ಭೋಳ್ಯಾ

ಲೇ ಮೈತೊಳದ ಬಸವಣ್ಣ
ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ,
ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ
ಅವಂಗೆ ಬೂದಿ ಬಡಿಯ
ಮಾತೆತ್ತಿದ್ರೆ ತೋರಸ್ತಾನೆ ಮಸಣಾ,
ಉರೀಬೇಡ ನೀ ಆಗ್ತೀ ಹೆಣಾ!
ಅಂತಾ ಹೆದರಸ್ತಾನೆ

ಉಣ್ಣೋರುಣ್ಲಿ ತಿನ್ನೋರ್ತಿನ್ಲಿ ಅಂದ್ರೆ
ಬರ್ತಾತ ನಿನ್ನ ಕಪಾಲ ಕೈಯಾಗೆ ನಿಮ್ಮಪ್ನಂಗೆ
ಬೆಳ್ಳಗಿದ್ದದ್ದೆಲ್ಲಾ ಹಾಲಂತೀ,
ಥಳ್ಳೆಂದದ್ದೆಲ್ಲಾ ಬೆಳ್ಳೀ ಅಂತೀ
ತುಟಿ ಮಾತ್ನ ಹೊಟ್ಯಾಗಿನ ಮಾತಂತ ನಂಬ್ತೀ
ಎಳೇಮುದ್ದಂತ ಹಾವಿನ ಮರೀನ ಮುದ್ದಿಸ್ತೀ
ಬಣ್ಣಾ ನಂಬಿ ಹೂ ಮೂಸಾಕ್ಹೋಗ್ತಿ,

ಹಾಲು ಸುಣ್ಣದ ನೀರಾಗಿ, ಬೆಳ್ಳಿ ಉರಿಯೋ ಕೊಳ್ಯಾಗಿ
ಹೂವಿನ ಕೆಳಗಿನ ಮುಳ್ಳು ಚುಚ್ಚಿ,
ಹಾವು ಉರುಲಾಗಿ ಕಚ್ಚಿದಾಗ
ಲೇ ಭೋಳ್ಯಾ ಭೋರ್ಯಾಡಿ ಅಳ್ತೀ
ಮತ್ತೆ ಮಣ್ಣು ತೂರ್ಯಾಡಿ ಶಪಿಸ್ತೀ
ಕೊನಿಗೆ ನಿಮ್ಮಪ್ಪನ ಮನಿದಾರೀ ಹಿಡಕಂಡು
ಹೊಯ್ಕೊಂತ ಹೋಗ್ತೀ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರಾಳ
Next post ನೀ ಹೂಂ ಎಂದರೆ ಮಾತ್ರ!

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys