Home / ಕವನ / ಕೋಲಾಟ / ತಂದಾನೋ (ಸುಗ್ಗಿ ಆಲಾಪ)

ತಂದಾನೋ (ಸುಗ್ಗಿ ಆಲಾಪ)

(ಮೃದಂಗ ಹೊಡೆಯುವ ಆಲಾಪ)

ಶಾತಗಲ್ ಶಣ್ಣ ತಂಗಿ
‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’
‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’
‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || ೧ ||

‘ನಿಮ್ಮತ್ತೆಯೆಲ್ ಹೋಗಿದೆ?’
‘ಅತ್ತೆಹಿತ್ಲಗೆ ಹೋಗಿದು’
‘ಮಾವೆಲ್ ಹೋಗಿದ್ದ?’
‘ಮಾವ ಮಾಲ್ಕೆ ಹೋಗ್ಯ’
‘ಗಂಡೆಲ್ ಹೋಗಿನೇ?’
‘ದಂಡಿಗೆ ಹೋಗ್ಯ’ || ೨ ||

‘ಮೈದಯೆಲ್ ಹೋಗಿನೇ?’
‘ಮೈದ ಶೂಲ್ಗಾರ್‍ಕಿಗೆ ಹೋಗ್ಯ’
‘ನೀ ಬಶ್ರು ಯಾಕಂಡಿ? ಹೌದೆ?’
‘ನ ಬಶ್ರಂದಿ ನಿಂಗೆ ಯಾರೆ ಹೇಳಿದ್ದು’
‘ಕೊಟ್ಟಕ ಮನೆ ಕೋಲಿ ಹೇಳ್ತು’ || ೩ ||

‘ನಾ ಬಶ್ರಾಗಿದ್ರೆ ಕಾಗೆನ ಶೀರಿ ಉಡ್ತಿದೆ,
ಕಣ್ಗೆ ಕಪ್ಪ ಇಡ್ತಿದೆ
ನೆತ್ತಿ ತುಂಬ ಹೂಂಗೆ ಮುಡ್ಕಂತಿದೆ
ಗೆಜ್ಜೆ ಕಾಲ ಮಗ್ನ ಚಚ್ಕಂಡಿ
ಆಚೆಮನೆಗೆ ಈಚಿಮನೆಗೆ
ವೋಡಾಡ್ತ ಇರ್ತಿದ್ಯಯ್ಯಾ ತಂದೋನಾನ’ || ೪ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...