Home / ಕವನ / ಕವಿತೆ / ತೊಟ್ಟಿಲಲ್ಲಿ ಹಾಕುವ ಹಾಡು

ತೊಟ್ಟಿಲಲ್ಲಿ ಹಾಕುವ ಹಾಡು

ಶಿಂದೀಗಿ ತಳದಳದಲ್ಲಿ ಸಂಗಮ್ಮನಽ ತಳ|
ಶಂಭೋ ಮಠದೇವ ಇಂದುದಯನಾಗೊ| ಜೋ ಜೋ||

ಭಂಗಾರ ತೊಟ್ಟೀಲ ಧೊರಿತಾಯಿ! ಕುಂದಲ|
ಸಿಂಗರದಾನ ಶ್ರೀಕೃಷ್ಣಗ ಛಂದಾಗಿ ತೂಗಾರಿ| ಜೋ…||

ಕರೆದು ಬಂದೆವು ಓಣಿ ನೆರೆದು ಬಂದಿತು ಮಂದಿ|
ಬಂದು ನಿಂತಾರವ್ವ ಕನ್ನಿ ಮುತ್ತೈದ್ಯಾರು| ಜೋ…||

ಸಕ್ಕರಿ ಪಾಯಸ ಬಸಿದು ಬಟ್ಟಲ ತುಂಬಿ|
ತುತಮಾಡಿ ಉಣಿಸಿದರ ಬಿಕಿಬಿಕಿ ಅಳತಾನ| ಜೋ…||

ಸಾದ ಸಿರಿಗಂಧ ತಯದು ಬಟ್ಟಲ ತುಂಬಿ|
ತೀಡಿ ತೀಡಿ ಹೆಚ್ಚಿದರ ಕಾಡಿ ಕಾಡಿ ಅಳತಾನ| ಜೋ…||

ನಾಗಬಂದೀನಂಗಿ ನಡುವಿನ ಮ್ಯಾಲ ತೊಡಸಿ|
ಆಡ್ಲಕ್ಕ ಹೋಗಂದ್ರ ಬೋರ್‍ಯಾಡಿ ಅಳತಾನ| ಜೋ…||

ಬಿಂದೂಲಿ ಇಡಸೀದ ಬಿಳಿಯಂಗಿ ತೊಡಸಿದ|
ಆಡಿ ಬಾ ಕಂದಂದ್ರ ಕಾಡಿ ಕಾಡಿ ಅಳತಾನ| ಜೋ…||

ನೀರಾಗ ನೆಳ ನೋಡಿ ಸೂರ್‍ಯ ಚಂದ್ರನ ಬೇಡಿ|
ಅದರಂಗ ತಾ ಬೇಡಿ ಬೋರ್‍ಯಾಡಿ ಅಳತಾನ| ಜೋ…||

ಎಳೆಮ್ಮಿ ನೊರೆಹಾಲ ತೊಟ್ಟಿಲದಾಗಿಟ್ಟೀದ|
ಆಡಿ ಬಂದ್ಕುಡಿಯಂದ್ರ ಕಾಡಿಕಾಡ್ಯಳತಾನ| ಜೋ…||
*****
ತೊಟ್ಟಿಲಲ್ಲಿ ಹಾಕುವ ಹಾಡು

ಹುಟ್ಟಿದ ಹನ್ನೆರಡನೆಯ ದಿನ ಕೂಸನ್ನು ತೊಟ್ಟಿಲಲ್ಲಿ ಹಾಕಿ ಹೆಸರಿಡುತ್ತಾರೆ. ಆಗ ಜೋಗುಳಹಾಡನ್ನು ಹಾಡುತ್ತಾರೆ. ಇಲ್ಲಿ ಕೊಟ್ಟಿರುವುದನ್ನು ಆ ಸಮಯದಲ್ಲಿ ಹಾಡುವರಾದರೂ ನಿತ್ಯಶಃ ಕೂಸನ್ನು ತೂಗುವಾಗ ಹೇಳಲಾಗುವಂತೆ ಇದರಲ್ಲಿಯ ವರ್ಣನೆಯ ವಿವರಗಳಿವೆ.

ಶಬ್ದ ಪ್ರಯೋಗಗಳು:- ಸಿಂದಿಗಿ=ಒಂದು ಊರು. ತಳ=ಸ್ಥಳ. ಸಾದ=ಕಪ್ಪು. ಬಿಂದೂಲಿ=ಮುಂಗೈಯ ಆಭರಣ. ನೆಳ=ನೆರಳು. ಅದರಂಗ=ಅದರಂತಹದನ್ನು.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...