಂದಿಗೆ ತಮ್ಮೊಡನೆ ನರ್ತಿಸಿದ ಹಾಗೆ ಭಾವಿಸಿ ಮೆರೆಯುವರು.]


ಸೊಡರ ಬೆಳಕಿನ ಹೊಳೆಯು
ಮಂದಿರದಿ ಹುಯುವುದು-
ಪರಶಿವನ ಪೂಜಿಸಲು
ಸೇರಿಹರು ಕಿಂಕರರು,
ಭಕ್ತಭಾವಿಕರು ಕಲಸುವರು ಈ ರಾತ್ರಿ!
ಇಂದು ಮಹಶಿವರಾತ್ರಿ!


ಮಂದಿರದಿ ಬೆಳಗುವರು-
ಹೆಂಗೆಳೆಯರಿಂದು
ಹರನಪೂಜೆಗೆ, ಅವರು
ತಂದಿಹರು ಮಧುವು,
ರುಂಡಮಾಲಿಗೆ ಅರ್ಪಿಸಲು ಈ ರಾತ್ರಿ!
ಇಂದು ಮಹಶಿವರಾತ್ರಿ!


ಈ ಶುಭದಿವಸ ರಾತ್ರಿ!
ಮರೆಯುವಳು ಧಾತ್ರಿ!
ಶಂಭುವನು ಸ್ತುತಿಸುವಳು
ಇರಳುದೀವಿಗೆ ಎದುರು
ಒಲುಮೆ ಮಿಲನದಿ ಚೆಲುವೆ-ಈ ರಾತ್ರಿ!
ಇಂದು ಮಹಶಿವರಾತ್ರಿ!


ತಮಟೆ ಮದ್ದಲಸದ್ದು
ಮಂದಿರದಿ ಕೇಳುವುದು-
ಶಂಕರನ ಸ್ತುತಿಸುವರು
ಭಕ್ತರರು, ಭಾವಿಕರು;
ರೌದ್ರಮುಖಿ ಲಾಸ್ಯದಲಿ ಮುಳುಗುವನು ಈ ರಾತ್ರಿ!
ಇಂದು ಮಹಶಿವರಾತ್ರಿ!


ಶಿವನ ಲೀಲೆಯ ಭವನ
ಮುಳುಗುವುದು ಲಾಸ್ಯದಲಿ-
ನೃತ್ಯವರ್ತನ ಕ್ರೀಡೆ
ಕಾಣುವುದು ಮಂಡಲದಿ,
ಹರನ ಸುತ್ತುವರವರು ತನ್ಮಯದಿ ಈ ರಾತ್ರಿ!
ಇಂದು ಮಹಶಿವರಾತ್ರಿ!


ಜಗದಿ ಕಾಣುವದಿಂದು
ಸೋಜಿಗದ ವಿಸ್ತರಣ-
ಇಳೆಯಲ್ಲಿ, ಮುಗಿಲಿನಲಿ
ದೆಸೆ ಎಸೆಯ ದಿಕ್ಕಿನಲಿ
ನೃತ್ಯ ದರ್ಶನಕಿರಣ ಮಿರುಗುವುದು ಈ ರಾತ್ರಿ!
ಇಂದು ಮಹಶಿವರಾತ್ರಿ!
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...