Home / ಕವನ / ಕವಿತೆ / ತೊಟ್ಟಿಲಲ್ಲಿ ಹಾಕುವ ಹಾಡು

ತೊಟ್ಟಿಲಲ್ಲಿ ಹಾಕುವ ಹಾಡು

ಶಿಂದೀಗಿ ತಳದಳದಲ್ಲಿ ಸಂಗಮ್ಮನಽ ತಳ|
ಶಂಭೋ ಮಠದೇವ ಇಂದುದಯನಾಗೊ| ಜೋ ಜೋ||

ಭಂಗಾರ ತೊಟ್ಟೀಲ ಧೊರಿತಾಯಿ! ಕುಂದಲ|
ಸಿಂಗರದಾನ ಶ್ರೀಕೃಷ್ಣಗ ಛಂದಾಗಿ ತೂಗಾರಿ| ಜೋ…||

ಕರೆದು ಬಂದೆವು ಓಣಿ ನೆರೆದು ಬಂದಿತು ಮಂದಿ|
ಬಂದು ನಿಂತಾರವ್ವ ಕನ್ನಿ ಮುತ್ತೈದ್ಯಾರು| ಜೋ…||

ಸಕ್ಕರಿ ಪಾಯಸ ಬಸಿದು ಬಟ್ಟಲ ತುಂಬಿ|
ತುತಮಾಡಿ ಉಣಿಸಿದರ ಬಿಕಿಬಿಕಿ ಅಳತಾನ| ಜೋ…||

ಸಾದ ಸಿರಿಗಂಧ ತಯದು ಬಟ್ಟಲ ತುಂಬಿ|
ತೀಡಿ ತೀಡಿ ಹೆಚ್ಚಿದರ ಕಾಡಿ ಕಾಡಿ ಅಳತಾನ| ಜೋ…||

ನಾಗಬಂದೀನಂಗಿ ನಡುವಿನ ಮ್ಯಾಲ ತೊಡಸಿ|
ಆಡ್ಲಕ್ಕ ಹೋಗಂದ್ರ ಬೋರ್‍ಯಾಡಿ ಅಳತಾನ| ಜೋ…||

ಬಿಂದೂಲಿ ಇಡಸೀದ ಬಿಳಿಯಂಗಿ ತೊಡಸಿದ|
ಆಡಿ ಬಾ ಕಂದಂದ್ರ ಕಾಡಿ ಕಾಡಿ ಅಳತಾನ| ಜೋ…||

ನೀರಾಗ ನೆಳ ನೋಡಿ ಸೂರ್‍ಯ ಚಂದ್ರನ ಬೇಡಿ|
ಅದರಂಗ ತಾ ಬೇಡಿ ಬೋರ್‍ಯಾಡಿ ಅಳತಾನ| ಜೋ…||

ಎಳೆಮ್ಮಿ ನೊರೆಹಾಲ ತೊಟ್ಟಿಲದಾಗಿಟ್ಟೀದ|
ಆಡಿ ಬಂದ್ಕುಡಿಯಂದ್ರ ಕಾಡಿಕಾಡ್ಯಳತಾನ| ಜೋ…||
*****
ತೊಟ್ಟಿಲಲ್ಲಿ ಹಾಕುವ ಹಾಡು

ಹುಟ್ಟಿದ ಹನ್ನೆರಡನೆಯ ದಿನ ಕೂಸನ್ನು ತೊಟ್ಟಿಲಲ್ಲಿ ಹಾಕಿ ಹೆಸರಿಡುತ್ತಾರೆ. ಆಗ ಜೋಗುಳಹಾಡನ್ನು ಹಾಡುತ್ತಾರೆ. ಇಲ್ಲಿ ಕೊಟ್ಟಿರುವುದನ್ನು ಆ ಸಮಯದಲ್ಲಿ ಹಾಡುವರಾದರೂ ನಿತ್ಯಶಃ ಕೂಸನ್ನು ತೂಗುವಾಗ ಹೇಳಲಾಗುವಂತೆ ಇದರಲ್ಲಿಯ ವರ್ಣನೆಯ ವಿವರಗಳಿವೆ.

ಶಬ್ದ ಪ್ರಯೋಗಗಳು:- ಸಿಂದಿಗಿ=ಒಂದು ಊರು. ತಳ=ಸ್ಥಳ. ಸಾದ=ಕಪ್ಪು. ಬಿಂದೂಲಿ=ಮುಂಗೈಯ ಆಭರಣ. ನೆಳ=ನೆರಳು. ಅದರಂಗ=ಅದರಂತಹದನ್ನು.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...