Home / ಕವನ / ಕವಿತೆ / ಸ್ವಚ್ಛ ಭಾರತ್

ಸ್ವಚ್ಛ ಭಾರತ್

ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಯಾನಕೆ
ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಮಾನಕೆ
ಕೈಜೋಡಿಸಿದೆವು ಪ್ರಮಾಣವಚನ ಮಾಡಿಸಿದಿರಿ ಬೀದಿಗಿಳಿಸಿದಿರಿ
ಆದ ಸಂತೋಷ ಅಷ್ಟಿಷ್ಟಲ್ಲ
ಆರೋಗ್ಯವೇ ಭಾಗ್ಯ: ಸರ್ವಂ ಸುಂದರಂ ಅಲ್ಲವೆ ಮತ್ತೆ
ಕಿವಿಗಳು ಕೇಳಿಯೇ ಪಾವನವಾದವು
ಕಣ್ಣುಗಳು ನೋಡಿಯೇ ಬಿಡಲು ಹಟಕ್ಕೆ ಬಿದ್ದವು
ದೇಶಭಕ್ತರೆಲ್ಲ ಪೊರಕೆ ಹಿಡಿದರು

ಫಳಫಳ ಹೊಳೆವ ದೊಡ್ಡದೊಡ್ಡ ಗಾಜು ಕಿಟಕಿಗಳ
ಆಫೀಸುಗಳ ತಾರುತಂತಿ ತಗಡು ಬೋರ್‍ಡು
ನಟ್ ಬೋಲ್ಟ್‌ಗಳ ಸಾಪ್ಟವೇರ್ ಕಸವೆಲ್ಲ
ಅವರವರ ಗೇಟ್ ಮುಂದೆ ಬಿದ್ದಿವೆ-
ಸ್ವಚ್ಛ ಭಾರತದ ಪೊರಕೆಯವರನು ನೋಡಿ
ಧೂಳ ಜಾಡಿಸಿ ಕಾರಿನ ಕಿಟಕಿ ಏರಿಸುತ
ಹೊರಟೇಬಿಡುವರು ಆರೆಂಟು ಅಂಕಿಯ
ಹಣಪಡೆವ ಜಾಣರು ಮೋದಿಜಿ!

ಪುಣ್ಯಕ್ಷೇತ್ರಗಳ ಒಳಗೆ ಕಣ್ಬಿಟ್ಟ ದೇವನೆದುರು
ಧೂಪ ದೀಪ ಹೂಹಾರ ಹಣ್ಣು ಪ್ರಸಾದ
ಮನಸಿಗೆ ತೃಪ್ತಿ ದೇವರ ದರುಶನ ಪಡೆದ ಭಾಗ್ಯ
ಈಚೆಗೆ ಬಂದದ್ದೆ ಆಚೀಚೆ ಕಣ್ಣಾಡಿಸಿದ್ದೇ ಕ್ಷಣ
ಎಲ್ಲೆಲ್ಲೂ ಕೊಳೆತ ಎಲೆಹೂವು ಹಣ್ಣುಗಳ ಚಿಲ್ಲಾಪಿಲ್ಲಿ
ದನಗಳ ಸಗಣಿ ಗಂಜಲಿನ ಗಬ್ಬುವಾಸನೆ ಪಿಚಿಪಿಚಿ.
ಸ್ವಚ್ಛ ಭಾರತ ಹುರುಪಿನ ಪೊರಕೆಯವರು
ಮುಂದಾದರೆ ಅವರ ಜಾತಿಮತ ಬಣ್ಣ ಕೆದಕಿ
ನಾಲ್ಕೈದು ಬೈಗುಳ ಬಯ್ದು
ಮೂಗು ಮುಚ್ಚಿ ಕಾರೇರಿ ಹೋರಟೇಬಿಡುತ್ತಾರೆ ಮೋದಿಜಿ!!

ಶಾಲೆ ಕಾಲೇಜು ಆಫೀಸುಗಳೊಳಗೂ
ಅಧಿಕಾರಿಗಳೆಂಬುವವರ ಕತ್ತಲೆಕೋಣೆಗಳೊಳಗೂ
ಜೀವ ಉಳಿಸುವ ಜೀವಾಲಯದೊಳಗೂ
ಭ್ರಷ್ಟರಾಜಕೀಯ ಅತ್ಯಾಚಾರಗಳ ದುರಂತ ಸರಮಾಲೆ
ದೇಶದ ರೈಲು ಹಳಿತಪ್ಪಿ ಎಲ್ಲೆಲ್ಲೊ ಸುತ್ತುತ್ತಿದೆ
ಹಳಿಗುಂಟ ಹಾದಿಗುಂಟ ಕಸವೋ ಕಸ ಮೋದಿಜಿ!

ಎಲುಬಿಲ್ಲದ ನಾಲಿಗೆಗಳ ಶಬ್ದಮಾಲಿನ್ಯ ಭ್ರಷ್ಟರಮಾಲಿನ್ಯ
ಅತ್ಯಾಚಾರಮಾಲಿನ್ಯ ಜಾತಿಮಾಲಿನ್ಯ ಗೂಡಿಸಿ ಗುಂಡಿಗೆ ಹಾಕಲು
ನಿಮ್ಮ ಪೊರಕೆಗಳು ಬೇಕಾಗಿವೆ ಮೋದಿಜಿ.

ಎಲ್ಲೆಲ್ಲೂ ಎಲ್ಲದಕ್ಕೂ ಬರೀ ವಾದ ಪ್ರತಿವಾದ
ಶಾಂತಿ ನೆಮ್ಮದಿ ಹಾಳುಗೆಡವಿ
ತಾವೂ ಹಾಳಾಗುವ ದ್ವಂದಿಗಳ ಮುಖವಾಡ
ಕಳಚುವ ವಾಸ್ತವದ ಅರಿವು ಗ್ರಹಿಸುವ
ಶುದ್ಧ ಸ್ವಚ್ಛ ಕಳಕಳಿಯ ಬೀಜಗಳು ಬಿತ್ತುವ
ಪೊರಕೆಯಂಥ ಮಾದರಿಗಳು ಬೇಕಾಗಿವೆ ಮೋದಿಜಿ
ದೇಶವೆಂಬ ಮನಸು; ಮನಸೆಂಬ ದೇಶ
ನಮ್ಮೊಳಗೆ ಅನುಗಾಲವೂ ಉಳಿಯಲು
ಮಾದರಿಯ ಪೊರಕೆಗಳು ಬೇಕೆ ಬೇಕು ಮೋದಿಜಿ
ಮಾದರಿಯ ಪೊರಕೆಗಳು ಬೇಕೇ ಬೇಕು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