Home / ಕವನ / ಕವಿತೆ / ರತ್ನ ಬೇವಾರ್‍ಸಿ

ರತ್ನ ಬೇವಾರ್‍ಸಿ

ಐನೋರ್ ವೊಲದಲ್ ಚಾಕ್ರಿ ಮಾಡ್ತ
ಸಂಜಿ ಆಯ್ತಂದ್ರೆ
ಚಿಂತಿ ಮಾಡ್ತೀನ್- ಯೆಂಗಿರತೈತೆ
ನಂಜಿ ಎದ್ಬಂದ್ರೆ. ೧

ನಂಜಿ ನೆಪ್ಪಾಯ್ತ್! ಆದಿ ಗಿಡದಾಗ್
ಊವಾ ಜಲ್ಜಲ್ದಿ
ಕೂದಂಗೆಲ್ಲ ಯೆಚ್ಕೋಂತೈತೆ
ಆಸೆ ಬಲೆ ಬಲ್ದಿ. ೨

ಊವಾ ಕೂದ್ರಾ ಸಂತೋಸಾನಾ
ಅದನ್ ಎಲ್ ಇಡಿಸೋನೆ?
ಚಿಂತಿಸ್ತಾ ನಿಂತ್ಕೋಂತೀನ್: ‘ಅಯ್ಯೊ!
ಯಾರಿಗ್ ಮುಡಿಸೋನೆ?’ ೩

ನಾನ್ ಯೆಂಗ್ ಓಯ್ತೀನ್ ಅದೆ ಗೊತ್ತಿಲ್ದೆ
ನಿಂತಿದ್ದಂಗೇನೆ
ನಡಿತಾನಿದ್ರೆ ಬತ್ತೀನ್ ನಾ ನಂ
ಗುಡಿಸಿಲ್ ತಾಕೇನೆ. ೪

ಗುಡಿಸಿಲ್ ಬೀಗ ತುಕ್ಕ್ ಇಡದೈತೆ
ನಂಜಿ ಅಲ್ಲಿಲ್ಲ!
ಕಣ್ಣೀರ್ ತುಂಬ್ಕೊಂಡ್ ನೋಡ್ತೀನಾಗ
ಮನೆ ಮೇಲ್ ಮಳೆ ಬಿಲ್ಲ! ೫

ಗುಡಿಸಿಲ್ ಬಾಗಿಲ್ ಬೀಗದಂಗೇನೆ
ಮನಸಿನ್ ರಾಗಾನು.
‘ನಂಜಿ ಇಲ್ಲದ್ ಮನೆಗ್ ಯಾಕ್ಬರ್‍ತಿ?’
ಅಂತೈತ್ ಬೇಗಾನು! ೬

ರತ್ನನ್ ನಂಜೀಗ್ ಮುಡಿಸ್ಬೇಕಂತ
ತಂದಿದ್ ಊನೆಲ್ಲ
ನಾವಿದ್ ಗುಡಿಸಿಲ್ ಮುಂದಿಕ್ತೀನಿ-
ಬೇರೆ ತಾವಿಲ್ಲ. ೭

ಇಂಗ್ ಊ ಮುಡಿಸಿ ವೋಯ್ತೀನಂಗೇ
ಬಕ್ಕೊಂಡ್ ಮೊಕ ಮರಸಿ.
ನಾನ್ ಎಂಗ್ ಓದ್ರೆ ತಾನೇ ಏನು?
ರತ್ನ ಬೇವಾರ್‍ಸಿ! ೮
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...