Home / ಲೇಖನ / ವಿಜ್ಞಾನ / ಮಗುವನ್ನು ಅಲ್ಲಾಡಿಸಬೇಡಿ ಜೋಕೆ?!!

ಮಗುವನ್ನು ಅಲ್ಲಾಡಿಸಬೇಡಿ ಜೋಕೆ?!!

ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಮಕ್ಕಳು ಕಂಡರೆ ಯಾರಿಗೆ ತಾನೆ ಮುದ್ದು ಅಥವಾ ಪ್ರೀತಿ ಇರುವುದಿಲ್ಲ ಹೇಳಿ? ಪುಟ್ಟಮಕ್ಕಳನ್ನು ನಾವು ಅತಿಯಾಗಿ ಅಲುಗಿಸುತ್ತೇವೆ. ಸಣ್ಣ ಮಕ್ಕಳನ್ನು ಎತ್ತಿ ಹಿಸುಕಿ ತಲೆಸವರಿ, ಮೈದಡವಿ ಎತ್ತಿ ಹಾಸಿಗೆಯ ಮೇಲೆ ಹಾಕುತ್ತೇವೆ. ಅವು ಸೂಕ್ಷ್ಮವೆಂದು ತಿಳಿದರೂ ಹೊಟ್ಟೆಯ ಭಾಗದಿಂದ ಎತ್ತಿಹಾಗೆಯೆ ಮಲಗಿಸಿದಾಗ ತಲೆ ಅಲ್ಲಾಡಿ ಅಪಾಯ ಗ್ಯಾರೆಂಟಿ ಆಗುತ್ತದೆ. ಸಣ್ಣಮಕ್ಕಳ ಒಳ‌ಅಂಗಾಂಗಗಳು ಬಹಳ ಮೃದುವಾಗಿರುತ್ತವೆ. ಎಷ್ಟೋ ಸಣ್ಣ ಮಕ್ಕಳಲ್ಲಿ ತಲೆಬುರುಡೆಯು ಪೂರ್ಣವಾಗಿ ಗಡುಸಾಗಿರುವುದಿಲ್ಲ ಎಷ್ಟೋ ಜನ ಕಂದಮ್ಮಗಳನ್ನು ಜೋರಾಗಿ ಅಲ್ಲಾಡಿಸುವುದು ಉಂಟು. ಇಂಥಹ ಚಟುವಟಿಕೆಗಳಿಂದ ಮಗುವಿನ ಮೇಲೆ ಆಗಬಹುದಾದ ಆಘಾತಕರ ಪರಿಣಾಮದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಮೇರಿಕ ಒಂದರಲ್ಲೇ ಇಂಥಹ ಆಘಾತಗಳ ಕಾರಣಗಳಿಂದಾಗಿ ಪ್ರತಿ ವರ್ಷ ೧,೧೦೦ ಮಕ್ಕಳು ಸಾವಿಗೀಡಾಗುತ್ತಾರೆ. ಅಮೇರಿಕೆಯ ಕ್ಯಾಲಿಪೋನಿಯಾದಲ್ಲಿರುವ ಮಕ್ಕಳ ಆಸ್ಪತ್ರೆ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ರಾಬರ್ಟ್ ಸ್ಟೀಯರ್ ಅಮೇರಿಕೆಯ ಪತ್ರಿಕೆಯೊಂದರಲ್ಲಿ ತಿಳಿಸಿರುವಂತೆ ಆ ದೇಶದಲ್ಲಿ ಒಂದುವರೆ ಲಕ್ಷ ಪುಟ್ಟ ಮಕ್ಕಳು “ಶೆಕನ್ ಬೇಬಿ ಸಿಂಡ್ರೋಮ”ನ ಪರಿಣಾಮವಾಗಿ ಗಂಭೀರ ಸ್ವರೂಪದ ದೈಹಿಕ ಗಾಯಕ್ಕೆ ಒಳಗಾಗುತ್ತಾರೆ. ಇವರಲ್ಲಿ ಎಷ್ಟೋ ಮಕ್ಕಳು ಶಾಶ್ವತವಾಗಿ ಅಂಗವಿಕಲರಾಗುವುದೂ ಸತ್ಯ.

