Home / ಲೇಖನ / ಇತರೆ / ಜ್ವರ ಪಟ್ಟಿ

ಜ್ವರ ಪಟ್ಟಿ

ದಿನದಿಂದ ದಿನಕ್ಕೆ ವಿಜ್ಞಾನ ಬೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ. ಯಾರು ನಿರೀಕ್ಷಿಸದಷ್ಟು ಹೊಸ ಹೊಸ ಸಂಶೋಧನೆಗಳು ಜರುಗುತ್ತಿವೆ.

ಇದಕ್ಕೆ ಪುಷ್ಠಿಯೆಂಬಂತೆ ಜಪಾನಿನ ಟೋಕಿಯೊ ಪ್ರಾಧ್ಯಾಪಕರು ಈಗೀಗ ೨೦೧೫ರಲ್ಲಿ ವಿಶಿಷ್ಟ ಅದ್ಭುತವಾದ ಪಟ್ಟಿಯೊಂದನ್ನು ಅಭಿವೃದ್ಧಿ ಪಡಿಸಿರುವರು. ಇದನ್ನು ‘ಜ್ವರ ಪಟ್ಟಿ’, ‘ತೋಳು ಪಟ್ಟಿ’ ಎಂದು ಹೆಸರಿಟ್ಟಿರುವರು.

ಈ ತೋಳುಪಟ್ಟಿಯನ್ನು ಹಾಕಿದ ಕ್ಷಣ ಜ್ವರವಿದ್ದರೆ ಅದು ಕೂಗುವುದು. ಸೈರನ್ ಮೊಳಗಿಸುವುದು. ಸಲೀಸಾಗಿ ಜ್ವರ ಬಂದಿರುವುದನ್ನು ಸಾರಿ ಸಾರಿ ಹೇಳುವುದು.

ಆಗ ಹಸುಗೂಸುವಾಗಿರಲಿ, ವೃದ್ಧರಿರಲಿ, ಯಾವುದೇ ರೋಗಿಯಾಗಿರಲಿ ಶೂಶ್ರೂಷೆಗೆ ಹೃದಯ ದೇಹದ ತಾಪಮಾನದ ಮೇಲೆ ನಿಗಾ ಇಡಲು ಈ ಜ್ವರಪಟ್ಟಿ ಸಹಾಯ ಮಾಡುವುದೆಂದು ವಿಜ್ಞಾನಿಗಳು ತಿಳಿಸಿರುವರು.

ಅಬ್ಬಾ! ನಾವೆಲ್ಲ ಚಿಕ್ಕವರಾಗಿದ್ದಾಗ ಜ್ವರ ಬಂದರೆ ಹಣೆಗೆ ಕೈ ಇಟ್ಟು ನೋಡುವುದು ಇಲ್ಲವೆ ನಮ್ಮ ಬಾಯಲ್ಲಿ ಥರ್ಮಾಮೀಟರ್ ಇಟ್ಟು ನೋಡಿ ತಿಳಿಯುವುದು.

ಆದರೆ ಇಂದು ವಿಜ್ಞಾನ, ಜ್ಞಾನ, ಬಹಳ ಬಹಳ ಮುಂದೆ ಮುಂದೆ ಹೋಗುತ್ತಿದೆ. ಹೊಸ ಹೊಸ ಸಂಶೋಧನೆಗಳು ಜರುಗುತ್ತಲೇ ಇವೆ.

ಇದೆಲ್ಲರ ಫಲವಾಗಿ ಜ್ವರಪಟ್ಟಿಯನ್ನು ಕಂಡು ಹಿಡಿದಿರುವರು ಜ್ವರ ಬಂದಿದೆಯೆಂದು ಅನಿಸಿದರೆ ಸಾಕು ಅದನ್ನು ತೋಳಿಗೆ ಧರಿಸಿದರೆ ಅದು ಕೂಗುವುದು!

ಜ್ವರ ಬಂದಿದೆಯೆಂದು ಅರ್‍ಥವಾಗುವುದು. ಅದು ಕೂಗಲಿಲ್ಲವೆಂದರೆ ಜ್ವರ ಬಂದಿಲ್ಲವೆಂದು ನೆಮ್ಮದಿಯಿಂದಿರುವುದು.

ಹೇಗಿದೆ ವಿಜ್ಞಾನಿಗಳ ಹೊಸ ಆವಿಷ್ಕಾರದ ಪಟ್ಟ…?

ಬರುಬರುತ್ತಾ ದಿನಗಳು ಉರುಳಿದಂತೆ, ಏನೆಲ್ಲ ಬರುವುದೋ ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...