Home / ಕವನ / ಕವಿತೆ / ಬಾಳು

ಬಾಳು

ಆಸರಕಿ ಅಳದಿಟ್ಟು, ಬ್ಯಾಸರಕಿ ಬಳದಿಟ್ಟು
ಚಿಂತಿ ಕಾಲಾಗ ತುಳದಿಟ್ಟು | ಈ ದೇಹ
ಶೀಲ ಮಾಡಿಟ್ಟ ಜನದಾಗ ||

ಕನ್ನೇಯ ಬಡಿಬ್ಯಾಡ, ಕೈಬಳಿ ಒಡೆದಾವು
ಸಣ್ಣಂಚಿನ್ವಾಲೆ ಮುರಿದಾವು | ನನ ಮಗನ
ನನ್ನಾಣಿ ಮಡದಿ ಬಡಿಬ್ಯಾಡ ||

ಛೀ! ಏಳ ಛೀಮಾರಿ, ನಾಚಿಕಿಲ್ಲದ ನಾರಿ
ಗಂಡನ್ನ ಬೈವ ಗೈಯಾಳಿ | ಗಂಡಽಗ
ಆಂವ ಇಂವನೆಂದು ಕರದಾಳ ||

ನನ್ನ ಬೈದರು ಬೈಯ್ಯೊ, ಬೆನ್ನ ಬೈಯಲಿಬ್ಯಾಡ
ಬೆನ್ಹಿಂದ ಬೆಂಕಿ ಒಯ್ಬ್ಯಾಡ | ನನಗೊಬ್ಬ
ತಮ್ಮ ಇರವೂನ ಅರ್ಜೂನ ||

ಅಣ್ಣತಮ್ಮರ ಜಗಳ, ನಿನ್ನೆ ಮೊನ್ನ್ಯಾಗ್ಯಾವ
ಬಣ್ಣ ಬಾಗೀಲ ಎರಡಾಗಿ | ಕಡೆಮಗನ
ಸಣ್ಣವನಾಗಿ ಸರಕೋರೊ ||

ಊರ ಮ್ಯಾಗಲ ಊರ, ದಾರಿಮ್ಯಾಗಲ ಮನೆಯ
ಬಾರದ್ಯಾಕ್ಹೋದ ನನ್ನಣ್ಣ | ನಿನ ಮಡದಿ
ಬ್ಯಾಡಂದಳೇನೊ ನನ ಮನೆಗೆ ||

ಸೆಗಣ್ಣಿ ಮಾತೇನ, ಸೆಗಣಿಯ ದಂಟೇನ
ಗಾಳೀಗೆ ಬಂದ ರವದೀಯ | ಮಾತೀಗೆ
ಮಾರಾಯ ಮನಸ ತೆಗೆದಾರ ||

ಹೊಂದಿಕಿಲ್ಲದ ಮಾತು, ಹೊಂದಿಸ್ಯಾಡಲಿಬ್ಯಾಡ
ಬಂಧಾನ ನಾನು ಬಡಲಾರೆ | ಕಣ್ಣೀರು
ಮುಂದಿರಲಿ ಅವರ ಶಿಸುವೀಗೆ ||

ಅಣ್ಣನ ಮಗಳಂತ, ಹಮ್ಮೀಲಿ ನಾ ತಂದೆ
ಉಣ್ಣಾಳ ಮುಸಕ ತಗಿಯಾಳ | ಅಣ್ಣಯ್ಯ
ಮನ್ನೂಣಿ ಹೇಳ ಮಗಳೀಗೆ ||

ಮನ್ನೂಣಿ ಹೇಳಾಕ, ಹೊನ್ನೆಷ್ಟು ಅಳದೆವ್ವ
ಪುಣ್ಣೇಕ ದಾರಿ ಎರದೀನೆ | ತಂಗೆವ್ವ
ಸೊನ್ನಿಲೆ ಮಗ್ಗ ಇರಹೇಳ ||

ಊರಮ್ಯಾಗ್ಹಾಸಿ, ಬೀಸುವ ಬಿರುಗಾಳಿ
ತೀರಾವ ದುಃಖ ತೋಡುದಕ | ಹಡದವ್ಗ
ಮಾರಿನೋಡಾಕ ಬರಹೇಳ ||

ಹೆಂತಾದು ಮಾಡಿದರು, ಸಿಂತರಿಸಿ ಬಿಡವೂರ
ಹೆಂತಾದ ನನ್ನ ಕೈಗೂಣ | ಶಿವಲಿಂಗ
ಬೆಂಕಿಯಂತವರು ಅರುವಿರಲಿ ||

