ಸಂತೈಸು ಮನ

ರಾಮಾ ಎನ್ನ ಮನವ ಸಂತೈಸು
ಕಾಮಕ್ರೋಧದೀ ಮನ
ನಿತ್ಯವೂ ಮಲಿನವಾಗದಂತೆ
ಮಾಡಲಿ ನಿನ್ನ ನಮನ

ಎಂದಿಗಾಗೂವುದೊ ನಿನ್ನ
ಆ ದಿವ್ಯ ದರುಶನ ಪ್ರಭು
ನಿನ್ನ ನಿತ್ಯ ನಿತ್ಯವು ಧ್ಯಾನಿಸಿ
ಹೃದಯವು ಬೆಳಗಲಿ ಪ್ರಭು

ಜನುಮ ಜನುಮಗಳೆಲ್ಲ
ವಿಷಯ ಸುಖಗಳಲಿ ಬೆಂದು
ಕರಗಿ ಹೋದವು ಮತ್ತೆ ಈ ಜನುಮ
ಬೆಂಡಾಗಿ ಬಳಲಿ ಆಗಿದೆ ಕಂದು

ನಿನ್ನ ನಾಮ ಅನವರತ ನುಡಿಸು
ಯಾವ ಕ್ಷಣವೂ ಬೇಡ ನೀನಿಲ್ಲದೆ
ಇಂದ್ರಿಯಗಳತ್ತವಾಲದಿರಲಿ ನಾ
ಬೇಡ ಯಾವ ದಿನಿಸು ನೀನಲ್ಲದೆ

ನಿನ್ನ ಸ್ಮರಣೆಯ ಧ್ಯಾನ ನಿತ್ಯ
ಸದಾ ಎನ್ನ ಪದರು ತುಂಬು
ನನ್ನ ಬಾಳಿನ ಪರ್‍ಯಂತ ನೀನಿರು
ಮಾಣಿಕ್ಯ ವಿಠಲನೇ ಆಧಾರಕೊಂಬು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೯
Next post ಪಾಪಿಯ ಪಾಡು – ೧೨

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…