Home / ಕವನ / ತತ್ವಪದ / ನಿಜ ಸ್ವರೂಪ

ನಿಜ ಸ್ವರೂಪ

ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ
ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ
ತೊಳೆಬೇಕು ತನವ ಮಾಡಬೇಕು ಹವನ
ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ

ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ
ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ
ಎದ್ದೇಳು ಎದೆಗಾರಿಕೆಯಿಂದ ಹಿಮ್ಮೆಟಿಸು ಬೈರವನ
ಪಡೆದುಕೊ ಪರಮಾತ್ಮನ ಅಲಂಗಿಸು ಅವನ

ನಿನ್ನ ಮನಸ್ಸು ನಿಲ್ಲಲಿ ಎತ್ತರದ ಸ್ತರದಲಿ
ಬೆಳ್ಳಗಿನ ಮನಸ್ಸೆಂಬುದೆ ನಿನ್ನ ಆತ್ಮ
ನಿನ್ನ ಭಾವಗಳ ತುಂಬ ಪರಶಿವನ ತುಂಬಿಕೊ
ಕರ್‍ಮದ ಇಂಚು ಇಂಚಿನಲಿ ಸಾಕ್ಷಿಯಾಗಲಿ ಆತ್ಮ

ಹಂಸ ಪಕ್ಷಿ ಜಲದಿ ಕ್ಷೀರವೆ ಹೀರುವಂತೆ
ಸಂಸಾರ ಮಾಯೆಯಲಿ ದೇವನ ಆರಾಧಿಸು
ಸ್ವಾತಿ ಮಳೆಯು ಬೀಳಲು ಮುತ್ತಾಗುವಂತೆ
ಧ್ಯಾನದಲಿ ಜ್ಯೋತಿಗಾಗಿ ನೀನು ಕಾತರಿಸು

ಇಲ್ಲಿ ಮೋಸ ವಂಚನೆ ಸ್ವಾರ್ಥಗಳಿಲ್ಲ
ಇಲ್ಲಿ ಕುಳಿತವರೆಲ್ಲ ಪರಶಿವನ ರೂಪ
ನಿನ್ನ ಮುಕ್ತಿ ಧಾಮಕ್ಕೆ ಇವರೆಲ್ಲ ಸೋಪಾನರು
ಮಾಣಿಕ್ಯ ವಿಠಲನೆರಗಿದವರೇ ದಾಸರು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...