ಮಡಿಕೇರಿಯ ನೆನಪು

ಮಡಿಕೇರಿಯ ನೆನಪು

೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು.

ಪ್ರತಿ ಮಳೆಗಾಲದ ದಿನಮಾನಗಳಲ್ಲಿ ಮಡಿಕೇರಿ ಸವಿಸವಿ ನೆನಪು ತರುವುದು. ಇದು ಅಲ್ಲದೆ ೧೯೯೮-೧೯೯೯ರಲ್ಲಿ ಮಡಿಕೇರಿಯಲ್ಲಿ ಇರುವ ಬಂದು ಹೋಗುವ ೨೦೧೧-೨೦೧೨ರಲ್ಲಿ ಮತ್ತೆ ಮಡಿಕೇರಿಗೆ ಹೋಗಿ ಬರುವ ಸುವರ್‍ಣಾವಕಾಶ ನನಗೆ ಲಭಿಸಿದ್ದು ಸಂತಸ ನವ ಉಲ್ಲಾಸ ಹರ್‍ಷ ತಂದಿತ್ತು.

ಮಡಿಕೇರಿ ಸ್ವರ್‍ಗ ಸೀಮೆ, ಕನ್ನಡ ನಾಡಿನ ಕಾಶ್ಮೀರ, ಭೂ ಕೈಲಾಸ, ಮೇಲಿಂದ ಮೇಲೆ ನೆನಪಾಗುವುದು.

ಅಲ್ಲಿನ ಊಟ, ತಿಂಡಿ, ಅದರಲ್ಲೂ “ಕಕ್ಕಡ ಪದಿನೆಟ್ ಪಾಯಸ” ಸುರುಕುಂಬಾವನ್ನು ಮೀರಿಸುವುದು.

ಕಕ್ಕಡ=ಆಟಿ ತಿಂಗಳು-ಕರ್‍ಕಾಟಕ ತಿಂಗಳು- ಆಟಿ ಸೊಪ್ಪು ಎಂದು ಅರ್‍ಥ. ಈ ಮೂರಡಿ ಹಚ್ಚನೆ ಸೊಪ್ಪಿನ ಗಿಡ ಅಲ್ಲಿನ ಕಾಫಿ ತೋಟಗಳಲ್ಲಿ, ಕಾಡುಮೇಡುಗಳಲ್ಲಿ ಹುಲುಸಾಗಿ ಬೆಳೆಯುವುದು. ಇದು ಔಷಧಿ ಪರಿಮಳಯುಕ್ತ ಸಸ್ಯ. ಇದರಲ್ಲಿ ಸರಿಯಾಗಿ ಮೂರು ವಾರ ಜುಲೈನಲ್ಲಿ ದಿನಕ್ಕೊಂದು ಔಷಧಿ ಗುಣ ಈ ಗಿಡದಲ್ಲಿ ಪ್ರಕೃತಿ ದತ್ತವಾಗಿ ಸೇರುವುದೆಂದೂ…. ಆಗಸ್ಟ್ ಮೊದಲ ವಾರದ ಮೊದಲ ದಿನ ಹಬ್ಬದ ದಿನ ಈ ಸೊಪ್ಪು ಘಮ ಘಮಾ ಪರಿವಾಳ ಬೀರುವುದು. ಇದನ್ನು ಕಿತ್ತು, ಸೋಸಿ ತೊಳೆದು, ಇದರಿಂದ ರಸ ತೆಗೆದು, ಪಾಯಸದಲ್ಲಿ ಸೇರಿಸಿ, ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ, ಸಕ್ಕರೆ ಕಲ್ಲು ಸಕ್ಕರೆ, ಸಿಹಿ ಅಕ್ಕಿ, ಏಲಕ್ಕಿ, ಗಸೆಗಸೆ, ದ್ರಾಕ್ಷಿ, ಗೋಡಂಬಿ, ಪಿಸ್ತ, ಬಾದಾಮಿ ಇತ್ಯಾದಿ ಹಾಕಿ ತಯಾರಿಸಿದ ಪಾಯಸ ಕುಡಿಯಲು ತಿನ್ನಲು ಸೊಗಸಾಗಿರುವುದು.

ಅಂದು- ಮಡಿಕೇರಿಯ ತುಂಬಾ ಹುಗ್ಗಿಯ ಹೊಳೆ ಹರಿಯುವುದು. ಮನೆಮನೆ ಓಣಿ‌ಓಣಿ, ಗಲ್ಲಿಗಲ್ಲಿ, ಬೀದಿಬೀದಿಯೆಲ್ಲ, ಘಮಾಘಮಾ ಹುಗ್ಗಿಯ ಪರಿಮಳ ಬೀರುವುದು. ಮೊದಲೇ ಮಡಿಕೇರಿಯು ಸುವಾಸನೆಯುಕ್ತವಾಗಿರುತ್ತದೆ. ಅಂದು ಇನ್ನೂ ಘಮಿಘಮಿಸುವುದು. ಬರೀ ವಾಸನೆಗೆ ಹೊಟ್ಟೆ ತುಂಬಿ ಮುಖವೆಲ್ಲ ಸಿಹಿಗೆ ಉಜ್ಜಿದಂತಾಗುವುದು!

ಬರೀ ಓದಿದರೆ ಸಾಲದು, ಅದರ ಸವಿಯ ಸವಿದು ತೃಪ್ತಿ ಪಟ್ಟುಕೊಂಡು ಧನ್ಯರಾಗಬೇಕು. ಅದುವೇ ಜೀವನ. ಮಡಿಕೇರಿಯ ವಿಶೇಷವದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ
Next post ತೊಟ್ಟಿಲಲ್ಲಿ ಹಾಕುವ ಹಾಡು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…