ಅಲ್ಲದವರ ತಡವಿ, ಜಲ್ಲೆಂದ ನನ ಮನವ
ಕಲ್ಲಾಗ ಕಡ್ಲಿ ಒಡಿದ್ಹಾಂಗ | ನೆಗ್ಗೂಲ
ಮುಳ್ಳಾಗ ಹಾದಿ ತಗೆದ್ಹಾಂಗ ||

ಒಡಹುಟ್ಟಿದವರಿಗೆ, ಒಡಜಾಲಿ ಮುಳ್ಳಾದ
ಹಡದವ್ವಗೀದ ಹುಲಿಯಾದ | ನನ ತಮ್ಮ
ಮಡದಿಗೆ ಮಾಣಿಕ ಹರಳಾದ ||

ಹಡದವ್ವ ನೀ ನನ್ನ, ಹಡದೇನು ಸುಡಬೇಕ
ನಡುಬಟ್ಟಿಲೊಬ್ಬ ಇದಿರಂಡಿ | ಸೆಟಿಗವ್ವ
ಮನಬಲ್ಲ ಬರಿಯ ಬರಿದಾಳ ||

ಆಸೊತ್ರ ನನ ಮನೆಯು, ಬೇಸೊತ್ರ ನನ ಮನೆಯು
ಕೂಸು ಕಾಡಿದರು ನನ ಮನೆಯು | ತವರೂರು
ಏಸು ದಿನ ಇದ್ರ ನೆರೆಮನೆಯು ||

ಬೀಸುವ ಕಲ್ಲಿಗೆ, ಬಿಡಿಮುತು, ರ್ಯಾವಳ
ಬೇಸ್ಯಾಗಿ ಹೊಯ್ಯೊ ಹೊಳೆಗಾರ | ನನ ಮನೆಗೆ
ಬೀಸ ಬರತಾರೊ ಗೆಳತೇರು ||

ಹಾಡ್ಯಾಡಿ ಬೀಸೀನಿ, ಹವಳ ಬಣ್ಣದ ಗೋದಿ
ಬೀಸಾಕ ಹಿಡದೀನಿ ಬಿಳಿಜೋಳ | ಅಣ್ಣಯ್ಯ
ಚ್ಯಾಜಕ ಹಿಡದೀನಿ ನಿನ ಮಗಳ ||

ಏಸನೀ ಬೀಸಿದರ, ಸಾಕಬೇಕೆನ್ನಳ
ಸಾಕ್ಷೇದ ತಾಯಿ ಸಿರಿಗೌರಿ | ಬೀಸೀದ್ಹಿಟ್ಟು
ಸಾಕುಸಾಕಾಗಿ ಬಳಗಕ ||

ಕಲ್ಲ ಕೊಟ್ಟವ್ವಗ, ಎಲ್ಲ ಬಾಗೇವಿರಲಿ
ಮಲ್ಲಿಗಿ ಮುಡಿವ ಮಗನಿರಲಿ | ಹೇಮ್ರಡ್ಡಿ
ಮಲ್ಲವ್ವನಂಥ ಸೊಸಿ ಇರಲಿ ||

ಆದಾವ ನಮಜೋಳ, ತೀರಾಽವ ನಮ ಹಾಡ
ಸಾಕ ಗೌರವ್ವ ಕೈಬೀಡ | ನನ ಮನಿಯ
ಗ್ಯಾನದತ್ತೆವ್ವ ಬೈದಾಳ ||

ಬೀಸೂವ ಕಲ್ಲಿಗೆ, ತೋಳಾಡಿ ತೊಡಿಯಾಡಿ
ನಾಗರ್ಹೆಡಿಯಂತ ನಡವಾಡಿ | ಗೌರವ್ವ
ನಿನ್ನಗೂಡಾಡಿ ದಣಿಯಾವ ||

ಆಗೂವ ಮುಕ್ಕಿಗೆ, ನಾಯಾರ ನೆನೆಯಾಲೆ
ರಾಜೇವ ಸಲುವ ಬಸವಣನ | ಹೇಣೂತಿ
ನೀಲವನ ಹಾಡಿ ನಿಲಸೇನ ||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...