Home / ಲೇಖನ / ಇತರೆ / ಜ್ವರ ಪಟ್ಟಿ

ಜ್ವರ ಪಟ್ಟಿ

ದಿನದಿಂದ ದಿನಕ್ಕೆ ವಿಜ್ಞಾನ ಬೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ. ಯಾರು ನಿರೀಕ್ಷಿಸದಷ್ಟು ಹೊಸ ಹೊಸ ಸಂಶೋಧನೆಗಳು ಜರುಗುತ್ತಿವೆ.

ಇದಕ್ಕೆ ಪುಷ್ಠಿಯೆಂಬಂತೆ ಜಪಾನಿನ ಟೋಕಿಯೊ ಪ್ರಾಧ್ಯಾಪಕರು ಈಗೀಗ ೨೦೧೫ರಲ್ಲಿ ವಿಶಿಷ್ಟ ಅದ್ಭುತವಾದ ಪಟ್ಟಿಯೊಂದನ್ನು ಅಭಿವೃದ್ಧಿ ಪಡಿಸಿರುವರು. ಇದನ್ನು ‘ಜ್ವರ ಪಟ್ಟಿ’, ‘ತೋಳು ಪಟ್ಟಿ’ ಎಂದು ಹೆಸರಿಟ್ಟಿರುವರು.

ಈ ತೋಳುಪಟ್ಟಿಯನ್ನು ಹಾಕಿದ ಕ್ಷಣ ಜ್ವರವಿದ್ದರೆ ಅದು ಕೂಗುವುದು. ಸೈರನ್ ಮೊಳಗಿಸುವುದು. ಸಲೀಸಾಗಿ ಜ್ವರ ಬಂದಿರುವುದನ್ನು ಸಾರಿ ಸಾರಿ ಹೇಳುವುದು.

ಆಗ ಹಸುಗೂಸುವಾಗಿರಲಿ, ವೃದ್ಧರಿರಲಿ, ಯಾವುದೇ ರೋಗಿಯಾಗಿರಲಿ ಶೂಶ್ರೂಷೆಗೆ ಹೃದಯ ದೇಹದ ತಾಪಮಾನದ ಮೇಲೆ ನಿಗಾ ಇಡಲು ಈ ಜ್ವರಪಟ್ಟಿ ಸಹಾಯ ಮಾಡುವುದೆಂದು ವಿಜ್ಞಾನಿಗಳು ತಿಳಿಸಿರುವರು.

ಅಬ್ಬಾ! ನಾವೆಲ್ಲ ಚಿಕ್ಕವರಾಗಿದ್ದಾಗ ಜ್ವರ ಬಂದರೆ ಹಣೆಗೆ ಕೈ ಇಟ್ಟು ನೋಡುವುದು ಇಲ್ಲವೆ ನಮ್ಮ ಬಾಯಲ್ಲಿ ಥರ್ಮಾಮೀಟರ್ ಇಟ್ಟು ನೋಡಿ ತಿಳಿಯುವುದು.

ಆದರೆ ಇಂದು ವಿಜ್ಞಾನ, ಜ್ಞಾನ, ಬಹಳ ಬಹಳ ಮುಂದೆ ಮುಂದೆ ಹೋಗುತ್ತಿದೆ. ಹೊಸ ಹೊಸ ಸಂಶೋಧನೆಗಳು ಜರುಗುತ್ತಲೇ ಇವೆ.

ಇದೆಲ್ಲರ ಫಲವಾಗಿ ಜ್ವರಪಟ್ಟಿಯನ್ನು ಕಂಡು ಹಿಡಿದಿರುವರು ಜ್ವರ ಬಂದಿದೆಯೆಂದು ಅನಿಸಿದರೆ ಸಾಕು ಅದನ್ನು ತೋಳಿಗೆ ಧರಿಸಿದರೆ ಅದು ಕೂಗುವುದು!

ಜ್ವರ ಬಂದಿದೆಯೆಂದು ಅರ್‍ಥವಾಗುವುದು. ಅದು ಕೂಗಲಿಲ್ಲವೆಂದರೆ ಜ್ವರ ಬಂದಿಲ್ಲವೆಂದು ನೆಮ್ಮದಿಯಿಂದಿರುವುದು.

ಹೇಗಿದೆ ವಿಜ್ಞಾನಿಗಳ ಹೊಸ ಆವಿಷ್ಕಾರದ ಪಟ್ಟ…?

ಬರುಬರುತ್ತಾ ದಿನಗಳು ಉರುಳಿದಂತೆ, ಏನೆಲ್ಲ ಬರುವುದೋ ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...