Home / ಕವನ / ಕವಿತೆ / ಸ್ವಚ್ಛ ಭಾರತ್

ಸ್ವಚ್ಛ ಭಾರತ್

ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಯಾನಕೆ
ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಮಾನಕೆ
ಕೈಜೋಡಿಸಿದೆವು ಪ್ರಮಾಣವಚನ ಮಾಡಿಸಿದಿರಿ ಬೀದಿಗಿಳಿಸಿದಿರಿ
ಆದ ಸಂತೋಷ ಅಷ್ಟಿಷ್ಟಲ್ಲ
ಆರೋಗ್ಯವೇ ಭಾಗ್ಯ: ಸರ್ವಂ ಸುಂದರಂ ಅಲ್ಲವೆ ಮತ್ತೆ
ಕಿವಿಗಳು ಕೇಳಿಯೇ ಪಾವನವಾದವು
ಕಣ್ಣುಗಳು ನೋಡಿಯೇ ಬಿಡಲು ಹಟಕ್ಕೆ ಬಿದ್ದವು
ದೇಶಭಕ್ತರೆಲ್ಲ ಪೊರಕೆ ಹಿಡಿದರು

ಫಳಫಳ ಹೊಳೆವ ದೊಡ್ಡದೊಡ್ಡ ಗಾಜು ಕಿಟಕಿಗಳ
ಆಫೀಸುಗಳ ತಾರುತಂತಿ ತಗಡು ಬೋರ್‍ಡು
ನಟ್ ಬೋಲ್ಟ್‌ಗಳ ಸಾಪ್ಟವೇರ್ ಕಸವೆಲ್ಲ
ಅವರವರ ಗೇಟ್ ಮುಂದೆ ಬಿದ್ದಿವೆ-
ಸ್ವಚ್ಛ ಭಾರತದ ಪೊರಕೆಯವರನು ನೋಡಿ
ಧೂಳ ಜಾಡಿಸಿ ಕಾರಿನ ಕಿಟಕಿ ಏರಿಸುತ
ಹೊರಟೇಬಿಡುವರು ಆರೆಂಟು ಅಂಕಿಯ
ಹಣಪಡೆವ ಜಾಣರು ಮೋದಿಜಿ!

ಪುಣ್ಯಕ್ಷೇತ್ರಗಳ ಒಳಗೆ ಕಣ್ಬಿಟ್ಟ ದೇವನೆದುರು
ಧೂಪ ದೀಪ ಹೂಹಾರ ಹಣ್ಣು ಪ್ರಸಾದ
ಮನಸಿಗೆ ತೃಪ್ತಿ ದೇವರ ದರುಶನ ಪಡೆದ ಭಾಗ್ಯ
ಈಚೆಗೆ ಬಂದದ್ದೆ ಆಚೀಚೆ ಕಣ್ಣಾಡಿಸಿದ್ದೇ ಕ್ಷಣ
ಎಲ್ಲೆಲ್ಲೂ ಕೊಳೆತ ಎಲೆಹೂವು ಹಣ್ಣುಗಳ ಚಿಲ್ಲಾಪಿಲ್ಲಿ
ದನಗಳ ಸಗಣಿ ಗಂಜಲಿನ ಗಬ್ಬುವಾಸನೆ ಪಿಚಿಪಿಚಿ.
ಸ್ವಚ್ಛ ಭಾರತ ಹುರುಪಿನ ಪೊರಕೆಯವರು
ಮುಂದಾದರೆ ಅವರ ಜಾತಿಮತ ಬಣ್ಣ ಕೆದಕಿ
ನಾಲ್ಕೈದು ಬೈಗುಳ ಬಯ್ದು
ಮೂಗು ಮುಚ್ಚಿ ಕಾರೇರಿ ಹೋರಟೇಬಿಡುತ್ತಾರೆ ಮೋದಿಜಿ!!

ಶಾಲೆ ಕಾಲೇಜು ಆಫೀಸುಗಳೊಳಗೂ
ಅಧಿಕಾರಿಗಳೆಂಬುವವರ ಕತ್ತಲೆಕೋಣೆಗಳೊಳಗೂ
ಜೀವ ಉಳಿಸುವ ಜೀವಾಲಯದೊಳಗೂ
ಭ್ರಷ್ಟರಾಜಕೀಯ ಅತ್ಯಾಚಾರಗಳ ದುರಂತ ಸರಮಾಲೆ
ದೇಶದ ರೈಲು ಹಳಿತಪ್ಪಿ ಎಲ್ಲೆಲ್ಲೊ ಸುತ್ತುತ್ತಿದೆ
ಹಳಿಗುಂಟ ಹಾದಿಗುಂಟ ಕಸವೋ ಕಸ ಮೋದಿಜಿ!

ಎಲುಬಿಲ್ಲದ ನಾಲಿಗೆಗಳ ಶಬ್ದಮಾಲಿನ್ಯ ಭ್ರಷ್ಟರಮಾಲಿನ್ಯ
ಅತ್ಯಾಚಾರಮಾಲಿನ್ಯ ಜಾತಿಮಾಲಿನ್ಯ ಗೂಡಿಸಿ ಗುಂಡಿಗೆ ಹಾಕಲು
ನಿಮ್ಮ ಪೊರಕೆಗಳು ಬೇಕಾಗಿವೆ ಮೋದಿಜಿ.

ಎಲ್ಲೆಲ್ಲೂ ಎಲ್ಲದಕ್ಕೂ ಬರೀ ವಾದ ಪ್ರತಿವಾದ
ಶಾಂತಿ ನೆಮ್ಮದಿ ಹಾಳುಗೆಡವಿ
ತಾವೂ ಹಾಳಾಗುವ ದ್ವಂದಿಗಳ ಮುಖವಾಡ
ಕಳಚುವ ವಾಸ್ತವದ ಅರಿವು ಗ್ರಹಿಸುವ
ಶುದ್ಧ ಸ್ವಚ್ಛ ಕಳಕಳಿಯ ಬೀಜಗಳು ಬಿತ್ತುವ
ಪೊರಕೆಯಂಥ ಮಾದರಿಗಳು ಬೇಕಾಗಿವೆ ಮೋದಿಜಿ
ದೇಶವೆಂಬ ಮನಸು; ಮನಸೆಂಬ ದೇಶ
ನಮ್ಮೊಳಗೆ ಅನುಗಾಲವೂ ಉಳಿಯಲು
ಮಾದರಿಯ ಪೊರಕೆಗಳು ಬೇಕೆ ಬೇಕು ಮೋದಿಜಿ
ಮಾದರಿಯ ಪೊರಕೆಗಳು ಬೇಕೇ ಬೇಕು.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...