ಪುಷ್ಪ ವೃಷ್ಟಿ

ಕವನ ಬರೆಯಲು ಬಹುಕಾಲ ಕುಳಿತೆ,
ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ.
ದಿನಗಳು, ವಾರಗಳು, ತಿಂಗಳುಗಳು
ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ.
ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು
ಕವಿತಾ ಸುಧಾರಸವ ಉಣ ಬಡಿಸಲು
ಕಾದಿರುವೆ ನಾನು, ಸಂಸ್ಕೃತಿಯ ಪರಿಚಾರಕ!
ಹಸಿದಿರುವ. – ಓದುಗ, ಕಲೆಯ ಆರಾಧಕ.
ಏಕೆ ಮುನಿದಿರುವೆ ತಾಯೇ ಇಳಿದು ಬಾ,
ಬಿಳಿಯ ಕಾಗದ ಕಟ್ಟು, ಕರಿಯ ಶಾಯಿ,
ನುರಿತ ಲೇಖನಿ ಕಾದಿದೆ, ನೋಡು ಬಾ ತಾಯಿ.
ವೃತ್ತಪತ್ರಿಕೆಯಲ್ಲಿ ಬಂತು – ಜಾಹೀರಾತು
“ಕಾವ್ಯ ರಚನಾ ಸ್ಪರ್ಧೆ”ಯ ಬಹುಮಾನ ಕುರಿತು!
ವಿದ್ಯುತ್ ಹರಿಯಿತು, ಯಂತ್ರ ವೇಗದಿ ಚಲಿಸಿತು
ಮೂಡು ಮೂಡಿತು, ಮೂಡಿಗೆ ಕೊಡು ಬೆಳೆಯಿತು
ಅದುಮಿಟ್ಟ ಭಾವನೆ ಬುಗ್ಗೆಯಾಗಿ ಉಕ್ಕಿತು,
ಕಾವ್ಯಧಾರೆ ಭೋರ್ಗರೆದು ಹರಿಯಿತು
ಗರಿ ಕೆದರಿತು ಮನ – ನವಿಲಾಗಿ ಕುಣಿಯಿತು
ಶರವೇಗದಲ್ಲಿ ಆಯಿತು ಕಾವ್ಯ ಸೃಷ್ಟಿ!
ಬಂದ ಬಹುಮಾನ, ತಂದ ಸನ್ಮಾನ ಸುರಿಸಿತು ಪುಷ್ಪವೃಷ್ಟಿ.
*****
೨೧-೧೨-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ
Next post ನನ್ನ ಮನೆ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys