ಈ ಮಣ್ಣೊಳಗೆ…

ಮತ್ತೆ ಮತ್ತೆ ಬದುಕಿಗೊಡ್ಡುವ
ಜೀವನೋತ್ಸಾಹದ
ಪ್ರತೀಕವಾಗಿ ನಿಂತ.
ಮದನಿಕೆಯರ ಚಿತ್ರ.

ಕಣ್‌ ತುಂಬಿ
ಮನ ತುಂಬಿ
ಇಲ್ಲೇ ಇದೇ
ನಿಜವೆಂದು ಭ್ರಾಂತ.

ಧುಮ್ಮಿಕ್ಕಿ ಹರಿವ ಹೇಮೆ
ಒಮ್ಮೆ ಮೇರೆ ಮೀರಿ ತುಳುಕಿ
ಮೈಭಾರ ತಡೆಯದೇ ಬಳುಕಿ
ಸಡಗರದ ಪಯಣ ಗಮ್ಯದೆಡೆಗೆ.

ಮತ್ತೊಮ್ಮೆ ಸೊರಗಿ
ಮೈ ಹಿಡಿಯಾಗಿ
ಮೆಲ್ಲಗೆ ತೆವಳಿದರೂ
ಒಳಗೇ ಜೀವಂತ!

ಎಲ್ಲ ಬಯಲೆಂದು
ಎತ್ತರಕ್ಕೇರಿ ನಿಂತ ತಾನೇ ಬಯಲಾದ
ವೈರಾಗ್ಯ ಮೂರ್ತಿ.

ಎತ್ತರಕ್ಕೇರಿದಷ್ಟೇ
ಆಳಗಳಿಗೂ ಇಳಿದಾಗಷ್ಟೇ
ಸಿಕ್ಕೀತು ಅರಿವು
ದಕ್ಕೀತು ಅಳಿಸಲಾಗದ ಕೀರ್ತಿ!

ಕಲ್ಲು ಹೂವಾಗಿ ಅರಳಿ ನಗುವ
ಈ ಮಣ್ಣೊಳಗೆ
ಹೆಜ್ಜೆ ಹೆಜ್ಜೆಗೂ ಕಲೆ ಅರಳಿದೆ
ತನು – ಮನ ಬೆಳೆದಿದೆ

ಮತ್ತೆ ಮತ್ತೆ ಸೋತ
ಬದುಕನರಳಿಸುವ
ಈ ಮಣ್ಣ ಬಗೆಗೆ
ಕಲೆಯ ಬಲೆಗೆ
ಮನ ತುಂಬಿ ತಲೆಬಾಗಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲೆ
Next post ಬಚ್ಚೆ ಸಿಟಿ ರವಿಗಿಂತ ರವಷ್ಟು ನಾನ್ ಹೆಚ್ಚೆ ಅಂದ ನಾಗ್ರಾವು ಸೆಟ್ಟಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys