ಬೆಳಕಿನ ಮಕ್ಕಳು

ಬಂದೇವು ನಾವು ಬೆಳಗಾಗಿ
ಬೆಳಕಿನಾ ಮಕ್ಕಳು ಸಾಗಿ
ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು,
ಬೆಳಕನ್ನೆ ಸುತ್ತು ಸುತ್ತಿಕೊಂಡು

ಎದೆಯಾಗೆ ಕುದಿಯುವಾ ಕಡಲೂ,
ಸಿಕ್ಕಿದ್ದ ಸಣ್ಣಿಸುವ ಒಡಲೂ
ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ,
ಗುಡ್ಡ ಕಿತ್ತೇವು ಸಿಡಿಲಿನ ಕೈಯಿ

ತಲೆಯಾಗೆ ತುಂಬಿ ಬಿರುಗಾಳಿ,
ಕಣ್ಣಾಗೆ ಈಟಿಗಳ ತಾಳಿ
ನಾಲಗೆಯು ನರ್ತಿಸುವ ಕತ್ರಿ,
ಹಲ್ಲಾಗೆ ಕಲ್ಲುಗಳ ಕಿತ್ತಿ

ಒಡಲಾಳದಿಂದ ನಮ್ಮ ಮಾತು,
ಅಲ್ಲಿಲ್ಲ ಬಣ್ಣದಾ ಬೇತು
ನೆಲದಾಳ ನಮ್ಮ ನೆಲೆ ಬೇರು,
ನಿಂತಂಗೆ ಹಿಮಕೆ ದೇವದಾರು

ನಮ್ಮ ನೋಟ ನೇರ ಸಾರೋಟು,
ಬಾವಿಗಳ ಬಗಿವ ಒಳಪಟ್ಟು
ನಿಂತ ನೀರ ಕೊಚ್ಚುವೆವು ಬೇಗ,
ನಮ್ಮ ವೇಗ ಕಿರಣದಾವೇಗ

ಬೆಳಕಿನಾ ಮಕ್ಕಳು ನಾವು,
ಬೆಳಕನ್ನೆ ಹೊತ್ತು ಬಂದೇವು
ಬೆಳಕಿನಲೆ ಬೆಳಗನರಸೇವು,
ಬೆಳಕುಂಡು ಬೆಳಕ ಪಡೆದೇವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಸ್ತವ
Next post ಮಾತು – ಮೌನದ ನಡುವೆ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys