ಚೌಕಾಬಾರದಾಟ

ಹಗಲೆಲ್ಲ ದೃಶ್ಯಕಾವ್ಯ
ಮುಖಾಮುಖಿ ಮಾತು ಚಲಾವಣೆ
ಮನೆ ಸಂತೆಪೇಟೆ ರಾಜಕೀಯ
ಕಾಡುಮೇಡು ಆಕಾಶ ಸಮುದ್ರದವರೆಗೆ
ದುಡಿದು ಬೆವರಿಳಿಸಿದವರ ಅರೆಹೊಟ್ಟೆಮಾತು
ಬಿರಿದ ಹೊಟ್ಟೆಯವರ ಭ್ರಷ್ಟಾಚಾರದ ಮಾತು
ಹೃದಯಮಾತಿಗೆಲ್ಲಿ ದೃಶ್ಯಕಾವ್ಯ.

ರಾತ್ರಿಗೆ ಕತ್ತಲೆಕಾವ್ಯ
ರಾತ್ರಿರಾಣಿಯರ ಗೋಳಾಟದ ಕಥೆ ಕಾದಂಬರಿ
ಒಮ್ಮೊಮ್ಮೆ ಮಹಾಕಾವ್ಯ
ಭಾರವಾದರೆ ಬೆಳಗಾಗುವುದರೊಳಗೆ ಚುಟುಕು;
ಕಳ್ಳರಿಗೆ ನಾನಾವತಾರದ ವೇದಿಕೆ
ರಾಕ್ಷಸೀ ಚಟುವಟಿಕೆ

ದುಃಸ್ವಪ್ನ ಬೀಭತ್ಸ ಭಯಾನಕ
ಮನಗಳ ನಿದ್ರೆಗೆ ನಿಶ್ಯಬ್ದದಾವರಣ.

ಹಗಲುರಾತ್ರಿಗಳ ನಿರಂತರ ಚಲನೆಗೆ
ಸೂರ್‍ಯಚಂದ್ರ ಚಿಕ್ಕೆಗಳ ಕಳ್ಳಾಟ ಮಳ್ಳಾಟ ಸುತ್ತಾಟ.
ಭೂಮಿ ಆಕಾಶ ಗಾಳಿ ನೀರು ಬೆಂಕಿ
ಪಂಚಭೂತಗಳ ಚೊಕ್ಕ ಲೆಕ್ಕಾಚಾರ.

ಹುಲುಮಾನವ ಮಹೋದಯರಿಗೆ ಜೀವನ್ಮರಣದ
ಸೋಲುಗೆಲವುಗಳ ಚೌಕಾಬಾರದಾಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೭
Next post ಅರ್ಜುನ ಜೋಗಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…