ಹರಿದಿದೆ ನೋಡಿ ಕನ್ನಡ ರಥವು

ಹರಿದಿದೆ ನೋಡಿ ಕನ್ನಡ ರಥವು
ಪಶ್ಚಿಮದಾ ಕಡೆಗೆ
ಕಾಣದಾಗಿವೆ ನಮ್ಮ ದಿಕ್ಕುಗಳು
ಪೊರೆ ಬಂದಿದೆ ಕಣ್ಗೆ! || ಪ ||
ನಮ್ಮಲಿ ಏಳು ಜ್ಞಾನಪೀಠಗಳು
ಕನ್ನಡಕೇನು ಬರ?
ಕವಿತೆಯೆ ಸಾಕು ಇನ್ನೇನು ಬೇಕು
ಕನ್ನಡವು ಅಮರ!
ಹೃದಯವು ಕನ್ನಡ ಮನಸು ಸಂಸ್ಕೃತ
ನಾವು ಕಲಿತ ಪಾಠ
ಇಂತಹ ರಕ್ತಕೆ ತರುವುದೆ ಮುಜುಗರ
ಇಂಗ್ಲೀಷಿನ ಕೂಟ!
ಝಣಝಣಝಣ ಡಾಲರ್ರಿನ ತಾಳಕೆ
ಕುಣಿದಿದೆ ಕನ್ನಡವು
ಸಂಸ್ಕ ತಿ ಚರಿತೆ ಎಲ್ಲವು ಬಿಕರಿಗೆ
ಮುನ್ನಡೆದಿದೆ ಜಗವು!
ಕನ್ನಡ ಕಾಯುವ ಭಟರಿಗೆ ಕೊರತೆಯೆ
ಬೀದಿಯ ಫ್ಲೆಕ್ಸುಗಳಲ್ಲಿ
ಆದರೂ ಕನ್ನಡ ಉಳಿದೇ ಉಳಿವುದು
ಸಂಶೋಧನೆಗಳಲಿ | ಮುಂದಿನ
ಸಂಶೋಧನೆಗಳಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾರಿ ಯಾವುದಯ್ಯಾ?
Next post ಪಾತರಗಿತ್ತಿಗೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…