Home / ಕವನ / ಕವಿತೆ / ಮಾತು – ಮೌನದ ನಡುವೆ

ಮಾತು – ಮೌನದ ನಡುವೆ

ಮೌನದಕ್ಷಯ
ಪಾತ್ರೆಯೊಳಗೆ
ಒಂದು ಅಗುಳು ಮಾತು
ಕಾವು ಕೂತು
ಚಟಪಟನೆ ಸಿಡಿದು
ಸಾವಿರವಾಯ್ತು
ಲಕ್ಷವಾಯ್ತು
ಅಕ್ಷಯವಾಯ್ತು
ಎಷ್ಟೊಂದು ಮಾತು
ಕಣ್ಣುಬಿಟ್ಟಿದೆ ಮೊಳೆತು!
ಮೌನ ಹೊದ್ದ
ನಿರ್ಜೀವ ಕನಸುಗಳಿಗೆ
ಮಾತು ತುಂಬುವ ಹೊತ್ತು
ಕೆಂಪು, ಹಸಿರು, ಹಳದಿ, ನೀಲಿ
ಎಷ್ಟೊಂದು ಮಾತು?
ಎಲ್ಲಾ ಎಲ್ಲಿತ್ತು?
ಯಾರಿಗೆ ಗೊತ್ತು?
ಮೌನ ಸೋಲುವ ಹೊತ್ತು
ಮಾತಿಗೆ ಗೆಲುವಿನ ಗತ್ತು!

ಗೆದ್ದ ಮಾತಿನಹಂಕಾರ
ಭೋರ್ಗರೆಯುವ ಸಾಗರ
ಧ್ಯಾನಸ್ಥ ಮೌನ
ಹಾಡುತ್ತದೆ ಶಕ್ತಿಶಾಲಿ ಮಾಂತ್ರಿಕಗಾನ
ಬಣ್ಣ ಬಳಿದುಕೊಂಡು
ಎಲ್ಲೆಂದರಲ್ಲಿ ಅಲೆದಾಡುತ್ತಾ
ಮೆರೆಯುತ್ತಿದ್ದ ಮಾತುಗಳೆಲ್ಲಾ
ಪುಸಕ್ಕನೆ ಮುದುರಿ
ಅಕ್ಷಯ ಪಾತ್ರೆಯೊಳಹೊಕ್ಕು
ಭೂಗತವಾಗುತ್ತವೆ
ಭೂತವಾಗುತ್ತವೆ
ಮಾತು ಸೋತು ಅತ್ತಾಗ
ಮೌನದ ಗೆಲುವಿನ ರಾಗ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...