Home / ಕವನ / ಕೋಲಾಟ / ಮದುವೆಗೆ ಶೃಂಗಾರ ಗೈದ

ಮದುವೆಗೆ ಶೃಂಗಾರ ಗೈದ

(ಕೋಲಾಟದ ಪದ)

ತಾನತನ್ನನಾಲೋ ತಂದನ್ನಾನಾ
ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ ||

ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ)
ಮಗನಿಗೆ ಮದಿಯ ಮಾಡಬೇಕಂದ || ೧ ||

ಮಗನಿಗೆ ಮದಿಯ ಮಾಡಬೇಕಂದ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಮನೆಗೆ ಹೋಗವನಲ್ಲೋ
ಬಾಜರ ಹೆಣ್ಣ ಕೇಳವನಲ್ಲೋ || ೨ ||

ಬಾಜರ ಹೆಣ್ಣ ಕೇಳವಾಗೆ
ಹೆಣ್ಣ ಕೇಳಿ ಭರವಸೆ ಮಾಡಿ
ಹೆಣ್ಣ ಕೇಳಿ ಭರವಸೆ ಮಾಡಿ
ತಿರಗಿ ಮನೆಗೆ ಬರುವಾನಲ್ಲೋ || ೩ ||

ತಿರಗಿ ಮನೆಗೆ ಬಂದೆಕಂಡೇ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳುಲೂರಿಗೆ ಹೇಳಿಕೆ ಮಾಡಿ
ಹೇಳದಿದ್ದ ಊರಿಗೆ ಡಂಗರ ಶರದ || ೪ ||

ದೂರಿನೂರಿಗೆ ಡಂಗರ ಹೋ ಡದಿ
ಕೂಡಿಸೂರಿಗೆ ವಾಲಿ ಬರೆದ
ಕೂಡಿಸೂರಿಗೆ ವಾಲಿ ಬರೆದ
ಬೇಳೆಬೆಲ್ಲ ಶಾಮನ ಕೂಡೇ || ೫ ||

ಬೇಳೆಬೆಲ್ಲ ಶಾಮನ ಕೂಡೇ
ಬಾಕಲ ಮುಂದೆ ತೋರಣಗೈದ
ಬಾಕಲ ಮುಂದೆ ತೋರಣಗೈದ
ಬಾಗಿಲಿಗೆ ಮುತ್ತೆಲ್ಲಾ ಸುರದ || ೬ ||

ಬಾಗಿಲಿಗೆ ಮುತ್ತೆಲ್ಲಾ ಸುರದ
ದೊಣಪೆಗೆ ತೋರಣವ ಗೈದ
ದೊಣಪೆಗೆ ತೋರಣವ ಗೈದ
ಮದಿವಿಗೆ ಶೃಂಗಾರಗೈದ (ಶುಂಗಾರ) || ೭ ||

ಯಜಮಾನಗೌಡ ರಾಜನಲ್ಲೋ
ಬಾವನೆಂಟರ ಸೇರುವಾಗೇ (ಸೇಯ್ಯು)
ಬಂದು ಬಳಗ ಸೆಯ್ಯುವಾಗೆ
ಬಂದು ಬಳಗ ಸೆಯ್ಯುವಾಗೆ || ೮ ||

ಮುತ್ತಿನ ಬಾಸಿಂಗ ಸೂಡೇ
ಯಜಮಾನಗೌಡ ರಾಜನಲ್ಲೋ
ಯಜಮಾನಗೌಡ ರಾಜನಲ್ಲೋ
ಮಗನಿಗೆ ಮದಿವೆಯ ಮಾಡಬೇಕೆಂದೆ
ದಿಬ್ಬಣ ಶೋವನ ಹೋಗುವಾಗೆ || ೯ ||

ದಿಬ್ಬಣ ಶೋವನ ಹೋಗುವಾಗೆ
ವಾದಿ ಪೇಪೆ ಹೊಡವರಲ್ಲೋ
ವಾದಿ ಪೇಪೆ ಹೊಡವರಲ್ಲೋ
ಮದ್ದುಗುಂಡು ಶುಡುವಾರಲ್ಲೋ || ೧೦ ||

ದರಕಿಕ್ರೇದರ ಮುರದಂಗಲ್ಲೋ
ಆಕಾಶಬಾಣ ಬಿಡುವಾಗ
ದರಕಿತ್ರೇದರ ಮುರದಂಗಲ್ಲೋ
ಹಗಲುಬತ್ತಿ ನೋ ಡಿದರೆ || ೧೧ ||

ಹಗಲು ಇರುಳುಲಾದರಲಾಗೇ
ಕೋಣನ ಕೊಂಬ ನೋಡಿದರೆ
ದರಕಿತ್ರೇದರ ಮುರದಂಗಲ್ಲೋ
ಯಜಮಾನಗೌಡ ರಾಜನಲ್ಲೋ || ೧೨ ||

ದಿಬ್ಬಣ ಶೋವನ ಹೋಗುವಾಗೇ
ಪಟ್ಟಣದೊಳಗಿನ ಪಟ್ಟಣಶೆಟ್ಟಿ
ದಂಡು ದಾವುಳಿ ಬರತಿದಂದೇ
ಪಟ್ಣ ಬಿಟ್ಟಾಕಿ ಓಡಿಹೋದ || ೧೩ ||
*****
ಹೇಳಿದವರು: ದೇವು ನಾಗು ಗುನಗ, ಅಡಲೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...