Home / ಕವನ / ಕೋಲಾಟ / ಮದುವೆಗೆ ಶೃಂಗಾರ ಗೈದ

ಮದುವೆಗೆ ಶೃಂಗಾರ ಗೈದ

(ಕೋಲಾಟದ ಪದ)

ತಾನತನ್ನನಾಲೋ ತಂದನ್ನಾನಾ
ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ ||

ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ)
ಮಗನಿಗೆ ಮದಿಯ ಮಾಡಬೇಕಂದ || ೧ ||

ಮಗನಿಗೆ ಮದಿಯ ಮಾಡಬೇಕಂದ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಹೆಣ್ಣ ಕೇಳವನಲ್ಲೋ || ೨ ||

ಬಾಜರ ಹೆಣ್ಣ ಕೇಳವಾಗೆ
ಹೆಣ್ಣ ಕೇಳಿ ಭರವಸೆ ಮಾಡಿ
ಹೆಣ್ಣ ಕೇಳಿ ಭರವಸೆ ಮಾಡಿ
ತಿರಗಿ ಮನೆಗೆ ಬರುವಾನಲ್ಲೋ || ೩ ||

ತಿರಗಿ ಮನೆಗೆ ಬಂದೆಕಂಡೇ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳದಿದ್ದ ಊರಿಗೆ ಡಂಗರ ಶರದ || ೪ ||

ದೂರಿನೂರಿಗೆ ಡಂಗರ ಹೋ ಡದಿ
ಕೂಡಿಸೂರಿಗೆ ವಾಲಿ ಬರೆದ
ಕೂಡಿಸೂರಿಗೆ ವಾಲಿ ಬರೆದ
ಬೇಳೆಬೆಲ್ಲ ಶಾಮನ ಕೂಡೇ || ೫ ||

ಬೇಳೆಬೆಲ್ಲ ಶಾಮನ ಕೂಡೇ
ಬಾಕಲ ಮುಂದೆ ತೋರಣಗೈದ
ಬಾಕಲ ಮುಂದೆ ತೋರಣಗೈದ
ಬಾಗಿಲಿಗೆ ಮುತ್ತೆಲ್ಲಾ ಸುರದ || ೬ ||

ಬಾಗಿಲಿಗೆ ಮುತ್ತೆಲ್ಲಾ ಸುರದ
ದೊಣಪೆಗೆ ತೋರಣವ ಗೈದ
ದೊಣಪೆಗೆ ತೋರಣವ ಗೈದ
ಮದಿವಿಗೆ ಶೃಂಗಾರಗೈದ (ಶುಂಗಾರ) || ೭ ||

ಯಜಮಾನಗೌಡ ರಾಜನಲ್ಲೋ
ಬಾವನೆಂಟರ ಸೇರುವಾಗೇ (ಸೇಯ್ಯು)
ಬಂದು ಬಳಗ ಸೆಯ್ಯುವಾಗೆ
ಬಂದು ಬಳಗ ಸೆಯ್ಯುವಾಗೆ || ೮ ||

ಮುತ್ತಿನ ಬಾಸಿಂಗ ಸೂಡೇ
ಯಜಮಾನಗೌಡ ರಾಜನಲ್ಲೋ
ಯಜಮಾನಗೌಡ ರಾಜನಲ್ಲೋ
ಮಗನಿಗೆ ಮದಿವೆಯ ಮಾಡಬೇಕೆಂದೆ
ದಿಬ್ಬಣ ಶೋವನ ಹೋಗುವಾಗೆ || ೯ ||

ದಿಬ್ಬಣ ಶೋವನ ಹೋಗುವಾಗೆ
ವಾದಿ ಪೇಪೆ ಹೊಡವರಲ್ಲೋ
ವಾದಿ ಪೇಪೆ ಹೊಡವರಲ್ಲೋ
ಮದ್ದುಗುಂಡು ಶುಡುವಾರಲ್ಲೋ || ೧೦ ||

ದರಕಿಕ್ರೇದರ ಮುರದಂಗಲ್ಲೋ
ಆಕಾಶಬಾಣ ಬಿಡುವಾಗ
ದರಕಿತ್ರೇದರ ಮುರದಂಗಲ್ಲೋ
ಹಗಲುಬತ್ತಿ ನೋ ಡಿದರೆ || ೧೧ ||

ಹಗಲು ಇರುಳುಲಾದರಲಾಗೇ
ಕೋಣನ ಕೊಂಬ ನೋಡಿದರೆ
ದರಕಿತ್ರೇದರ ಮುರದಂಗಲ್ಲೋ
ಯಜಮಾನಗೌಡ ರಾಜನಲ್ಲೋ || ೧೨ ||

ದಿಬ್ಬಣ ಶೋವನ ಹೋಗುವಾಗೇ
ಪಟ್ಟಣದೊಳಗಿನ ಪಟ್ಟಣಶೆಟ್ಟಿ
ದಂಡು ದಾವುಳಿ ಬರತಿದಂದೇ
ಪಟ್ಣ ಬಿಟ್ಟಾಕಿ ಓಡಿಹೋದ || ೧೩ ||
*****
ಹೇಳಿದವರು: ದೇವು ನಾಗು ಗುನಗ, ಅಡಲೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...