Home / ಕವನ / ಕವಿತೆ / ಭಿಕ್ಷುಕನು

ಭಿಕ್ಷುಕನು

ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು|
ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧||

ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ |
ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨||

ಭಿಕ್ಷೆಯ ಬೇಡಲು ಬಂದಿಹೆನಮ್ಮಾ ಮತ್ಸರಿವಿರದಿರೆ ಭಿಕ್ಷೆಯ ನೀಡು |
ತುಚ್ಛರ ಮನೆಯ ಭಿಕ್ಷೆಯ ನೆಂದಿಗೂ ಗ್ರಹಿಸೆನು ನಾನಿಂದೂ || ೩ ||

ಮನೆಯಜಮಾನನು ಮೈಮುರಿ ದುಡಿದು ಹೊಲದೊಳು ಧಾನ್ಯವ ಬೆಳೆದಿರೆ ನೀ |
ನನುನಯದಿಂದಲಿ ನೀಡಲು ಭಿಕ್ಷೆಯ ಗ್ರಹಿಸುವೆ ಪ್ರೇಮದಲ್ಲಿ || ೪ ||

ಮಾನಸ ಶ್ರಮವನು ಮಾಡುತೆ ನಿನ್ನಯ ಪ್ರೇಮದಪತಿ ಧನಗಳಿಸುತಿರೆ |
ದಾನವ ಭಕುತಿಲಿ ಮಾಡಿದೊಡದನನು ಸಾನಂದದಿನಾಂ ಕೊಳ್ಳುವೆನೂ ||೫||

ಅನ್ನದ ವಸ್ತ್ರದ ಕೊರೆತೆಯನರಿಯೆನು ನನ್ನಯಗೆಳೆಯವ ಧನಪತಿಯು |
ಚಿನ್ನ ಮನದಿನೀ ನೆನ್ನೊಳು ನೀಡುವ ಭಕುತಿಯ ಭಿಕ್ಷೆಯ ಕೊಳ್ಳುವೆನು ||೬||

ಜಾತಿ ವಿಜಾತಿಯ ಭೇಧವ ನೆರಿಯೆನು ಪ್ರೀತಿಯಿಂದೆ ನೀಭಿಕ್ಷೆಯನೀಡಲು |
ಓತುಹರಿಸುವೆ ನಖಂಡಸು ಮಂಗಲೆಯಾಗುತೆ ನೀ ಪೊಳೆಯೆಂದೂ || ೭||

ಪೆಣ್ಣನು ಪೊರೆವೆನು ಪತಿರೂಪದಿ ನಾಧನ್ಯ ಸದಾಶಿವ ಮೂರುತಿಯು |
ಇನ್ನು ಜನಗಳ ಪಾಲಿಪೆ ತಂದೆಯ ರೂಪದಿ ಶ್ರೀಹರಿ ವಿಶ್ವಾತ್ಮಾ || ೮ ||

ಸಂಣಮಕ್ಕಳರೂಪದಿ ಪೊರೆವಳು ಎನ್ನಯಸತಿಜಗದಂಬೆ |
ನಿನ್ನಯ ಅತಿಥಿಯ ರೂಪದಿ ಬಂದಿಹೆ ಜಗದೊಳು ನಾನಿಂದೂ || ೯ ||

ಸನ್ನುತ ಬಿಜ್ಜೆಯ ವಿತರಣ ಕಾರ್ಯವ ಸರಸತಿರೂಪದಿ ಮಾಡುವೆನೂ |
ಇನ್ನುನಾನು ಮಾಡದ ಕಾಯಕವದು ಜಗದೊಳಗೇನುಂಟು || ೧೦||

ಕಪ್ಪು ಸಂತೆಯಿಂ ಜನಗಳು ದುಡ್ಡನು ಗಳಿಸುವರೆಂಬ ದೂರನುಕೇಳುತೆ |
ತಪ್ಪನು ತಿದ್ದಲು ಜಗದಲಿ ಬಂದಿಹೆ ಜೋಗಿಯ ವೇಷದಲಿ || ೧೧ ||

ವಕ್ಕಲಿಗರು ತಾ ರೊಕ್ಕದ ಆಶಿಲಿ ಹೊಲಬೀಳ್ಗೆಡಹುತೆ ಪೀಡಿಪರೊಡೆಯ ನ|
ಚೊಕ್ಕು ಭೂಮಿಯನು ಮಾಡುತೆ ಬೆಳೆಯಲು ಬುದ್ಧಿಯ ಹೇಳುವೆನೂ || ೧೨ ||

ಚಿಕ್ಕಮಕ್ಕಳು ಬಸವಮೋಹನರು ಜಗದಿ ಮಾಡಿದ ಬೋಧೆಗಳಾ |
ಚೊಕ್ಕಮನದಿ ಜನ ತಿಳಿದು ನಡೆದೊಡೆನಾನಲಿನೆನು ಸಂತಸದಿ || ೧೩||

ಶಿವಾ ಮಾದೇವಾ ನಾನೇ ಶಿವಾ ನೀತಿಗೆಟ್ಟವಗೆ ಎಲ್ಲಿ ಶಿವಾ||
*****

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...