ಶೇಕನ್ ಬೇಬಿಸಿಂಡ್ರೋಮ್’ಗೆ ಗುರಿಯಾದ ಮಗುವಿನ ಚಿತ್ರ ಬಹಳ ಭಯಾನಕವಾದುದು. ಮಿದುಳಿನ ಒಳಗೆ ಆಘಾತದ ಪರಿಣಾಮವಾಗಿ ರಕ್ತ ಸ್ರಾವವುಂಟಾಗುತ್ತದೆ. ಕೆಲವೊಮ್ಮೆ ಕಣ್ಣುಗಳಿಂದ ರಕ್ತಬರುವುದೂ ಇರುತ್ತದೆ. ಆದರೆ ತಲೆಯ ಹೊರಗೆ ಯಾವುದೇ ಬಗೆಯ ಗಾಯವಾಗಿರುವ ಸೂಚನೆ ಇರುವುದಿಲ್ಲ ಇಂಥಹ ಸಂದರ್ಭಗಳಲ್ಲಿ ಮಕ್ಕಳು ತೀವ್ರ ಅಪಾಯಕ್ಕೆ ಗುರಿಯಾಗುತ್ತಾರೆ. ಸಾವೂ ಕೂಡ ಸಂಭವಿಸುವುದಿದೆ. ಅಮೇರಿಕೆಯ ಮಿಚಿಗನ್ ವಿಶ್ವದ್ಯಾಲಯದ ತಜ್ಞರ ತಂಡವೊಂದು ಸೇಕನ್‌ಬೇಬಿ ಸಿಂಡ್ರೋಮ್‌ಗೆ ಗುರಿಯಾದ ಮಕ್ಕಳ ಬಗೆಗೆ ವ್ಯಾಪಕ ಅಧ್ಯಯನ ನಡೆಸಿದೆ. ಇವರ ಅಧ್ಯಯನದ ಪ್ರಕಾರ ಆಘಾತಕ್ಕೆ ಒಳಗಾದ ಮಕ್ಕಳ ಕಣ್ಣುಗಳ ಪರಿಶೀಲನೆಯಿಂದ ಅಪಾಯದ ಪ್ರಮಾಣದಲ್ಲಿ ಅಂದಾಜಿಸಬಹುದು. ಕಣ್ಣುಗಳ ಒಳಗೆ ಆಗಿರುವ ಹಾನಿಯಂತೆ ಮಿದುಳೊಳಗೂ ಕೂಡ ಆಗಿರುತ್ತದೆ. ಅಮೇರಿಕೆಯಲ್ಲಿ ಹೀಗೆಯೇ ಪ್ರೀತಿಗಾಗಿ ಮ್ಯಥ್ಯೂನ್ ಎಂಬ ಮಗುವನ್ನು ಒಬ್ಬ ವ್ಯಕ್ತಿ ಪ್ರೀತಿಯಿಂದ ಮೇಲಕ್ಕೆ ಎತ್ತಿ ಅಲ್ಲಾಡಿಸುತ್ತ ಹಾಸಿಗೆಯ ಮೇಲೆ ಮಲಗಿಸಿದ ಅದಕ್ಕೆ ಕೂಡಲೆ ಶೇಕನ್‌ಬೇಬಿ ಸಿಂಡ್ರೋಮ್ ಆಗಿಯೇ ಬಿಟ್ಟಿತು. ಆ ಮಗುವನ್ನು ಆಸ್ಪತ್ರೆಗೆ ಹಾಕಲಾಯಿತು. ಆ ಮಗುವಿನ ತಲೆಯ ಬುರುಡೆ ಬಿರುಕು ಬಿಟ್ಟಿತು. ಆಂತರೀಕ ರಕ್ತ ಸ್ರಾವದಿಂದ ಮಿದುಳು ಎಷ್ಟು ಊದಿಕೊಂಡಿತ್ತೆಂದರೆ ಶಸ್ತ್ರ ಕ್ರಿಯೆಯ ಸಂದರ್ಭದಲ್ಲಿ ಮಿದುಳಿನಲ್ಲಿ ಚಿಮ್ಮಿದ ರಕ್ತ ಆಸ್ಪತ್ರೆಯ ನೆಲದಲ್ಲಿ ಮಡುಗಟ್ಟಿ ನಿಂತಿತು! ಕೊನೆಗೆ ಆ ಮಗುವಿಗೆ ಸಾವು ಸಂಭವಿಸಿತು. ಈ ಕಾರಣಕ್ಕಾಗಿ ಮಗುವನ್ನು ಎತ್ತಿಮುದ್ದಾಡಿದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಅದಕ್ಕಾಗಿ ನೆನಪಿರಲಿ ಪುಟ್ಟ ಮಕ್ಕಳನ್ನು ಎಚ್ಚಿರಿಕೆಯಿಂದ ನೋಡಿಕೊಳ್ಳಬೇಕಿದೆ. ಅದು ಮಲಗಿದಲ್ಲೇ ನೋಡುವುದು ಒಳ್ಳೆಯದು. ಮುದ್ದಿಸಲು ಕೈಗೆತ್ತಿಕೊಳ್ಳಬೇಕೆನಿಸಿದರೆ ಒಂದು ಹೊದಿಕೆಯ ಸಂಗಡ ಮೃದುವಾಗಿ ಎತ್ತಿಕೊಳ್ಳಬೇಕು. ಎಷ್ಟೇ ಜನ ಮಕ್ಕಳನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಳ್ಳುವುದು ಮೇಲಕ್ಕೆತ್ತುವುದು, ಎಸೆದು ಹಿಡಿಯುವುದು ಇಂಥಹ ಭಯಾನಕ ಹಿಂಸೆಯನ್ನು ಮಕ್ಕಳಿಗೆಂದಿಗೂ ಮಾಡಬಾರದು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...