ಏಸಿಯ – ಯುರೋಪು

ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು
‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು
ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು
ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು,

ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ
ಮಾನವಗೆ; ಮತ್ತೆ ಮಂಜು ಮುಸುಕಿದ ಮುಡಿಯು
ಮೂಡಿಸಿದ ನಗೆ, -ನರನ ಭಾವನೆಯ ವರಿಹಾಸ!’
ವಿಂಧ್ಯೆ ನುಡಿಯಿತು ’ನಾಳೆ ನಾನಿಹೆನು,
ನೀ ಹುಡಿಯು.’

ಗಿರಿಯ ಕಂದರವಾಗಿ ಕಂದರವ ಗಿರಿಯಾಗಿ
ಪಲ್ಲಟಿಸಿದಾ ಕಾಲನೆತ್ತಿದ ಹಿಮಾಲಯವ,
ವಿಂಧ್ಯೆಯನು ಸದೆಬಡಿದು ಮುಂದೆ ಹಿಮಗಿರಿ ಬಾಗಿ,
ವಿಂಧ್ಯಯುನ್ನತಿ ಮೆರೆಯೆ, ಭೋಗಿಸಿರದೇ ಲಯವ?

ಮೂಜಗದಿ ಯೂರೋವದಿಂದು ಮೆರೆದಿರಲೇನು ?
ಏಸಿಯವದಿರಬಹುದು ನಾಳಿನಾ ಸುರಧೇನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ
Next post ಕಾಡುತಾವ ನೆನಪುಗಳು – ೧೧

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…