Home / ಲೇಖನ / ವಿಜ್ಞಾನ / ಮಗುವನ್ನು ಅಲ್ಲಾಡಿಸಬೇಡಿ ಜೋಕೆ?!!

ಮಗುವನ್ನು ಅಲ್ಲಾಡಿಸಬೇಡಿ ಜೋಕೆ?!!

ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಮಕ್ಕಳು ಕಂಡರೆ ಯಾರಿಗೆ ತಾನೆ ಮುದ್ದು ಅಥವಾ ಪ್ರೀತಿ ಇರುವುದಿಲ್ಲ ಹೇಳಿ? ಪುಟ್ಟಮಕ್ಕಳನ್ನು ನಾವು ಅತಿಯಾಗಿ ಅಲುಗಿಸುತ್ತೇವೆ. ಸಣ್ಣ ಮಕ್ಕಳನ್ನು ಎತ್ತಿ ಹಿಸುಕಿ ತಲೆಸವರಿ, ಮೈದಡವಿ ಎತ್ತಿ ಹಾಸಿಗೆಯ ಮೇಲೆ ಹಾಕುತ್ತೇವೆ. ಅವು ಸೂಕ್ಷ್ಮವೆಂದು ತಿಳಿದರೂ ಹೊಟ್ಟೆಯ ಭಾಗದಿಂದ ಎತ್ತಿಹಾಗೆಯೆ ಮಲಗಿಸಿದಾಗ ತಲೆ ಅಲ್ಲಾಡಿ ಅಪಾಯ ಗ್ಯಾರೆಂಟಿ ಆಗುತ್ತದೆ. ಸಣ್ಣಮಕ್ಕಳ ಒಳ‌ಅಂಗಾಂಗಗಳು ಬಹಳ ಮೃದುವಾಗಿರುತ್ತವೆ. ಎಷ್ಟೋ ಸಣ್ಣ ಮಕ್ಕಳಲ್ಲಿ ತಲೆಬುರುಡೆಯು ಪೂರ್ಣವಾಗಿ ಗಡುಸಾಗಿರುವುದಿಲ್ಲ ಎಷ್ಟೋ ಜನ ಕಂದಮ್ಮಗಳನ್ನು ಜೋರಾಗಿ ಅಲ್ಲಾಡಿಸುವುದು ಉಂಟು. ಇಂಥಹ ಚಟುವಟಿಕೆಗಳಿಂದ ಮಗುವಿನ ಮೇಲೆ ಆಗಬಹುದಾದ ಆಘಾತಕರ ಪರಿಣಾಮದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಮೇರಿಕ ಒಂದರಲ್ಲೇ ಇಂಥಹ ಆಘಾತಗಳ ಕಾರಣಗಳಿಂದಾಗಿ ಪ್ರತಿ ವರ್ಷ ೧,೧೦೦ ಮಕ್ಕಳು ಸಾವಿಗೀಡಾಗುತ್ತಾರೆ. ಅಮೇರಿಕೆಯ ಕ್ಯಾಲಿಪೋನಿಯಾದಲ್ಲಿರುವ ಮಕ್ಕಳ ಆಸ್ಪತ್ರೆ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ರಾಬರ್ಟ್ ಸ್ಟೀಯರ್ ಅಮೇರಿಕೆಯ ಪತ್ರಿಕೆಯೊಂದರಲ್ಲಿ ತಿಳಿಸಿರುವಂತೆ ಆ ದೇಶದಲ್ಲಿ ಒಂದುವರೆ ಲಕ್ಷ ಪುಟ್ಟ ಮಕ್ಕಳು “ಶೆಕನ್ ಬೇಬಿ ಸಿಂಡ್ರೋಮ”ನ ಪರಿಣಾಮವಾಗಿ ಗಂಭೀರ ಸ್ವರೂಪದ ದೈಹಿಕ ಗಾಯಕ್ಕೆ ಒಳಗಾಗುತ್ತಾರೆ. ಇವರಲ್ಲಿ ಎಷ್ಟೋ ಮಕ್ಕಳು ಶಾಶ್ವತವಾಗಿ ಅಂಗವಿಕಲರಾಗುವುದೂ ಸತ್ಯ.

ಶೇಕನ್ ಬೇಬಿಸಿಂಡ್ರೋಮ್’ಗೆ ಗುರಿಯಾದ ಮಗುವಿನ ಚಿತ್ರ ಬಹಳ ಭಯಾನಕವಾದುದು. ಮಿದುಳಿನ ಒಳಗೆ ಆಘಾತದ ಪರಿಣಾಮವಾಗಿ ರಕ್ತ ಸ್ರಾವವುಂಟಾಗುತ್ತದೆ. ಕೆಲವೊಮ್ಮೆ ಕಣ್ಣುಗಳಿಂದ ರಕ್ತಬರುವುದೂ ಇರುತ್ತದೆ. ಆದರೆ ತಲೆಯ ಹೊರಗೆ ಯಾವುದೇ ಬಗೆಯ ಗಾಯವಾಗಿರುವ ಸೂಚನೆ ಇರುವುದಿಲ್ಲ ಇಂಥಹ ಸಂದರ್ಭಗಳಲ್ಲಿ ಮಕ್ಕಳು ತೀವ್ರ ಅಪಾಯಕ್ಕೆ ಗುರಿಯಾಗುತ್ತಾರೆ. ಸಾವೂ ಕೂಡ ಸಂಭವಿಸುವುದಿದೆ. ಅಮೇರಿಕೆಯ ಮಿಚಿಗನ್ ವಿಶ್ವದ್ಯಾಲಯದ ತಜ್ಞರ ತಂಡವೊಂದು ಸೇಕನ್‌ಬೇಬಿ ಸಿಂಡ್ರೋಮ್‌ಗೆ ಗುರಿಯಾದ ಮಕ್ಕಳ ಬಗೆಗೆ ವ್ಯಾಪಕ ಅಧ್ಯಯನ ನಡೆಸಿದೆ. ಇವರ ಅಧ್ಯಯನದ ಪ್ರಕಾರ ಆಘಾತಕ್ಕೆ ಒಳಗಾದ ಮಕ್ಕಳ ಕಣ್ಣುಗಳ ಪರಿಶೀಲನೆಯಿಂದ ಅಪಾಯದ ಪ್ರಮಾಣದಲ್ಲಿ ಅಂದಾಜಿಸಬಹುದು. ಕಣ್ಣುಗಳ ಒಳಗೆ ಆಗಿರುವ ಹಾನಿಯಂತೆ ಮಿದುಳೊಳಗೂ ಕೂಡ ಆಗಿರುತ್ತದೆ. ಅಮೇರಿಕೆಯಲ್ಲಿ ಹೀಗೆಯೇ ಪ್ರೀತಿಗಾಗಿ ಮ್ಯಥ್ಯೂನ್ ಎಂಬ ಮಗುವನ್ನು ಒಬ್ಬ ವ್ಯಕ್ತಿ ಪ್ರೀತಿಯಿಂದ ಮೇಲಕ್ಕೆ ಎತ್ತಿ ಅಲ್ಲಾಡಿಸುತ್ತ ಹಾಸಿಗೆಯ ಮೇಲೆ ಮಲಗಿಸಿದ ಅದಕ್ಕೆ ಕೂಡಲೆ ಶೇಕನ್‌ಬೇಬಿ ಸಿಂಡ್ರೋಮ್ ಆಗಿಯೇ ಬಿಟ್ಟಿತು. ಆ ಮಗುವನ್ನು ಆಸ್ಪತ್ರೆಗೆ ಹಾಕಲಾಯಿತು. ಆ ಮಗುವಿನ ತಲೆಯ ಬುರುಡೆ ಬಿರುಕು ಬಿಟ್ಟಿತು. ಆಂತರೀಕ ರಕ್ತ ಸ್ರಾವದಿಂದ ಮಿದುಳು ಎಷ್ಟು ಊದಿಕೊಂಡಿತ್ತೆಂದರೆ ಶಸ್ತ್ರ ಕ್ರಿಯೆಯ ಸಂದರ್ಭದಲ್ಲಿ ಮಿದುಳಿನಲ್ಲಿ ಚಿಮ್ಮಿದ ರಕ್ತ ಆಸ್ಪತ್ರೆಯ ನೆಲದಲ್ಲಿ ಮಡುಗಟ್ಟಿ ನಿಂತಿತು! ಕೊನೆಗೆ ಆ ಮಗುವಿಗೆ ಸಾವು ಸಂಭವಿಸಿತು. ಈ ಕಾರಣಕ್ಕಾಗಿ ಮಗುವನ್ನು ಎತ್ತಿಮುದ್ದಾಡಿದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಅದಕ್ಕಾಗಿ ನೆನಪಿರಲಿ ಪುಟ್ಟ ಮಕ್ಕಳನ್ನು ಎಚ್ಚಿರಿಕೆಯಿಂದ ನೋಡಿಕೊಳ್ಳಬೇಕಿದೆ. ಅದು ಮಲಗಿದಲ್ಲೇ ನೋಡುವುದು ಒಳ್ಳೆಯದು. ಮುದ್ದಿಸಲು ಕೈಗೆತ್ತಿಕೊಳ್ಳಬೇಕೆನಿಸಿದರೆ ಒಂದು ಹೊದಿಕೆಯ ಸಂಗಡ ಮೃದುವಾಗಿ ಎತ್ತಿಕೊಳ್ಳಬೇಕು. ಎಷ್ಟೇ ಜನ ಮಕ್ಕಳನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಳ್ಳುವುದು ಮೇಲಕ್ಕೆತ್ತುವುದು, ಎಸೆದು ಹಿಡಿಯುವುದು ಇಂಥಹ ಭಯಾನಕ ಹಿಂಸೆಯನ್ನು ಮಕ್ಕಳಿಗೆಂದಿಗೂ ಮಾಡಬಾರದು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...