Home / ಕವನ / ಅನುವಾದ / ಛತ್ರಿಗಳ ಕಥೆ

ಛತ್ರಿಗಳ ಕಥೆ

ಮೂಲ: ಬುದ್ಧದೇವ ದಾಸಗುಪ್ತ

ಛತ್ರಿಗಳೆಲ್ಲ ಥಟ್ಟನೆ ಬೀದಿಗೆ ಬಂದಿದ್ದಾವೆ,
ಒಂದರ ಸಹಾಯದಿಂದ ಒಂದು ನಡೆಯುತ್ತಿದ್ದಾವೆ.
ಪುಟ್ಟನೆ ಛತ್ರಿಯ ಹೆಗಲಿನ ಮೇಲೆ ಒಂದು ಕೈಯಿಟ್ಟು
ದೊಡ್ಡ ಛತ್ರಿ ನಡೆಯುತ್ತಿದೆ ತಾನೇ ಪ್ರತ್ಯೇಕ.
ಎಷ್ಟೋ ಹೊತ್ತಿನಿಂದ ಪಾಪ ಬಸ್‌ ಸ್ಟಾಂಡ್ ಕಟ್ಟೆ ಮೇಲೆ ನಿಂತು
ಯಾರು ಬರುವರಂತಲೋ ಕಾದ ಒಂದು ಛತ್ರಿ
ಕಾದು ಕಾದು ಕಾದು
ಹೇಳಿದ್ದ ಆಸಾಮಿ ಬರದೆ
ಕೋಪ ದುಃಖ ಅವಮಾನದ ತಾಪದಲ್ಲಿ ಸೀದು
ಸ್ಟ್ಯಾಂಡು ಬಿಟ್ಟು ಹೊರಗೆ ಬಂತು, ದಾರಿಯಲ್ಲಿ ಹೋಗುತ್ತಿದ್ದ
ಸಾವಿರಾರು ಛತ್ರಿ ಮಧ್ಯೆ ತೂರಿ ಸೇರಿ ಹೋಯಿತು.
ಅಗೋ ಅಲ್ಲಿ ಇದ್ದಕ್ಕಿದ್ದ ಹಾಗೆ ದೂರ ತಲೆಯ ಮೇಲೆ
ಬಿಳಿಯ ಭಾರಿ ಭತ್ರಿ ಮೆಲ್ಲಗರಳಿಕೊಂಡಿತು,
ಅದೇ ಹೊತ್ತಿನಲ್ಲಿ ದೈತ್ಯನಂಥ ಒಂದು ಕರೀ ಮೋಡ
ಮೂಡಿ ಬಿಳಿಯ ಛತ್ರಿಮೇಲೆ ಕಾವು ಕೂತಿತು,
ದಾರಿಯಲ್ಲಿ ಬಿಡಿ ಬಿಡೀ ಹೋಗುತ್ತಿದ್ದ ಛತ್ರಿಗಳು
ಹಠಾತ್ತನೆ ಒಂದೇ ಸಲ ನಿಂತುಬಿಟ್ಟವು.
ಒಂದು ಛತ್ರಿ ಮತ್ತೊಂದರ ಕಡೆಗೆ ಓಡಿ ನುಗ್ಗಿದವು
ಕಟಕಟನೆ ಹಲ್ಲು ಕಡಿದು, ಕುತ್ತಿಗೆಗೆ ಕೈಹಾಕಿ
ಒಂದನ್ನೊಂದು ಎಳೆದು ನೂಕಿ ಎಗರಾಡಿದವು.
ಹಿಗ್ಗಾಮುಗ್ಗಾ ಎಳೆದಾಡಿ, ಕಡೆಗೆ ಪೂರಾ ಸುಸ್ತಾಗಿ
ಒಂದೊಂದೇ ಛತ್ರಿ ಮನೆಯ ದಾರಿ ಹಿಡಿದವು;
ಬಂದದ್ದೇ ಮಾತಿಲ್ಲದೆ ಮನೆಯಲ್ಲೊಂದು ಮೇಲೆ ಸೇರಿ
ಒರಗಿಕೊಂಡಿವೆ.
ತುಂಬಿಕೊಂಡ ನೀರನ್ನೆಲ್ಲ ಹನಿಹನಿ ಹನಿ ನೆಲಕ್ಕಿಳಿಸಿ
ಭಾರ ಕಳೆದು ಹಗುರಾಗಿ
ತೆಪ್ಪಗಾಗಿವೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...