Home / ಬಾಲ ಚಿಲುಮೆ / ಕಥೆ / ಗರುಡನೂ ಗೂಬೆಯೂ

ಗರುಡನೂ ಗೂಬೆಯೂ

ಒಬ್ಬ ರಾಜನನ್ನು ಆರಿಸಿಕೊಳ್ಳಬೇಕೆಂದು ಹಕ್ಕಿಗಳೆಲ್ಲವೂ ಸಭೆ ಸೇರಿದವು. ಗೂಬೆಯು ಅವರಿವರಿಗೆ ಲಂಚಕೂಟ್ಟು, “ನನ್ನನ್ನು ದೊರೆಯನ್ನು ಮಾಡಿರಿ” ಎಂದು ಹೇಳಿಕೊಂಡಿತು. ಲಂಚವನ್ನು ತೆಗಿದುಕೊಂಡಿದ್ದ ಹಕ್ಕಿಗಳೆಲ್ಲವೂ ನಮಗೆ “ಗೂಬೆಯೇ ಆರಸಾಗಬೇಕು” ಎಂದವು.

ಇದೆಲ್ಲಾ ನಡೆಯುವವರೆಗೂ ಕಾಗೆಯು ಒಂದು ಮೂಲೆಯಲ್ಲಿ ಕುಳಿತಿತ್ತು. “ಕೊಳಕನಾದ ಗೂಬೆಯು ದೊರೆಯಾಗುವುದೆಂದರೇನು?” ಎಂದು ಎಲ್ಲರಿಗೂ ಅಸಹ್ಯವಾಗಿತ್ತು. ಆದರೂ ಮಾತನಾಡದೆ ಎಲ್ಲರೂ ಸುಮ್ಮನಿದ್ದರು. ಆಗ ಕಾಗೆಯು ಎದ್ದು ನಿಂತುಕೊಂಡು “ಸ್ವಾಮಿ! ಕೊಂಚ ತಡೆಯಿರಿ. ಗೂಬೆಯನ್ನು ಎಲ್ಲರೂ ಕೊಂಚ ಕಣ್ಣಿಟ್ಟು ನೋಡಿರಿ. ಜಗತ್ತಿನಲ್ಲಿ ಇಂತಹ ಕೊಳಕು ಹಕ್ಕಿಯು ಇನ್ನು ಉಂಟೆ? ಮುಖವನ್ನು ತೊಳೆದು ಎಷ್ಟು ದಿವಸವಾಯಿತೋ? ಮೈಯ್ಯನ್ನು ತೊಳೆವುದಂತೂ ಉಂಟೋ ಇಲ್ಲವೇ ಇಲ್ಲವೋ? ಆ ಕಣ್ಣುಗಳನ್ನು ನೋಡಿ. ಜಿಬರು ಗುಡ್ಡೆ ಗುಡ್ಡೆಯಾಗಿದೆ. ಮೂಗು ನೋಡಿ. ಸಿಂಬಳವು ಹರಿಯುತ್ತಿದೆ. ಇಂತಹ ಶೊಬಚನನ್ನು ಅರಸಾಗಿ ಮಾಡಿಕೊಂಡರೆ ಎಲ್ಲರೂ ನಗುವರು. ಅತ್ತ ನೋಡಿ. ಶುಚಿವಂತನಾದ ಗರುಡನು ಕುಳಿತಿರುವನು. ಯಾವಾಗ ನೋಡಿದರೂ ಮಡಿಯಾಗಿಯೇ ಇರುವನು. ಆತನನ್ನು ನೋಡಿದರೆ ಎಷ್ಟು ಸಂತೋಷವಾಗುವುದು! ಆತನ ಶುಚಿಯನ್ನು ನೋಡಿಯೇ ಭಗವಂತನಾದ ವಿಷ್ಣುವೂ ಆತನನ್ನು ಮೆಚ್ಚಿಕೊಂಡಿರುವನು. ಆತನನ್ನೇ ದೊರೆಯನ್ನು ಮಾಡಬೇಕು. ಈ ಕೊಳಕನನ್ನು ಹೊರಕ್ಕೆ ನೂಕಬೇಕು” ಎಂದಿತು. ಉಳಿದ ಹಕ್ಕಿಗಳು “ಹೌದು. ಗೂಬೆಯನ್ನು ನೂಕಿ. ಗರುಡನಿಗೇ ಪಟ್ಟಿಕಟ್ಟರಿ” ಎಂದವು. ಎಲ್ಲರೂ ಸೇರಿ ಹಾಗೆಯೇ ಮಾಡಿದರು. ಅರಸುತನವು ಗೂಬೆಗೆ ತಪ್ಪಿ ಗರುಡನಿಗೇ ಆಯಿತು.

“ತನ್ನ ಕೊಳಕುತನದಿಂದ ದೊರೆತನವನ್ನು ತಪ್ಪಿಸಿಕೂಂಡನು” ಎಂದು ಎಲ್ಲರೂ ಹಾಸ್ಯ ಮಾಡುವರು ಎಂದೋ ಏನೋ, ಗೂಬೆಯು ಈಗಲೂ ಹಗಲಿನಲ್ಲಿ ಹೊರಗೆ ಬರುವುದಿಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...