Home / ಕವನ / ಕವಿತೆ / ಈ ರಾತ್ರಿ – ಇಂದು ಮಹಶಿವರಾತ್ರಿ!

ಈ ರಾತ್ರಿ – ಇಂದು ಮಹಶಿವರಾತ್ರಿ!

[ವಿಖ್ಯಾತ ನರ್ತನಗಾರರಾದ ಶ್ರೀ!! ಸೋಹನ್ ಲಾಲ್ ರವರ ನೃತ್ಯಭಂಗಿಯೊಂದರಿಂದ ರೂಪುಗೊಳಿಸಿದೆ. ವಿಷಯಸಂಗ್ರಹವು ಈ ರೀತಿ : ಮಹಾ ಶಿವರಾತ್ರಿಯ ಶುಭದಿನದಲ್ಲಿ ಭಕ್ತರು ಶಿವನ ಪೂಜೆಯ ಸಲುವಾಗಿ ಮಂದಿರದಲ್ಲಿ ಬಂದು ಸೇರುವರು. ವಿವಿಧ ನೈವೇದ್ಯ ಫಲ ಮತ್ತು ಮಧುವನ್ನು ಶಂಕರನ ತೃಪ್ತಿಗಾಗಿ ತಂದು ಅರ್ಪಿಸುವರು. ಶಿವನ ಲೀಲಾಸ್ತೋತ್ರದಲ್ಲಿ ಮುಳುಗಿದವರಾಗಿ, ತಮಟೆ ಮದ್ದಲೆಗಳ ಸದ್ದಿನಲ್ಲಿ ತಲ್ಲೀನರಾಗಿ, ಲೀಲಾಜಾಲದಿಂದ ನರ್ತಿಸಿ, ಶಿವನೂ ಅವರೊಡನೆ ಆತನು ಸೃಷ್ಟಿಸಿದ ಎಲ್ಲಾ ವಸ್ತುಗಳ ಜೊತೆಯೊಂದಿಗೆ ತಮ್ಮೊಡನೆ ನರ್ತಿಸಿದ ಹಾಗೆ ಭಾವಿಸಿ ಮೆರೆಯುವರು.]


ಸೊಡರ ಬೆಳಕಿನ ಹೊಳೆಯು
ಮಂದಿರದಿ ಹುಯುವುದು-
ಪರಶಿವನ ಪೂಜಿಸಲು
ಸೇರಿಹರು ಕಿಂಕರರು,
ಭಕ್ತಭಾವಿಕರು ಕಲಸುವರು ಈ ರಾತ್ರಿ!
ಇಂದು ಮಹಶಿವರಾತ್ರಿ!


ಮಂದಿರದಿ ಬೆಳಗುವರು-
ಹೆಂಗೆಳೆಯರಿಂದು
ಹರನಪೂಜೆಗೆ, ಅವರು
ತಂದಿಹರು ಮಧುವು,
ರುಂಡಮಾಲಿಗೆ ಅರ್ಪಿಸಲು ಈ ರಾತ್ರಿ!
ಇಂದು ಮಹಶಿವರಾತ್ರಿ!


ಈ ಶುಭದಿವಸ ರಾತ್ರಿ!
ಮರೆಯುವಳು ಧಾತ್ರಿ!
ಶಂಭುವನು ಸ್ತುತಿಸುವಳು
ಇರಳುದೀವಿಗೆ ಎದುರು
ಒಲುಮೆ ಮಿಲನದಿ ಚೆಲುವೆ-ಈ ರಾತ್ರಿ!
ಇಂದು ಮಹಶಿವರಾತ್ರಿ!


ತಮಟೆ ಮದ್ದಲಸದ್ದು
ಮಂದಿರದಿ ಕೇಳುವುದು-
ಶಂಕರನ ಸ್ತುತಿಸುವರು
ಭಕ್ತರರು, ಭಾವಿಕರು;
ರೌದ್ರಮುಖಿ ಲಾಸ್ಯದಲಿ ಮುಳುಗುವನು ಈ ರಾತ್ರಿ!
ಇಂದು ಮಹಶಿವರಾತ್ರಿ!


ಶಿವನ ಲೀಲೆಯ ಭವನ
ಮುಳುಗುವುದು ಲಾಸ್ಯದಲಿ-
ನೃತ್ಯವರ್ತನ ಕ್ರೀಡೆ
ಕಾಣುವುದು ಮಂಡಲದಿ,
ಹರನ ಸುತ್ತುವರವರು ತನ್ಮಯದಿ ಈ ರಾತ್ರಿ!
ಇಂದು ಮಹಶಿವರಾತ್ರಿ!


ಜಗದಿ ಕಾಣುವದಿಂದು
ಸೋಜಿಗದ ವಿಸ್ತರಣ-
ಇಳೆಯಲ್ಲಿ, ಮುಗಿಲಿನಲಿ
ದೆಸೆ ಎಸೆಯ ದಿಕ್ಕಿನಲಿ
ನೃತ್ಯ ದರ್ಶನಕಿರಣ ಮಿರುಗುವುದು ಈ ರಾತ್ರಿ!
ಇಂದು ಮಹಶಿವರಾತ್ರಿ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...