ಮದುವೆಗೆ ಶೃಂಗಾರ ಗೈದ

(ಕೋಲಾಟದ ಪದ)

ತಾನತನ್ನನಾಲೋ ತಂದನ್ನಾನಾ
ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ ||

ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ)
ಮಗನಿಗೆ ಮದಿಯ ಮಾಡಬೇಕಂದ || ೧ ||

ಮಗನಿಗೆ ಮದಿಯ ಮಾಡಬೇಕಂದ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಹೆಣ್ಣ ಕೇಳವನಲ್ಲೋ || ೨ ||

ಬಾಜರ ಹೆಣ್ಣ ಕೇಳವಾಗೆ
ಹೆಣ್ಣ ಕೇಳಿ ಭರವಸೆ ಮಾಡಿ
ಹೆಣ್ಣ ಕೇಳಿ ಭರವಸೆ ಮಾಡಿ
ತಿರಗಿ ಮನೆಗೆ ಬರುವಾನಲ್ಲೋ || ೩ ||

ತಿರಗಿ ಮನೆಗೆ ಬಂದೆಕಂಡೇ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳದಿದ್ದ ಊರಿಗೆ ಡಂಗರ ಶರದ || ೪ ||

ದೂರಿನೂರಿಗೆ ಡಂಗರ ಹೋ ಡದಿ
ಕೂಡಿಸೂರಿಗೆ ವಾಲಿ ಬರೆದ
ಕೂಡಿಸೂರಿಗೆ ವಾಲಿ ಬರೆದ
ಬೇಳೆಬೆಲ್ಲ ಶಾಮನ ಕೂಡೇ || ೫ ||

ಬೇಳೆಬೆಲ್ಲ ಶಾಮನ ಕೂಡೇ
ಬಾಕಲ ಮುಂದೆ ತೋರಣಗೈದ
ಬಾಕಲ ಮುಂದೆ ತೋರಣಗೈದ
ಬಾಗಿಲಿಗೆ ಮುತ್ತೆಲ್ಲಾ ಸುರದ || ೬ ||

ಬಾಗಿಲಿಗೆ ಮುತ್ತೆಲ್ಲಾ ಸುರದ
ದೊಣಪೆಗೆ ತೋರಣವ ಗೈದ
ದೊಣಪೆಗೆ ತೋರಣವ ಗೈದ
ಮದಿವಿಗೆ ಶೃಂಗಾರಗೈದ (ಶುಂಗಾರ) || ೭ ||

ಯಜಮಾನಗೌಡ ರಾಜನಲ್ಲೋ
ಬಾವನೆಂಟರ ಸೇರುವಾಗೇ (ಸೇಯ್ಯು)
ಬಂದು ಬಳಗ ಸೆಯ್ಯುವಾಗೆ
ಬಂದು ಬಳಗ ಸೆಯ್ಯುವಾಗೆ || ೮ ||

ಮುತ್ತಿನ ಬಾಸಿಂಗ ಸೂಡೇ
ಯಜಮಾನಗೌಡ ರಾಜನಲ್ಲೋ
ಯಜಮಾನಗೌಡ ರಾಜನಲ್ಲೋ
ಮಗನಿಗೆ ಮದಿವೆಯ ಮಾಡಬೇಕೆಂದೆ
ದಿಬ್ಬಣ ಶೋವನ ಹೋಗುವಾಗೆ || ೯ ||

ದಿಬ್ಬಣ ಶೋವನ ಹೋಗುವಾಗೆ
ವಾದಿ ಪೇಪೆ ಹೊಡವರಲ್ಲೋ
ವಾದಿ ಪೇಪೆ ಹೊಡವರಲ್ಲೋ
ಮದ್ದುಗುಂಡು ಶುಡುವಾರಲ್ಲೋ || ೧೦ ||

ದರಕಿಕ್ರೇದರ ಮುರದಂಗಲ್ಲೋ
ಆಕಾಶಬಾಣ ಬಿಡುವಾಗ
ದರಕಿತ್ರೇದರ ಮುರದಂಗಲ್ಲೋ
ಹಗಲುಬತ್ತಿ ನೋ ಡಿದರೆ || ೧೧ ||

ಹಗಲು ಇರುಳುಲಾದರಲಾಗೇ
ಕೋಣನ ಕೊಂಬ ನೋಡಿದರೆ
ದರಕಿತ್ರೇದರ ಮುರದಂಗಲ್ಲೋ
ಯಜಮಾನಗೌಡ ರಾಜನಲ್ಲೋ || ೧೨ ||

ದಿಬ್ಬಣ ಶೋವನ ಹೋಗುವಾಗೇ
ಪಟ್ಟಣದೊಳಗಿನ ಪಟ್ಟಣಶೆಟ್ಟಿ
ದಂಡು ದಾವುಳಿ ಬರತಿದಂದೇ
ಪಟ್ಣ ಬಿಟ್ಟಾಕಿ ಓಡಿಹೋದ || ೧೩ ||
*****
ಹೇಳಿದವರು: ದೇವು ನಾಗು ಗುನಗ, ಅಡಲೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತ್ತೆತ್ತಿದರೆಲ್ಲವೂ ಕಷ್ಟ ಕಾಣುವುದಲ್ಲಾ?
Next post ವಾಕ್ಯದ ಅರ್ಥ ಮತ್ತು ಅದ್ಭುತ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…