ಭೋಳ್ಯಾ

ಲೇ ಮೈತೊಳದ ಬಸವಣ್ಣ
ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ,
ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ
ಅವಂಗೆ ಬೂದಿ ಬಡಿಯ
ಮಾತೆತ್ತಿದ್ರೆ ತೋರಸ್ತಾನೆ ಮಸಣಾ,
ಉರೀಬೇಡ ನೀ ಆಗ್ತೀ ಹೆಣಾ!
ಅಂತಾ ಹೆದರಸ್ತಾನೆ

ಉಣ್ಣೋರುಣ್ಲಿ ತಿನ್ನೋರ್ತಿನ್ಲಿ ಅಂದ್ರೆ
ಬರ್ತಾತ ನಿನ್ನ ಕಪಾಲ ಕೈಯಾಗೆ ನಿಮ್ಮಪ್ನಂಗೆ
ಬೆಳ್ಳಗಿದ್ದದ್ದೆಲ್ಲಾ ಹಾಲಂತೀ,
ಥಳ್ಳೆಂದದ್ದೆಲ್ಲಾ ಬೆಳ್ಳೀ ಅಂತೀ
ತುಟಿ ಮಾತ್ನ ಹೊಟ್ಯಾಗಿನ ಮಾತಂತ ನಂಬ್ತೀ
ಎಳೇಮುದ್ದಂತ ಹಾವಿನ ಮರೀನ ಮುದ್ದಿಸ್ತೀ
ಬಣ್ಣಾ ನಂಬಿ ಹೂ ಮೂಸಾಕ್ಹೋಗ್ತಿ,

ಹಾಲು ಸುಣ್ಣದ ನೀರಾಗಿ, ಬೆಳ್ಳಿ ಉರಿಯೋ ಕೊಳ್ಯಾಗಿ
ಹೂವಿನ ಕೆಳಗಿನ ಮುಳ್ಳು ಚುಚ್ಚಿ,
ಹಾವು ಉರುಲಾಗಿ ಕಚ್ಚಿದಾಗ
ಲೇ ಭೋಳ್ಯಾ ಭೋರ್ಯಾಡಿ ಅಳ್ತೀ
ಮತ್ತೆ ಮಣ್ಣು ತೂರ್ಯಾಡಿ ಶಪಿಸ್ತೀ
ಕೊನಿಗೆ ನಿಮ್ಮಪ್ಪನ ಮನಿದಾರೀ ಹಿಡಕಂಡು
ಹೊಯ್ಕೊಂತ ಹೋಗ್ತೀ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರಾಳ
Next post ನೀ ಹೂಂ ಎಂದರೆ ಮಾತ್ರ!

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…