ವಿರಾಗ

ಕೇಶವ ಕೇಶವ ಮಾಧವಾ ನೀನು
ನನ್ನ ಮೊರೆಯ ನೀ ಕೇಳಲಾರೆಯಾ
ಏಳುತ್ತ ಬೀಳುತ್ತ ಸಾಗಿರವನನಗೆ
ಬಂದರೆಡು ಮಾತು ಹೇಳಲಾರೆಯಾ

ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ
ನನಗೊಂದು ನೀಡಿ ರಂಧ್ರದ ದೋಣಿ
ತೇಲುತ್ತಿದೆ ಮುಳುಗತ್ತಿದೆ ನಿತ್ಯ ನೋಡು
ಕಾಪಾಡದೆ ನೀನಿದ್ದರೆ ಜೀವ ಹಣಾ ಹಣಿ

ನಿರ್‍ಮಿಸಿದೆ ನನಗಾಗಿ ನೂರು ದುಗುಡ
ಮತ್ತೆ ಕಾಮ ಕ್ರೋಧದ ಬಣ್ಣಗಳು
ದೂರದಲಿ ನಿಂತು ಕಾಣುತಿಹೆ ನೀನು
ನನ್ನ ಬದುಕಾಗಿವೆ ಅವು ಸುಣ್ಣಗಳು

ಮುಟ್ಟಿಯು ಬಾಳದೆ ಬಿಟ್ಟಿಯೂ ಬಾಳಲಾರೆ
ಅಂತರಂಗದ ಇಂಗಿತ ಹೇಳಲಾರೆ
ಇತ್ತ ಭವ ಎಳೆಯುತ್ತಿರೆ ಅತ್ತ ಶಿವ
ಶರಣು ಬಂದಿಹೆ ನಾನಿನ್ನೂ ತಾಳಲಾರೆ

ಪಂಜರದೋಳ ಆತ್ಮಗೂಡು ಕಟ್ಟಿದೆ
ಬುದ್ಧಿ ಮನಗಳಿಂದ ಉಸಿರುಗಟ್ಟಿದೆ
ಬಾರೋ ಗೋವಿಂದ ಎತ್ತಕೊ ಬೇಗ
ಮಾಣಿಕ್ಯವಿಠಲನ ವಿರಾಗ ಗಗನಕ್ಕೆ ತಟ್ಟಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೪
Next post ಮಲ್ಲಿ – ೧೨

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…