ಗೆಳೆಯನಿಗೆ

ಗೆಳೆಯ ಬಾಳು ಇದು ಕ್ಷಣಿಕ
ಇದು ಸತ್ಯವಲ್ಲ ಅನಿತ್ಯ
ಮಿಥ್ಯದಲ್ಲಿ ಮೈ ಮರೆತು ನೀನು
ಮರೆತೆಯಾ ಪರಮಾತ್ಮ ನಿತ್ಯ

ಧರ್‍ಮದಲ್ಲಿ ಕಾಣದೆ ಆಶಿವಗೆ ನಿ
ಧರ್‍ಮವೇ ನಿನ್ನದೆಂದು ಹೆಮ್ಮೆ ಪಡೆವೆ
ಧರ್‍ಮಯಾವುದಾದರೇನು! ಮಿತ್ರ
ದೇವರಿಗೆ ದೊರಕಿಸಿ ಕೊಡದ ಧರ್ಮವೆ

ಪ್ರತಿ ನಿತ್ಯ ಬಿಡದೆ ಕರ್‍ಮಮಾಡು
ಆ ಕರ್‍ಮವೆ ಪೂಜೆಯೆಂದು ಅರಿಯು
ಮನವು ಕಶ್ಮಲದಿಂದ ಮುಕ್ತಿವಿರಲಿ
ಹೆಜ್ಜೆ ಹೆಜ್ಜೆಗೆ ನೀನು ಪವಿತ್ರ ತಿಳಿಯು

ಮರಳಿನ ಮೇಲೆ ಮನೆ ಕಟ್ಟುವಂತೆ
ಆಸೆಗಳಿಂದ ಗೋಪುರ ಕಟ್ಟುತ್ತಿರುವೆ
ಆಸೆ ನಿರಾಸೆಗಳಲಿ ಜೀವಕೊನೆಗಾಣಿಸಿ
ಮೌಲ್ಯಬಾಳು ಹಾಳು ಗೆಡುತಿರುವೆ

ಬಿಡು ನೀನು ವಿಷಯ ಸುಖಗಳಿಗೆ
ದಾಸನಾಗದಿರು ನೀ ಐಹಿಕ ಭೋಗಗಳಿಗೆ
ನಾಳಿನ ಮುಕ್ತಿಗೆ ಇಂದೇ ಅಣಿಯಾಗು
ಮಾಣಿಕ್ಯ ವಿಠಲನಿಗೆ ಮುಡಿಪಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೨
Next post ಓ ಕನ್ನಡಿಗ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys