Home / ಲೇಖನ / ವಿಜ್ಞಾನ / ಮಗುವನ್ನು ಅಲ್ಲಾಡಿಸಬೇಡಿ ಜೋಕೆ?!!

ಮಗುವನ್ನು ಅಲ್ಲಾಡಿಸಬೇಡಿ ಜೋಕೆ?!!

ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಮಕ್ಕಳು ಕಂಡರೆ ಯಾರಿಗೆ ತಾನೆ ಮುದ್ದು ಅಥವಾ ಪ್ರೀತಿ ಇರುವುದಿಲ್ಲ ಹೇಳಿ? ಪುಟ್ಟಮಕ್ಕಳನ್ನು ನಾವು ಅತಿಯಾಗಿ ಅಲುಗಿಸುತ್ತೇವೆ. ಸಣ್ಣ ಮಕ್ಕಳನ್ನು ಎತ್ತಿ ಹಿಸುಕಿ ತಲೆಸವರಿ, ಮೈದಡವಿ ಎತ್ತಿ ಹಾಸಿಗೆಯ ಮೇಲೆ ಹಾಕುತ್ತೇವೆ. ಅವು ಸೂಕ್ಷ್ಮವೆಂದು ತಿಳಿದರೂ ಹೊಟ್ಟೆಯ ಭಾಗದಿಂದ ಎತ್ತಿಹಾಗೆಯೆ ಮಲಗಿಸಿದಾಗ ತಲೆ ಅಲ್ಲಾಡಿ ಅಪಾಯ ಗ್ಯಾರೆಂಟಿ ಆಗುತ್ತದೆ. ಸಣ್ಣಮಕ್ಕಳ ಒಳ‌ಅಂಗಾಂಗಗಳು ಬಹಳ ಮೃದುವಾಗಿರುತ್ತವೆ. ಎಷ್ಟೋ ಸಣ್ಣ ಮಕ್ಕಳಲ್ಲಿ ತಲೆಬುರುಡೆಯು ಪೂರ್ಣವಾಗಿ ಗಡುಸಾಗಿರುವುದಿಲ್ಲ ಎಷ್ಟೋ ಜನ ಕಂದಮ್ಮಗಳನ್ನು ಜೋರಾಗಿ ಅಲ್ಲಾಡಿಸುವುದು ಉಂಟು. ಇಂಥಹ ಚಟುವಟಿಕೆಗಳಿಂದ ಮಗುವಿನ ಮೇಲೆ ಆಗಬಹುದಾದ ಆಘಾತಕರ ಪರಿಣಾಮದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಮೇರಿಕ ಒಂದರಲ್ಲೇ ಇಂಥಹ ಆಘಾತಗಳ ಕಾರಣಗಳಿಂದಾಗಿ ಪ್ರತಿ ವರ್ಷ ೧,೧೦೦ ಮಕ್ಕಳು ಸಾವಿಗೀಡಾಗುತ್ತಾರೆ. ಅಮೇರಿಕೆಯ ಕ್ಯಾಲಿಪೋನಿಯಾದಲ್ಲಿರುವ ಮಕ್ಕಳ ಆಸ್ಪತ್ರೆ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ರಾಬರ್ಟ್ ಸ್ಟೀಯರ್ ಅಮೇರಿಕೆಯ ಪತ್ರಿಕೆಯೊಂದರಲ್ಲಿ ತಿಳಿಸಿರುವಂತೆ ಆ ದೇಶದಲ್ಲಿ ಒಂದುವರೆ ಲಕ್ಷ ಪುಟ್ಟ ಮಕ್ಕಳು “ಶೆಕನ್ ಬೇಬಿ ಸಿಂಡ್ರೋಮ”ನ ಪರಿಣಾಮವಾಗಿ ಗಂಭೀರ ಸ್ವರೂಪದ ದೈಹಿಕ ಗಾಯಕ್ಕೆ ಒಳಗಾಗುತ್ತಾರೆ. ಇವರಲ್ಲಿ ಎಷ್ಟೋ ಮಕ್ಕಳು ಶಾಶ್ವತವಾಗಿ ಅಂಗವಿಕಲರಾಗುವುದೂ ಸತ್ಯ.

