Home / ಕವನ / ಅನುವಾದ / ಛತ್ರಿಗಳ ಕಥೆ

ಛತ್ರಿಗಳ ಕಥೆ

ಮೂಲ: ಬುದ್ಧದೇವ ದಾಸಗುಪ್ತ

ಛತ್ರಿಗಳೆಲ್ಲ ಥಟ್ಟನೆ ಬೀದಿಗೆ ಬಂದಿದ್ದಾವೆ,
ಒಂದರ ಸಹಾಯದಿಂದ ಒಂದು ನಡೆಯುತ್ತಿದ್ದಾವೆ.
ಪುಟ್ಟನೆ ಛತ್ರಿಯ ಹೆಗಲಿನ ಮೇಲೆ ಒಂದು ಕೈಯಿಟ್ಟು
ದೊಡ್ಡ ಛತ್ರಿ ನಡೆಯುತ್ತಿದೆ ತಾನೇ ಪ್ರತ್ಯೇಕ.
ಎಷ್ಟೋ ಹೊತ್ತಿನಿಂದ ಪಾಪ ಬಸ್‌ ಸ್ಟಾಂಡ್ ಕಟ್ಟೆ ಮೇಲೆ ನಿಂತು
ಯಾರು ಬರುವರಂತಲೋ ಕಾದ ಒಂದು ಛತ್ರಿ
ಕಾದು ಕಾದು ಕಾದು
ಹೇಳಿದ್ದ ಆಸಾಮಿ ಬರದೆ
ಕೋಪ ದುಃಖ ಅವಮಾನದ ತಾಪದಲ್ಲಿ ಸೀದು
ಸ್ಟ್ಯಾಂಡು ಬಿಟ್ಟು ಹೊರಗೆ ಬಂತು, ದಾರಿಯಲ್ಲಿ ಹೋಗುತ್ತಿದ್ದ
ಸಾವಿರಾರು ಛತ್ರಿ ಮಧ್ಯೆ ತೂರಿ ಸೇರಿ ಹೋಯಿತು.
ಅಗೋ ಅಲ್ಲಿ ಇದ್ದಕ್ಕಿದ್ದ ಹಾಗೆ ದೂರ ತಲೆಯ ಮೇಲೆ
ಬಿಳಿಯ ಭಾರಿ ಭತ್ರಿ ಮೆಲ್ಲಗರಳಿಕೊಂಡಿತು,
ಅದೇ ಹೊತ್ತಿನಲ್ಲಿ ದೈತ್ಯನಂಥ ಒಂದು ಕರೀ ಮೋಡ
ಮೂಡಿ ಬಿಳಿಯ ಛತ್ರಿಮೇಲೆ ಕಾವು ಕೂತಿತು,
ದಾರಿಯಲ್ಲಿ ಬಿಡಿ ಬಿಡೀ ಹೋಗುತ್ತಿದ್ದ ಛತ್ರಿಗಳು
ಹಠಾತ್ತನೆ ಒಂದೇ ಸಲ ನಿಂತುಬಿಟ್ಟವು.
ಒಂದು ಛತ್ರಿ ಮತ್ತೊಂದರ ಕಡೆಗೆ ಓಡಿ ನುಗ್ಗಿದವು
ಕಟಕಟನೆ ಹಲ್ಲು ಕಡಿದು, ಕುತ್ತಿಗೆಗೆ ಕೈಹಾಕಿ
ಒಂದನ್ನೊಂದು ಎಳೆದು ನೂಕಿ ಎಗರಾಡಿದವು.
ಹಿಗ್ಗಾಮುಗ್ಗಾ ಎಳೆದಾಡಿ, ಕಡೆಗೆ ಪೂರಾ ಸುಸ್ತಾಗಿ
ಒಂದೊಂದೇ ಛತ್ರಿ ಮನೆಯ ದಾರಿ ಹಿಡಿದವು;
ಬಂದದ್ದೇ ಮಾತಿಲ್ಲದೆ ಮನೆಯಲ್ಲೊಂದು ಮೇಲೆ ಸೇರಿ
ಒರಗಿಕೊಂಡಿವೆ.
ತುಂಬಿಕೊಂಡ ನೀರನ್ನೆಲ್ಲ ಹನಿಹನಿ ಹನಿ ನೆಲಕ್ಕಿಳಿಸಿ
ಭಾರ ಕಳೆದು ಹಗುರಾಗಿ
ತೆಪ್ಪಗಾಗಿವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...