Home / ಕವನ / ಕವಿತೆ / ರತ್ನ ಬೇವಾರ್‍ಸಿ

ರತ್ನ ಬೇವಾರ್‍ಸಿ

ಐನೋರ್ ವೊಲದಲ್ ಚಾಕ್ರಿ ಮಾಡ್ತ
ಸಂಜಿ ಆಯ್ತಂದ್ರೆ
ಚಿಂತಿ ಮಾಡ್ತೀನ್- ಯೆಂಗಿರತೈತೆ
ನಂಜಿ ಎದ್ಬಂದ್ರೆ. ೧

ನಂಜಿ ನೆಪ್ಪಾಯ್ತ್! ಆದಿ ಗಿಡದಾಗ್
ಊವಾ ಜಲ್ಜಲ್ದಿ
ಕೂದಂಗೆಲ್ಲ ಯೆಚ್ಕೋಂತೈತೆ
ಆಸೆ ಬಲೆ ಬಲ್ದಿ. ೨

ಊವಾ ಕೂದ್ರಾ ಸಂತೋಸಾನಾ
ಅದನ್ ಎಲ್ ಇಡಿಸೋನೆ?
ಚಿಂತಿಸ್ತಾ ನಿಂತ್ಕೋಂತೀನ್: ‘ಅಯ್ಯೊ!
ಯಾರಿಗ್ ಮುಡಿಸೋನೆ?’ ೩

ನಾನ್ ಯೆಂಗ್ ಓಯ್ತೀನ್ ಅದೆ ಗೊತ್ತಿಲ್ದೆ
ನಿಂತಿದ್ದಂಗೇನೆ
ನಡಿತಾನಿದ್ರೆ ಬತ್ತೀನ್ ನಾ ನಂ
ಗುಡಿಸಿಲ್ ತಾಕೇನೆ. ೪

ಗುಡಿಸಿಲ್ ಬೀಗ ತುಕ್ಕ್ ಇಡದೈತೆ
ನಂಜಿ ಅಲ್ಲಿಲ್ಲ!
ಕಣ್ಣೀರ್ ತುಂಬ್ಕೊಂಡ್ ನೋಡ್ತೀನಾಗ
ಮನೆ ಮೇಲ್ ಮಳೆ ಬಿಲ್ಲ! ೫

ಗುಡಿಸಿಲ್ ಬಾಗಿಲ್ ಬೀಗದಂಗೇನೆ
ಮನಸಿನ್ ರಾಗಾನು.
‘ನಂಜಿ ಇಲ್ಲದ್ ಮನೆಗ್ ಯಾಕ್ಬರ್‍ತಿ?’
ಅಂತೈತ್ ಬೇಗಾನು! ೬

ರತ್ನನ್ ನಂಜೀಗ್ ಮುಡಿಸ್ಬೇಕಂತ
ತಂದಿದ್ ಊನೆಲ್ಲ
ನಾವಿದ್ ಗುಡಿಸಿಲ್ ಮುಂದಿಕ್ತೀನಿ-
ಬೇರೆ ತಾವಿಲ್ಲ. ೭

ಇಂಗ್ ಊ ಮುಡಿಸಿ ವೋಯ್ತೀನಂಗೇ
ಬಕ್ಕೊಂಡ್ ಮೊಕ ಮರಸಿ.
ನಾನ್ ಎಂಗ್ ಓದ್ರೆ ತಾನೇ ಏನು?
ರತ್ನ ಬೇವಾರ್‍ಸಿ! ೮
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...