ಶೇಕನ್ ಬೇಬಿಸಿಂಡ್ರೋಮ್’ಗೆ ಗುರಿಯಾದ ಮಗುವಿನ ಚಿತ್ರ ಬಹಳ ಭಯಾನಕವಾದುದು. ಮಿದುಳಿನ ಒಳಗೆ ಆಘಾತದ ಪರಿಣಾಮವಾಗಿ ರಕ್ತ ಸ್ರಾವವುಂಟಾಗುತ್ತದೆ. ಕೆಲವೊಮ್ಮೆ ಕಣ್ಣುಗಳಿಂದ ರಕ್ತಬರುವುದೂ ಇರುತ್ತದೆ. ಆದರೆ ತಲೆಯ ಹೊರಗೆ ಯಾವುದೇ ಬಗೆಯ ಗಾಯವಾಗಿರುವ ಸೂಚನೆ ಇರುವುದಿಲ್ಲ ಇಂಥಹ ಸಂದರ್ಭಗಳಲ್ಲಿ ಮಕ್ಕಳು ತೀವ್ರ ಅಪಾಯಕ್ಕೆ ಗುರಿಯಾಗುತ್ತಾರೆ. ಸಾವೂ ಕೂಡ ಸಂಭವಿಸುವುದಿದೆ. ಅಮೇರಿಕೆಯ ಮಿಚಿಗನ್ ವಿಶ್ವದ್ಯಾಲಯದ ತಜ್ಞರ ತಂಡವೊಂದು ಸೇಕನ್‌ಬೇಬಿ ಸಿಂಡ್ರೋಮ್‌ಗೆ ಗುರಿಯಾದ ಮಕ್ಕಳ ಬಗೆಗೆ ವ್ಯಾಪಕ ಅಧ್ಯಯನ ನಡೆಸಿದೆ. ಇವರ ಅಧ್ಯಯನದ ಪ್ರಕಾರ ಆಘಾತಕ್ಕೆ ಒಳಗಾದ ಮಕ್ಕಳ ಕಣ್ಣುಗಳ ಪರಿಶೀಲನೆಯಿಂದ ಅಪಾಯದ ಪ್ರಮಾಣದಲ್ಲಿ ಅಂದಾಜಿಸಬಹುದು. ಕಣ್ಣುಗಳ ಒಳಗೆ ಆಗಿರುವ ಹಾನಿಯಂತೆ ಮಿದುಳೊಳಗೂ ಕೂಡ ಆಗಿರುತ್ತದೆ. ಅಮೇರಿಕೆಯಲ್ಲಿ ಹೀಗೆಯೇ ಪ್ರೀತಿಗಾಗಿ ಮ್ಯಥ್ಯೂನ್ ಎಂಬ ಮಗುವನ್ನು ಒಬ್ಬ ವ್ಯಕ್ತಿ ಪ್ರೀತಿಯಿಂದ ಮೇಲಕ್ಕೆ ಎತ್ತಿ ಅಲ್ಲಾಡಿಸುತ್ತ ಹಾಸಿಗೆಯ ಮೇಲೆ ಮಲಗಿಸಿದ ಅದಕ್ಕೆ ಕೂಡಲೆ ಶೇಕನ್‌ಬೇಬಿ ಸಿಂಡ್ರೋಮ್ ಆಗಿಯೇ ಬಿಟ್ಟಿತು. ಆ ಮಗುವನ್ನು ಆಸ್ಪತ್ರೆಗೆ ಹಾಕಲಾಯಿತು. ಆ ಮಗುವಿನ ತಲೆಯ ಬುರುಡೆ ಬಿರುಕು ಬಿಟ್ಟಿತು. ಆಂತರೀಕ ರಕ್ತ ಸ್ರಾವದಿಂದ ಮಿದುಳು ಎಷ್ಟು ಊದಿಕೊಂಡಿತ್ತೆಂದರೆ ಶಸ್ತ್ರ ಕ್ರಿಯೆಯ ಸಂದರ್ಭದಲ್ಲಿ ಮಿದುಳಿನಲ್ಲಿ ಚಿಮ್ಮಿದ ರಕ್ತ ಆಸ್ಪತ್ರೆಯ ನೆಲದಲ್ಲಿ ಮಡುಗಟ್ಟಿ ನಿಂತಿತು! ಕೊನೆಗೆ ಆ ಮಗುವಿಗೆ ಸಾವು ಸಂಭವಿಸಿತು. ಈ ಕಾರಣಕ್ಕಾಗಿ ಮಗುವನ್ನು ಎತ್ತಿಮುದ್ದಾಡಿದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಅದಕ್ಕಾಗಿ ನೆನಪಿರಲಿ ಪುಟ್ಟ ಮಕ್ಕಳನ್ನು ಎಚ್ಚಿರಿಕೆಯಿಂದ ನೋಡಿಕೊಳ್ಳಬೇಕಿದೆ. ಅದು ಮಲಗಿದಲ್ಲೇ ನೋಡುವುದು ಒಳ್ಳೆಯದು. ಮುದ್ದಿಸಲು ಕೈಗೆತ್ತಿಕೊಳ್ಳಬೇಕೆನಿಸಿದರೆ ಒಂದು ಹೊದಿಕೆಯ ಸಂಗಡ ಮೃದುವಾಗಿ ಎತ್ತಿಕೊಳ್ಳಬೇಕು. ಎಷ್ಟೇ ಜನ ಮಕ್ಕಳನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಳ್ಳುವುದು ಮೇಲಕ್ಕೆತ್ತುವುದು, ಎಸೆದು ಹಿಡಿಯುವುದು ಇಂಥಹ ಭಯಾನಕ ಹಿಂಸೆಯನ್ನು ಮಕ್ಕಳಿಗೆಂದಿಗೂ ಮಾಡಬಾರದು.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...