Home / ಲೇಖನ / ವ್ಯಕ್ತಿ / ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್ ಅವರು ಬೆಂಗಳೂರಿನಲ್ಲಿ ಹುಟ್ಟಿದವರು ಅಪ್ಪಟ ಕನ್ನಡಿಗರೆಂಬ ಅಭಿಮಾನ.

ಇವರೊಬ್ಬ ವಿಜ್ಞಾನಿ. ರಾಷ್ಟ್ರೀಯ ಅಂತರರಾಷ್ಟ್ರೀಯ ವಿಜ್ಞಾನಿ.

ಭವ್ಯ ಭಾರತದ ಸಮಾಜ ಜೀವ ವಿಜ್ಞಾನಿಯೆಂದೇ ಖ್ಯಾತನಾಮರು.

ಇವರು- ಈಗ ಸದಸ್ಯ ಸೆಂಟರ್‌ ಫಾರ್‌ ಇಕೊಲಾಜಿಕಲ್ ಸೈನ್ಸಸ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರೊಫೆಸರ್ ಎಂದು ಕಾರ್‍ಯ ನಿರ್ವಹಿಸುತ್ತಿರುವರು.

ಇತ್ತೀಚೆಗೆ ಇವರಿಗೆ ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ “ದಿ ಕ್ರಾಸ್ ಆಫ್ ಆರ್ಡರ್ ಆಫ್ ಮೆರಿಟ್” ಅನ್ನು ಗಳಿಸಿದ್ದಾರೆ. ಇದು ಇವರ ಜ್ಞಾನ ವಿಜ್ಞಾನಕ್ಕೆ ಸಂದ ಪ್ರಶಸ್ತಿ ಪುರಸ್ಕಾರವಾಗಿದೆ!

ಇತ್ತೀಚೆಗೆ ಆಗಸ್ಟ್ ೨೦೧೫ ರಲ್ಲಿ ಇವರಿಗೆ ಬೆಂಗಳೂರಿನಲ್ಲಿರುವ ಜರ್ಮನ್ ಕಾನ್ಸುಲೇಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಇಡೀ ಕನ್ನಡ ನಾಡಿಗೇ ಸಂದ ಸ್ಥಾನಮಾನವಾಗಿದೆ.

ರಾಘವೇಂದ್ರ ಗದಗ್ ಕರ್‌ ಅವರು ವರ್ತನಾ ಪರಿಸರ ಹಾಗೂ ಸಾಮಾಜಿಕ ಜೀವಶಾಸ್ತ್ರಕ್ಕೆ ನೀಡಿರುವ ಅಮೋಘ ಅಮೂಲ್ಯ ಕೊಡುಗೆಗೆ ಹಾಗೂ ಭವ್ಯ ಭಾರತ ಜರ್ಮನಿಯ ನಡುವೆ ಸಂಶೋಧನಾ ಸಹಕಾರವನ್ನು ಇವರು ಇನ್ನಷ್ಟು ಬಲಪಡಿಸಿರುವುದನ್ನು ಗುರುತರವಾಗಿ ಪರಿಗಣಿಸಿ ಈ ಪ್ರಶಸ್ತಿ ಪುರಸ್ಕಾರವನ್ನು ಕೊಡಮಾಡಿರುವರು.

ಶ್ರೀಯುತರು ಕೀಟ ಸಮಾಜ ವಿಜ್ಞಾನದಲ್ಲೂ ತಜ್ಞರಾಗಿರುವ ಗದಗ್‌ಕರ್ ಅವರು ನ್ಯಾಷನಲ್ ಸೈನ್ಸ್ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಿವರು.

ಇವರ “ಸರ್‍ವೈವಲ್ ಸ್ಟ್ರಾಟಜೀಸ್”- ಪುಸ್ತಕ ಇಂಗ್ಲೀಷ್‌ನಿಂದ ಚೀನಿ ಹಾಗೂ ಕೊರಿಯನ್ ಭಾಷೆಗಳಿಗೆ ಅನುವಾದಗೊಂಡಿರುವುದು.

ಇವರು ಪ್ರತಿನಿತ್ಯ ನಿರಂತರವಾಗಿ ತಮ್ಮ ಕೆಲಸ ಕಾವ್ಯಗಳ ಮಧ್ಯೆ ವಿದ್ಯಾರ್ಥಿಗಳಿಗೆ ಹಾಗೂ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡುತ್ತಾ ವಿಜ್ಞಾನದಲ್ಲಿ ಸುಜ್ಞಾನವನ್ನು ಕಾಣುತ್ತಿರುವರು.

ಮುದ್ದು ಮಕ್ಕಳೆ… ರಾಘವೇಂದ್ರ ಗದಗ್‌ಕರ್‌ ಅವರು ನಿಮಗೆಲ್ಲ ಸ್ಫೂರ್ತಿದಾಯಕ ಚೈತನ್ಯದಾಯಕವಾಗಲಿ ಎಂದು ಈ ಪುಟ್ಟ ಬರಹವಾಗಿದೆ. ನೀವೂ ಈ ನಿಟ್ಟಿನಲ್ಲಿ ಸಾಗಲು ಸಲಹೆ ಮಾಡುವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...