ಮತಿಯ ಪಾಲಿಸು

ಮತಿಯ ಪಾಲಿಸು ಯಮಗೆ ಶ್ರೀಗಣರಾಯಾ
ರುತಿ ಮಾಡ್ ಉಣಿಸು ಯಮಗೇ || ೧ ||

ಉದ್ದಿನ ವನದಲ್ಲಿ ಉದ್ದಿನ ಉಂಡೇ
ಎಳದಿಟ್ಟ ಬೆನುಮಯ್ಯ ಯೆಡಿ ಮಾಡ್ ಉಣಿಸು ಯಮಗೇ || ೨ ||

ಕಡಲೆಯ ವನದಲ್ಲಿ ಕಡಲೆಯ ಉಂಡೇ
ಕಡದಿಟ್ಟ ಬೆನುಮಯ್ಯಾ ಯಡಿಮಾಡಿ ಉಣಿಸು ಯಮಗೇ || ೩ ||

ರಾಗಿಯ ವನದಲ್ಲಿ ರಾಗಿಯ ಉಂಡೇ
ಎಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೪ ||

ಮತಿಯ ಪಾಲಿಸು ಯಮಗೇ ಶ್ರೀ ಗಣರಾಯಾ
ಗೋದಿಯ ವನದಲ್ಲಿ ಗೋದಿಯ ಉಂಡೇ
ವಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೫ ||

ಯೆಳ್ಳಿನ ವನದಲ್ಲಿ ಏಳ್ಳಿನ ಉಂಡೇ
ಯೆಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೬ ||
*****
ಹೇಳಿದವರು: ತುಂಬಳ್ಳಿ ಮೋಹನ ನಾಗು ಗೌಡ, ೨೫ ವರ್ಷ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೬
Next post ಮರೆತರಾ ಹಣ್ಣನೆಂತೇಮ್ಮ ಜೀವನ ಫಲವಂತವಪ್ಪುದೋ?

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…