Home / ಕವನ / ಕವಿತೆ / ಹೊಲೆಯನ ಹಾಡು

ಹೊಲೆಯನ ಹಾಡು

ಉಳ್ಳಯ್ಯಾ, ದಯೆ ಗೊಳ್ಳಯ್ಯಾ!

“ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ!
ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ!
ಬೊಟ್ಟೆ! ಬೊಗ್ಗುರೆ!” ಎಂದು ಹೆಸರೆತ್ತಿ ಕೂಗಿ
ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ!

ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟು-
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೆ ನಮ್ಮ ಮೈ ಅಂಟು ?

ಹಾಸಿಗೆ ತಗಣೆ ಮುದ್ದಿಪ ನಿಮ್ಮ ಮೈಗೆ
ಹೇಸಿಗೆ ಅಹುದೆ ಮುಟ್ಟಲು ನಮ್ಮ ಕೈಗೆ?
ವಾಸಕ್ಕೆ ನಮಗೂರ ಹೊರಗೊಂದು ಎಡೆಯೇ?
ಆ ಸುದ್ದ ಹಂದಿನಾಯ್ಗಳಿಗಿಂತ ಕಡೆಯೆ?

ಒಳಹೊಕ್ಕು ಅನ್ನ ತಿಂಬುದು ಮನೆ ಬೆಕ್ಕು;
ಉಳುವರು ನಾವು! ಹಾ! ನಮಗಿಲ್ಲ ಹಕ್ಕು!
ಅಳುವ ತಮ್ಮಗೆ ಸರಿ ಮಣೆಯನ್ನು ಇಕ್ಕು;
ಕಲಿಯುಗದಲಿ ನಿನಗಿದು ಪುಣ್ಯವಕ್ಕು!

ಮಾರಿ ಹೊಲೆಯ, ಬಾವಿ, ಕೆರೆ ಮುಟ್ಟಲಾರೆ.
ಊರ ಸಾಲೆಗಳಂತೆ: ನಮಗೊಂದು ಬೇರೆ!
“ದೂರಕ್ಕೆ ಪೋ! ಪೋ!” ಯಾವುದೀ ನ್ಯಾಯ?
ಹಾರುವ! ಮಾಡಿದ್ದುಣ್ಣುವೆ, ಮಹಾರಾಯಾ!

ಅರರೆ! ಕಾಲಡಿಯ ಕುಂಬಳಕೆ ಕಣ್ಮುಚ್ಚಿ,
ಪರದೇಶ ಕಾಯಿದೆ ಸಾಸಿವೆ ಕಾಳು ಹೆಚ್ಚಿ,
ಹಿರಿದು ಹಬ್ಬಿಸುವ ಬೊಬ್ಬೆಯದೇಕೆ ಹೇಳು?
ಹೊರದೊಬ್ಬು ಮೊದಲು ನಿನ್ನಂಗಳ ಧೂಳು!

ನೋಡು ಸ್ವರಾಜ್ಯಕ್ಕೆ ನಾವೂರುಗೋಲು!
ನೀಡಣ್ಣ! ದಮ್ಮಯ್ಯ! ಕೊಡು ಸರಿ ಸಾಲು!
ಬೇಡಿದಾಗಲೆ ಬಿಟ್ಟುಕೊಡುವುದೆ ಮೇಲು!
ಬೇಡ ನಾಂ ಸೆಳೆದು ಕೊಂಬೆವು ನಮ್ಮ ಪಾಲು!

ನಂದಿಸು ಕಿಡಿಯಲ್ಲಿ ಹೊಲೆಯನ ಹಗೆಯಾ!
ಬಂದಿಸು ಕೈಗೆ ಕೈ! ನಮ್ಮ ಸಲುಗೆಯಾ
ಹೊಂದಿಸು! ಸಂದಿಸು ಮೊಗದಲ್ಲಿ ನಗೆಯಾ!
ಹಿಂದು ದೇವಿಯು ಘಲ್ಲೆಂಬಳು ಕಾಲಂದುಗೆಯಾ!
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...