Home / ಕವನ / ಕೋಲಾಟ / ಹಾಲಕ್ಕಿ ಗೌಡರಿಗೆ ಕೊಡಬೇಕು

ಹಾಲಕ್ಕಿ ಗೌಡರಿಗೆ ಕೊಡಬೇಕು

ಪಾಂಡವರು ಲೈದೇ ಜನಗೋಳೋ
ಕೌರವರು ನೂರೊಂದು ಜನಗೋಳೋ || ೧ ||

ವಟ್ಟು ಜಾನ ಲಣ್ಣಾಲತಮದೀರೂ
ವಂದಲ್ಲೇ ವಂದೂ ಹೊಸಾಲದಿನದಲ್ಲೀ || ೨ ||

ಯೇನಂದೀ ಮಾತೇಲಾಡಿದಾರೋ
ವಂದಾಳೇ ವಂದೂ ದಿನದಲ್ಲೀ || ೩ ||

ಹಾರೆ ವಂದು ಕೋಲಾನೆ ಕಡಿಬೇಕೋ
ಆಡೂವಂದು ಕನ್ನಾಕೆ ತಂದೀರೋ || ೪ ||

ಆಸಾರೀ ಚೆನ್ನಾನ ಕರೆದಾರೋ
ಹನ್ನೆರಡ ಗಂಡ್ಯಾನೆ ಗೆಸುವಾರೋ || ೫ ||

ಹನ್ನೆರಡ ಸಬ್ಬೆನೇ ನಯುದಾರೋ
ಹನ್ನೆರಡ ಕುಂಚಾನೆ ಕಡಿದಾರೋ || ೬ ||

ಹನ್ನೆರಡ ಜನವೇ ನಿಂತಾರೋ
ಗೋಕಾಲೇಳು ಮಾಬುಲೊಡೆಯನ ಮನೆಯಲ್ಲಿ || ೭ ||

ಹನ್ನೆರಡ ಜನವೇ ನಿಂತಾರೂ
ಕಮಲಸೂರ ಮೊದಲೇ ಹೊಡೆದಾನೂ || ೮ ||

ವಾರಂದ ಬಿಮಟೀಕೆ ಹೊಡೆದಾನೂ
ಅಕ್ಲನೋ ಹೊಯ್ಲಾನೆ || ೯ ||

ವಂದಂಬು ಕೊಣತಾನೇ ಕುಣದಾರೋ
ಯರಡಂಬು ಕೊಣತಾನೇ ಕುಣದಾರೋ || ೧೦ ||

ಮೂರಂಬು ಕೊಣತಾನೇ ಕುಣದಾರೋ
ಆಕಾಸ ಬೂಮಂಡಲ ಹೋಡಿಯೆದ್ದೂ || ೧೧ ||

ವಂದು ಮೊಣಕಾಟ ಬೂಮೀನೆ ಕುಸಿದಾವೂ
ಹಂದಿ ಮುರಗ ಬಿಟ್ಟಾಕ ಸೇರಹೊದೋ || ೧೨ ||

ಹಕ್ಕಿಪಕ್ಸಿ ಆಕಾಸಕೆ ಸೇರಾರೇ
ಗೋವು ಗೆಂಟಿ ಹುಲುನೀರಾನೆ ಬಿಡುವಾರೋ || ೧೩ ||

ಈವ ಸುಗ್ಗೀ ನಮಗೇ ತೆರವಲಾ
ಹಾಲಕ್ಕಿ ಗೌಡರಿಗೆ ಕೊಡಬೇಕೂ || ೧೪ ||
*****
ಹೇಳಿದವರು: ಯಂಕಟ ರಾಮಕೃಷ್ಣ ಗೌಡ, ಕಲ್ಕೋಡು, ಹೆಗಡೆ ಊರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...