ಒಳಕಲ್ಲ ಪೂಜೀ ಹಾಡು

ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ।
ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧||

ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ|
ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨||

ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ|
ಸಾಲ ಮ್ಯಾಳಿಽಗಿ ಮನಿಯವಳ|| ಸು… ||೩||

ಸಾಲ ಮ್ಯಾಳಿಽಗಿ ಮನಿಯವಳು ತಂಗೆವ್ವಾ|
ಒಳ್ಳೆ ಪೂಜಿಽಗಿ ಕರಸ್ಯಾಳ || ಸು…. ||೪||

ಬಲ್ಲಬಲ್ಲವರಿಽಗಿ ಪಲ್ಲಕ್ಕಿ ಕಳವ್ಯಾಳ|
ಪಿಲ್ಲ್ಯಾದಗಾಲ ಮಗಳಿಽಗಿ || ಸು… ||೫||

ಪಿಲ್ಲ್ಯಾದಗಾಲ ಮಗಳೆ ಸಂಗಮ್ಮಗ|
ಪಲ್ಲಕ್ಕಿ ಕೊಟ್ಟು ಕರಸ್ಯಾರ || ಸು…. ||೬||

ನೆಂಟನೆಂಟಿರಿಽಗಿ ಮಂಟಪ್ಪ ಖಳವ್ಯಾರ|
ಮಂಟಿಗಿಗಾಲ ಮಗಳಿಗೆ|| ಸು… ||೭||

ಮಂಟಿಗಿಗಾಲ ಮಗಳ ಸಂಗಮ್ಮಗ|
ಒಂಟಿ ಸಿಂಗರಿಸಿ ಖಳವ್ಯಾರ|| ಸು… ||೮||

ಹಂದರ ಮ್ಯಾಲಿನ ಕಣಕಿ ನಂದಿ ಮೆಯ್ದಾನವೆಂದು|
ಬಿಚ್ಚಿ ಬಿಳಿ ಎಲಿ ಹೆರವ್ಯಾರ|| ಸು… ||೯||

ಬಿಚ್ಚಿ ಬಿಳಿ ಎಲಿಯ ಹೆರವ್ಯಾರ ತಮ್ಮಽಗ||
ಅಪ್ಪ ಮಾಡ್ಯಾನ ಮದುವಿಽಯ| ಸು… ||೧೦||

ಹಂದರ ಮ್ಯಾಲಿನ ಕಣಿಕಿ ನಂದಿ ಮೆಯ್ದಾವಂದ|
ಬಿಚ್ಚಿ ಬಿಳಿಯಽಲಿ ಹರವ್ಯಾರ|| ಸು… ||೧೧||

ಬಿಚ್ಚಿ ಬಿಳಿಯಽಲಿ ಹರವ್ಯಾರ ತಮ್ಮಽಗ|
ಅಣ್ಣ ಮಾಡ್ಯಾನ ಮದುವಿಽಯ|| ಸು… ||೧೨||
*****

ಲಗ್ನಕ್ಕೆ ಬೇಕಾಗುವ ಹಿಟ್ಟಕ್ಕಿಯ ಸಾಹಿತ್ಯವನ್ನು ಸಿದ್ಧಮಾಡುವ ಕಾಲದಲ್ಲಿ ಮೊದಲಿಗೆ ಒರಳು, ಬೀಸುವಕಲ್ಲು ಮುಂತಾದವುಗಳ ಪೂಜೆ ಮಾಡಿ ಕೆಲಸವನ್ನು ಪ್ರಾರಂಭಿಸುತ್ತಾರೆ. ಆ ಪ್ರಸಂಗದ ಹಾಡಿದು.

ಛಂದಸ್ಸು:- ತ್ರಿಪದಿಯಾಗಿದೆ.

ಶಬ್ದಪ್ರಯೋಗಗಳು:- ವಳ್ಳ=ಒರಳು. ಮಂಟಗಿ=ಕಾಲಲ್ಲಿ ಧರಿಸುವ ಒಂದು ಆಭರಣ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಬಾವುಟದಡಿಯಲ್ಲಿ…
Next post ಹಚ್ಚೆ-ಹಕ್ಕು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…