ನಿಜ ಸ್ವರೂಪ

ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ
ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ
ತೊಳೆಬೇಕು ತನವ ಮಾಡಬೇಕು ಹವನ
ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ

ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ
ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ
ಎದ್ದೇಳು ಎದೆಗಾರಿಕೆಯಿಂದ ಹಿಮ್ಮೆಟಿಸು ಬೈರವನ
ಪಡೆದುಕೊ ಪರಮಾತ್ಮನ ಅಲಂಗಿಸು ಅವನ

ನಿನ್ನ ಮನಸ್ಸು ನಿಲ್ಲಲಿ ಎತ್ತರದ ಸ್ತರದಲಿ
ಬೆಳ್ಳಗಿನ ಮನಸ್ಸೆಂಬುದೆ ನಿನ್ನ ಆತ್ಮ
ನಿನ್ನ ಭಾವಗಳ ತುಂಬ ಪರಶಿವನ ತುಂಬಿಕೊ
ಕರ್‍ಮದ ಇಂಚು ಇಂಚಿನಲಿ ಸಾಕ್ಷಿಯಾಗಲಿ ಆತ್ಮ

ಹಂಸ ಪಕ್ಷಿ ಜಲದಿ ಕ್ಷೀರವೆ ಹೀರುವಂತೆ
ಸಂಸಾರ ಮಾಯೆಯಲಿ ದೇವನ ಆರಾಧಿಸು
ಸ್ವಾತಿ ಮಳೆಯು ಬೀಳಲು ಮುತ್ತಾಗುವಂತೆ
ಧ್ಯಾನದಲಿ ಜ್ಯೋತಿಗಾಗಿ ನೀನು ಕಾತರಿಸು

ಇಲ್ಲಿ ಮೋಸ ವಂಚನೆ ಸ್ವಾರ್ಥಗಳಿಲ್ಲ
ಇಲ್ಲಿ ಕುಳಿತವರೆಲ್ಲ ಪರಶಿವನ ರೂಪ
ನಿನ್ನ ಮುಕ್ತಿ ಧಾಮಕ್ಕೆ ಇವರೆಲ್ಲ ಸೋಪಾನರು
ಮಾಣಿಕ್ಯ ವಿಠಲನೆರಗಿದವರೇ ದಾಸರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೭
Next post ಭಾರತ ಮಾತೆ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…