ತಂದಾನೋ (ಸುಗ್ಗಿ ಆಲಾಪ)

(ಮೃದಂಗ ಹೊಡೆಯುವ ಆಲಾಪ)

ಶಾತಗಲ್ ಶಣ್ಣ ತಂಗಿ
‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’
‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’
‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || ೧ ||

‘ನಿಮ್ಮತ್ತೆಯೆಲ್ ಹೋಗಿದೆ?’
‘ಅತ್ತೆಹಿತ್ಲಗೆ ಹೋಗಿದು’
‘ಮಾವೆಲ್ ಹೋಗಿದ್ದ?’
‘ಮಾವ ಮಾಲ್ಕೆ ಹೋಗ್ಯ’
‘ಗಂಡೆಲ್ ಹೋಗಿನೇ?’
‘ದಂಡಿಗೆ ಹೋಗ್ಯ’ || ೨ ||

‘ಮೈದಯೆಲ್ ಹೋಗಿನೇ?’
‘ಮೈದ ಶೂಲ್ಗಾರ್‍ಕಿಗೆ ಹೋಗ್ಯ’
‘ನೀ ಬಶ್ರು ಯಾಕಂಡಿ? ಹೌದೆ?’
‘ನ ಬಶ್ರಂದಿ ನಿಂಗೆ ಯಾರೆ ಹೇಳಿದ್ದು’
‘ಕೊಟ್ಟಕ ಮನೆ ಕೋಲಿ ಹೇಳ್ತು’ || ೩ ||

‘ನಾ ಬಶ್ರಾಗಿದ್ರೆ ಕಾಗೆನ ಶೀರಿ ಉಡ್ತಿದೆ,
ಕಣ್ಗೆ ಕಪ್ಪ ಇಡ್ತಿದೆ
ನೆತ್ತಿ ತುಂಬ ಹೂಂಗೆ ಮುಡ್ಕಂತಿದೆ
ಗೆಜ್ಜೆ ಕಾಲ ಮಗ್ನ ಚಚ್ಕಂಡಿ
ಆಚೆಮನೆಗೆ ಈಚಿಮನೆಗೆ
ವೋಡಾಡ್ತ ಇರ್ತಿದ್ಯಯ್ಯಾ ತಂದೋನಾನ’ || ೪ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?
Next post ಬದುಕಿನ ಕುರಿತು Robert Frostನ ಎರಡು ಕವಿತೆಗಳು

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…