Home / ಕವನ / ಕವಿತೆ / ಹೊಲೆಯನ ಹಾಡು

ಹೊಲೆಯನ ಹಾಡು

ಉಳ್ಳಯ್ಯಾ, ದಯೆ ಗೊಳ್ಳಯ್ಯಾ!

“ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ!
ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ!
ಬೊಟ್ಟೆ! ಬೊಗ್ಗುರೆ!” ಎಂದು ಹೆಸರೆತ್ತಿ ಕೂಗಿ
ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ!

ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟು-
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೆ ನಮ್ಮ ಮೈ ಅಂಟು ?

ಹಾಸಿಗೆ ತಗಣೆ ಮುದ್ದಿಪ ನಿಮ್ಮ ಮೈಗೆ
ಹೇಸಿಗೆ ಅಹುದೆ ಮುಟ್ಟಲು ನಮ್ಮ ಕೈಗೆ?
ವಾಸಕ್ಕೆ ನಮಗೂರ ಹೊರಗೊಂದು ಎಡೆಯೇ?
ಆ ಸುದ್ದ ಹಂದಿನಾಯ್ಗಳಿಗಿಂತ ಕಡೆಯೆ?

ಒಳಹೊಕ್ಕು ಅನ್ನ ತಿಂಬುದು ಮನೆ ಬೆಕ್ಕು;
ಉಳುವರು ನಾವು! ಹಾ! ನಮಗಿಲ್ಲ ಹಕ್ಕು!
ಅಳುವ ತಮ್ಮಗೆ ಸರಿ ಮಣೆಯನ್ನು ಇಕ್ಕು;
ಕಲಿಯುಗದಲಿ ನಿನಗಿದು ಪುಣ್ಯವಕ್ಕು!

ಮಾರಿ ಹೊಲೆಯ, ಬಾವಿ, ಕೆರೆ ಮುಟ್ಟಲಾರೆ.
ಊರ ಸಾಲೆಗಳಂತೆ: ನಮಗೊಂದು ಬೇರೆ!
“ದೂರಕ್ಕೆ ಪೋ! ಪೋ!” ಯಾವುದೀ ನ್ಯಾಯ?
ಹಾರುವ! ಮಾಡಿದ್ದುಣ್ಣುವೆ, ಮಹಾರಾಯಾ!

ಅರರೆ! ಕಾಲಡಿಯ ಕುಂಬಳಕೆ ಕಣ್ಮುಚ್ಚಿ,
ಪರದೇಶ ಕಾಯಿದೆ ಸಾಸಿವೆ ಕಾಳು ಹೆಚ್ಚಿ,
ಹಿರಿದು ಹಬ್ಬಿಸುವ ಬೊಬ್ಬೆಯದೇಕೆ ಹೇಳು?
ಹೊರದೊಬ್ಬು ಮೊದಲು ನಿನ್ನಂಗಳ ಧೂಳು!

ನೋಡು ಸ್ವರಾಜ್ಯಕ್ಕೆ ನಾವೂರುಗೋಲು!
ನೀಡಣ್ಣ! ದಮ್ಮಯ್ಯ! ಕೊಡು ಸರಿ ಸಾಲು!
ಬೇಡಿದಾಗಲೆ ಬಿಟ್ಟುಕೊಡುವುದೆ ಮೇಲು!
ಬೇಡ ನಾಂ ಸೆಳೆದು ಕೊಂಬೆವು ನಮ್ಮ ಪಾಲು!

ನಂದಿಸು ಕಿಡಿಯಲ್ಲಿ ಹೊಲೆಯನ ಹಗೆಯಾ!
ಬಂದಿಸು ಕೈಗೆ ಕೈ! ನಮ್ಮ ಸಲುಗೆಯಾ
ಹೊಂದಿಸು! ಸಂದಿಸು ಮೊಗದಲ್ಲಿ ನಗೆಯಾ!
ಹಿಂದು ದೇವಿಯು ಘಲ್ಲೆಂಬಳು ಕಾಲಂದುಗೆಯಾ!
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...