ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ)
ಕಪ್ಪು
ಕತ್ತಲೆ ಮಿಂಚು
ತೊಟ್ಟಿಲಲ್ಲೊಬ್ಬ ಪುಟ್ಟ ಮನುಷ್ಯ
‘ಹೆಂಗಸರ ಚಪ್ಪಲಿ’ ಎಂಬ ಹೂವಿಗಿಂತಲು ದಪ್ಪ
ತನ್ನ ಕಾಲ ಹೆಬ್ಬೆಟ್ಟನ್ನು ಚೀಪುತ್ತಿದ್ದ
ಸುಖಗಳಿಗೆ ಅನಂತತ್ವವನ್ನು
ಟಿಕ್ ಟಿಕಿಸುತ್ತಿದ್ದ ಗಡಿಯಾರದ
ಕೈಗಳನ್ನು ಕಟ್ಟಿ ಹಾಕಿತು
ಜೇಡವೊಂದು
ಆ ದುರ್ಬಲ ಎಳೆ ಹರಿದಾಗ
ಹೆಂಡತಿ
ಗಂಡನಿಗೆ ಕೆಂಪು ಸೇಬು ಕೊಟ್ಟಳು
ಮತ್ತು ಮೌನವಾಗಿ
ತನ್ನ ಕುಟುಂಬದ ಗೂಡಿನ
ಹೊಸ್ತಿಲ ಮೇಲೆ
ಕುಳಿತಳು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.