Home / ಲೇಖನ / ಇತರೆ / ಮಡಿಕೇರಿಯ ನೆನಪು

ಮಡಿಕೇರಿಯ ನೆನಪು

೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು.

ಪ್ರತಿ ಮಳೆಗಾಲದ ದಿನಮಾನಗಳಲ್ಲಿ ಮಡಿಕೇರಿ ಸವಿಸವಿ ನೆನಪು ತರುವುದು. ಇದು ಅಲ್ಲದೆ ೧೯೯೮-೧೯೯೯ರಲ್ಲಿ ಮಡಿಕೇರಿಯಲ್ಲಿ ಇರುವ ಬಂದು ಹೋಗುವ ೨೦೧೧-೨೦೧೨ರಲ್ಲಿ ಮತ್ತೆ ಮಡಿಕೇರಿಗೆ ಹೋಗಿ ಬರುವ ಸುವರ್‍ಣಾವಕಾಶ ನನಗೆ ಲಭಿಸಿದ್ದು ಸಂತಸ ನವ ಉಲ್ಲಾಸ ಹರ್‍ಷ ತಂದಿತ್ತು.

ಮಡಿಕೇರಿ ಸ್ವರ್‍ಗ ಸೀಮೆ, ಕನ್ನಡ ನಾಡಿನ ಕಾಶ್ಮೀರ, ಭೂ ಕೈಲಾಸ, ಮೇಲಿಂದ ಮೇಲೆ ನೆನಪಾಗುವುದು.

ಅಲ್ಲಿನ ಊಟ, ತಿಂಡಿ, ಅದರಲ್ಲೂ “ಕಕ್ಕಡ ಪದಿನೆಟ್ ಪಾಯಸ” ಸುರುಕುಂಬಾವನ್ನು ಮೀರಿಸುವುದು.

ಕಕ್ಕಡ=ಆಟಿ ತಿಂಗಳು-ಕರ್‍ಕಾಟಕ ತಿಂಗಳು- ಆಟಿ ಸೊಪ್ಪು ಎಂದು ಅರ್‍ಥ. ಈ ಮೂರಡಿ ಹಚ್ಚನೆ ಸೊಪ್ಪಿನ ಗಿಡ ಅಲ್ಲಿನ ಕಾಫಿ ತೋಟಗಳಲ್ಲಿ, ಕಾಡುಮೇಡುಗಳಲ್ಲಿ ಹುಲುಸಾಗಿ ಬೆಳೆಯುವುದು. ಇದು ಔಷಧಿ ಪರಿಮಳಯುಕ್ತ ಸಸ್ಯ. ಇದರಲ್ಲಿ ಸರಿಯಾಗಿ ಮೂರು ವಾರ ಜುಲೈನಲ್ಲಿ ದಿನಕ್ಕೊಂದು ಔಷಧಿ ಗುಣ ಈ ಗಿಡದಲ್ಲಿ ಪ್ರಕೃತಿ ದತ್ತವಾಗಿ ಸೇರುವುದೆಂದೂ…. ಆಗಸ್ಟ್ ಮೊದಲ ವಾರದ ಮೊದಲ ದಿನ ಹಬ್ಬದ ದಿನ ಈ ಸೊಪ್ಪು ಘಮ ಘಮಾ ಪರಿವಾಳ ಬೀರುವುದು. ಇದನ್ನು ಕಿತ್ತು, ಸೋಸಿ ತೊಳೆದು, ಇದರಿಂದ ರಸ ತೆಗೆದು, ಪಾಯಸದಲ್ಲಿ ಸೇರಿಸಿ, ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ, ಸಕ್ಕರೆ ಕಲ್ಲು ಸಕ್ಕರೆ, ಸಿಹಿ ಅಕ್ಕಿ, ಏಲಕ್ಕಿ, ಗಸೆಗಸೆ, ದ್ರಾಕ್ಷಿ, ಗೋಡಂಬಿ, ಪಿಸ್ತ, ಬಾದಾಮಿ ಇತ್ಯಾದಿ ಹಾಕಿ ತಯಾರಿಸಿದ ಪಾಯಸ ಕುಡಿಯಲು ತಿನ್ನಲು ಸೊಗಸಾಗಿರುವುದು.

ಅಂದು- ಮಡಿಕೇರಿಯ ತುಂಬಾ ಹುಗ್ಗಿಯ ಹೊಳೆ ಹರಿಯುವುದು. ಮನೆಮನೆ ಓಣಿ‌ಓಣಿ, ಗಲ್ಲಿಗಲ್ಲಿ, ಬೀದಿಬೀದಿಯೆಲ್ಲ, ಘಮಾಘಮಾ ಹುಗ್ಗಿಯ ಪರಿಮಳ ಬೀರುವುದು. ಮೊದಲೇ ಮಡಿಕೇರಿಯು ಸುವಾಸನೆಯುಕ್ತವಾಗಿರುತ್ತದೆ. ಅಂದು ಇನ್ನೂ ಘಮಿಘಮಿಸುವುದು. ಬರೀ ವಾಸನೆಗೆ ಹೊಟ್ಟೆ ತುಂಬಿ ಮುಖವೆಲ್ಲ ಸಿಹಿಗೆ ಉಜ್ಜಿದಂತಾಗುವುದು!

ಬರೀ ಓದಿದರೆ ಸಾಲದು, ಅದರ ಸವಿಯ ಸವಿದು ತೃಪ್ತಿ ಪಟ್ಟುಕೊಂಡು ಧನ್ಯರಾಗಬೇಕು. ಅದುವೇ ಜೀವನ. ಮಡಿಕೇರಿಯ ವಿಶೇಷವದು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