ತಂದಾನೋ (ಸುಗ್ಗಿ ಆಲಾಪ)

(ಮೃದಂಗ ಹೊಡೆಯುವ ಆಲಾಪ)

ಶಾತಗಲ್ ಶಣ್ಣ ತಂಗಿ
‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’
‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’
‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || ೧ ||

‘ನಿಮ್ಮತ್ತೆಯೆಲ್ ಹೋಗಿದೆ?’
‘ಅತ್ತೆಹಿತ್ಲಗೆ ಹೋಗಿದು’
‘ಮಾವೆಲ್ ಹೋಗಿದ್ದ?’
‘ಮಾವ ಮಾಲ್ಕೆ ಹೋಗ್ಯ’
‘ಗಂಡೆಲ್ ಹೋಗಿನೇ?’
‘ದಂಡಿಗೆ ಹೋಗ್ಯ’ || ೨ ||

‘ಮೈದಯೆಲ್ ಹೋಗಿನೇ?’
‘ಮೈದ ಶೂಲ್ಗಾರ್‍ಕಿಗೆ ಹೋಗ್ಯ’
‘ನೀ ಬಶ್ರು ಯಾಕಂಡಿ? ಹೌದೆ?’
‘ನ ಬಶ್ರಂದಿ ನಿಂಗೆ ಯಾರೆ ಹೇಳಿದ್ದು’
‘ಕೊಟ್ಟಕ ಮನೆ ಕೋಲಿ ಹೇಳ್ತು’ || ೩ ||

‘ನಾ ಬಶ್ರಾಗಿದ್ರೆ ಕಾಗೆನ ಶೀರಿ ಉಡ್ತಿದೆ,
ಕಣ್ಗೆ ಕಪ್ಪ ಇಡ್ತಿದೆ
ನೆತ್ತಿ ತುಂಬ ಹೂಂಗೆ ಮುಡ್ಕಂತಿದೆ
ಗೆಜ್ಜೆ ಕಾಲ ಮಗ್ನ ಚಚ್ಕಂಡಿ
ಆಚೆಮನೆಗೆ ಈಚಿಮನೆಗೆ
ವೋಡಾಡ್ತ ಇರ್ತಿದ್ಯಯ್ಯಾ ತಂದೋನಾನ’ || ೪ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?
Next post ಬದುಕಿನ ಕುರಿತು Robert Frostನ ಎರಡು ಕವಿತೆಗಳು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys