ಮತಿಯ ಪಾಲಿಸು

ಮತಿಯ ಪಾಲಿಸು ಯಮಗೆ ಶ್ರೀಗಣರಾಯಾ
ರುತಿ ಮಾಡ್ ಉಣಿಸು ಯಮಗೇ || ೧ ||

ಉದ್ದಿನ ವನದಲ್ಲಿ ಉದ್ದಿನ ಉಂಡೇ
ಎಳದಿಟ್ಟ ಬೆನುಮಯ್ಯ ಯೆಡಿ ಮಾಡ್ ಉಣಿಸು ಯಮಗೇ || ೨ ||

ಕಡಲೆಯ ವನದಲ್ಲಿ ಕಡಲೆಯ ಉಂಡೇ
ಕಡದಿಟ್ಟ ಬೆನುಮಯ್ಯಾ ಯಡಿಮಾಡಿ ಉಣಿಸು ಯಮಗೇ || ೩ ||

ರಾಗಿಯ ವನದಲ್ಲಿ ರಾಗಿಯ ಉಂಡೇ
ಎಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೪ ||

ಮತಿಯ ಪಾಲಿಸು ಯಮಗೇ ಶ್ರೀ ಗಣರಾಯಾ
ಗೋದಿಯ ವನದಲ್ಲಿ ಗೋದಿಯ ಉಂಡೇ
ವಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೫ ||

ಯೆಳ್ಳಿನ ವನದಲ್ಲಿ ಏಳ್ಳಿನ ಉಂಡೇ
ಯೆಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೬ ||
*****
ಹೇಳಿದವರು: ತುಂಬಳ್ಳಿ ಮೋಹನ ನಾಗು ಗೌಡ, ೨೫ ವರ್ಷ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೬
Next post ಮರೆತರಾ ಹಣ್ಣನೆಂತೇಮ್ಮ ಜೀವನ ಫಲವಂತವಪ್ಪುದೋ?

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…