Home / ಕವನ / ಕವಿತೆ / ಸತ್ಮೇಲ್ ಏನೈತಣ್ಣ?

ಸತ್ಮೇಲ್ ಏನೈತಣ್ಣ?

ಬೆಳದಿಂಗಳ ರಾತ್ರೇಲಿ ಈಚೋರಿ ಬತ್ತಂದ್ರೆ
ಈಚೆಂಡ ಚೆಲ್ಲಂಗೆ ನೆಪ್ಪಾಯ್ತದೆ.
ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ
ವೋಲೀಸ್ದೆ ವೋಯ್ತಂದ್ರೆ ತಪ್ಪಾಯ್ತದೆ. ೧

ಕುಡದೋರು ಮತ್ಬಂದು ಬೀಳೋಹಂಗ್ ಬಿದ್ರೋವೆ
ಮನೆಗೋಳು ಮರಗೋಳು ಬೀದೀಲೆಲ್ಲಾ.
ಪಡಕಾನೆ ಜನದಂಗೆ ಬಡದಾಡ್ತ ಕಾಯ್ತಾವೆ
ಕಾಗೇಗಳ್ಗ್ ಒಸ್ಸೀನ ಬುದ್ದೀನಿಲ್ಲ. ೨

ಇದ್ ಕಂಡ್ರೆ ಪಡಕಾನೆ ಕಣ್ಗ್ ಕಟ್ದಂಗಾಯ್ತದೆ
ತೊಟ್ಟ್ ಯೆಂಡ ಬೇಕಂದ್ರೆ ಬುಂಡೇಲಿಲ್ಲ.
ಯೆಂಡ್ ಇಲ್ಲಾಂತ್ ಅಲದಾಡೊ ನನ್ನಂತ ಪಾಪೀನ
ಇದುವರೆಗೆ ಬೂಂತಾಯಿ ಕಂಡೋಳಲ್ಲ. ೩

ಸುಂಕ್ ಅತ್ಕೊಂಡ್ ಏನ್ಬತ್ತು? ಇಲ್ಲದ್ ಅತ್ತ್ ಏನ್ಬತ್ತು?
ಕಟ್ಟೈತೆ ಕಸ್ಟ್ ಸುಕ ವುಟ್ದೇಟ್ಗೇನೆ!
ಕಟ್ಟಿದ್ದನ್ ಅಟ್ಟ್ ಉಂಡು ಅನಬೌಸೋಕ್ ಆಗದಿದ್ರೆ
ಪ್ರಾಣಾನ ಕಳಕೋಬೇಕ್ ಒಂದೇಟ್ಗೇನೆ! ೪

ಅಳಗೀಳೋದ್ ಎಲ್ಲಾನ ಯೆಂಗಿಸ್ಗೆ ವೊಪ್ತಾದೆ-
ನೆಗತಿರಬೇಕ್ ಗಂಡಸ್ರು ಪ್ರಾಣ್ ಓದ್ರೂನೆ!
ಬದಕಿದ್ರೆ ಯೆವ್ತಾರ ಪಡಕಾನೇಗ್ ಓಗ್ ಬೌದು!
ಸತ್ಮೇಲ್ ಏನೈತಣ್ಣ? ದೊಡ್ ಸೊನ್ನೇನೆ! ೫
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...