Home / ಬಾಲ ಚಿಲುಮೆ / ಕಥೆ / ಗರುಡನೂ ಗೂಬೆಯೂ

ಗರುಡನೂ ಗೂಬೆಯೂ

ಒಬ್ಬ ರಾಜನನ್ನು ಆರಿಸಿಕೊಳ್ಳಬೇಕೆಂದು ಹಕ್ಕಿಗಳೆಲ್ಲವೂ ಸಭೆ ಸೇರಿದವು. ಗೂಬೆಯು ಅವರಿವರಿಗೆ ಲಂಚಕೂಟ್ಟು, “ನನ್ನನ್ನು ದೊರೆಯನ್ನು ಮಾಡಿರಿ” ಎಂದು ಹೇಳಿಕೊಂಡಿತು. ಲಂಚವನ್ನು ತೆಗಿದುಕೊಂಡಿದ್ದ ಹಕ್ಕಿಗಳೆಲ್ಲವೂ ನಮಗೆ “ಗೂಬೆಯೇ ಆರಸಾಗಬೇಕು” ಎಂದವು.

ಇದೆಲ್ಲಾ ನಡೆಯುವವರೆಗೂ ಕಾಗೆಯು ಒಂದು ಮೂಲೆಯಲ್ಲಿ ಕುಳಿತಿತ್ತು. “ಕೊಳಕನಾದ ಗೂಬೆಯು ದೊರೆಯಾಗುವುದೆಂದರೇನು?” ಎಂದು ಎಲ್ಲರಿಗೂ ಅಸಹ್ಯವಾಗಿತ್ತು. ಆದರೂ ಮಾತನಾಡದೆ ಎಲ್ಲರೂ ಸುಮ್ಮನಿದ್ದರು. ಆಗ ಕಾಗೆಯು ಎದ್ದು ನಿಂತುಕೊಂಡು “ಸ್ವಾಮಿ! ಕೊಂಚ ತಡೆಯಿರಿ. ಗೂಬೆಯನ್ನು ಎಲ್ಲರೂ ಕೊಂಚ ಕಣ್ಣಿಟ್ಟು ನೋಡಿರಿ. ಜಗತ್ತಿನಲ್ಲಿ ಇಂತಹ ಕೊಳಕು ಹಕ್ಕಿಯು ಇನ್ನು ಉಂಟೆ? ಮುಖವನ್ನು ತೊಳೆದು ಎಷ್ಟು ದಿವಸವಾಯಿತೋ? ಮೈಯ್ಯನ್ನು ತೊಳೆವುದಂತೂ ಉಂಟೋ ಇಲ್ಲವೇ ಇಲ್ಲವೋ? ಆ ಕಣ್ಣುಗಳನ್ನು ನೋಡಿ. ಜಿಬರು ಗುಡ್ಡೆ ಗುಡ್ಡೆಯಾಗಿದೆ. ಮೂಗು ನೋಡಿ. ಸಿಂಬಳವು ಹರಿಯುತ್ತಿದೆ. ಇಂತಹ ಶೊಬಚನನ್ನು ಅರಸಾಗಿ ಮಾಡಿಕೊಂಡರೆ ಎಲ್ಲರೂ ನಗುವರು. ಅತ್ತ ನೋಡಿ. ಶುಚಿವಂತನಾದ ಗರುಡನು ಕುಳಿತಿರುವನು. ಯಾವಾಗ ನೋಡಿದರೂ ಮಡಿಯಾಗಿಯೇ ಇರುವನು. ಆತನನ್ನು ನೋಡಿದರೆ ಎಷ್ಟು ಸಂತೋಷವಾಗುವುದು! ಆತನ ಶುಚಿಯನ್ನು ನೋಡಿಯೇ ಭಗವಂತನಾದ ವಿಷ್ಣುವೂ ಆತನನ್ನು ಮೆಚ್ಚಿಕೊಂಡಿರುವನು. ಆತನನ್ನೇ ದೊರೆಯನ್ನು ಮಾಡಬೇಕು. ಈ ಕೊಳಕನನ್ನು ಹೊರಕ್ಕೆ ನೂಕಬೇಕು” ಎಂದಿತು. ಉಳಿದ ಹಕ್ಕಿಗಳು “ಹೌದು. ಗೂಬೆಯನ್ನು ನೂಕಿ. ಗರುಡನಿಗೇ ಪಟ್ಟಿಕಟ್ಟರಿ” ಎಂದವು. ಎಲ್ಲರೂ ಸೇರಿ ಹಾಗೆಯೇ ಮಾಡಿದರು. ಅರಸುತನವು ಗೂಬೆಗೆ ತಪ್ಪಿ ಗರುಡನಿಗೇ ಆಯಿತು.

“ತನ್ನ ಕೊಳಕುತನದಿಂದ ದೊರೆತನವನ್ನು ತಪ್ಪಿಸಿಕೂಂಡನು” ಎಂದು ಎಲ್ಲರೂ ಹಾಸ್ಯ ಮಾಡುವರು ಎಂದೋ ಏನೋ, ಗೂಬೆಯು ಈಗಲೂ ಹಗಲಿನಲ್ಲಿ ಹೊರಗೆ ಬರುವುದಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...