ನಿಜ ಸ್ವರೂಪ

ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ
ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ
ತೊಳೆಬೇಕು ತನವ ಮಾಡಬೇಕು ಹವನ
ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ

ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ
ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ
ಎದ್ದೇಳು ಎದೆಗಾರಿಕೆಯಿಂದ ಹಿಮ್ಮೆಟಿಸು ಬೈರವನ
ಪಡೆದುಕೊ ಪರಮಾತ್ಮನ ಅಲಂಗಿಸು ಅವನ

ನಿನ್ನ ಮನಸ್ಸು ನಿಲ್ಲಲಿ ಎತ್ತರದ ಸ್ತರದಲಿ
ಬೆಳ್ಳಗಿನ ಮನಸ್ಸೆಂಬುದೆ ನಿನ್ನ ಆತ್ಮ
ನಿನ್ನ ಭಾವಗಳ ತುಂಬ ಪರಶಿವನ ತುಂಬಿಕೊ
ಕರ್‍ಮದ ಇಂಚು ಇಂಚಿನಲಿ ಸಾಕ್ಷಿಯಾಗಲಿ ಆತ್ಮ

ಹಂಸ ಪಕ್ಷಿ ಜಲದಿ ಕ್ಷೀರವೆ ಹೀರುವಂತೆ
ಸಂಸಾರ ಮಾಯೆಯಲಿ ದೇವನ ಆರಾಧಿಸು
ಸ್ವಾತಿ ಮಳೆಯು ಬೀಳಲು ಮುತ್ತಾಗುವಂತೆ
ಧ್ಯಾನದಲಿ ಜ್ಯೋತಿಗಾಗಿ ನೀನು ಕಾತರಿಸು

ಇಲ್ಲಿ ಮೋಸ ವಂಚನೆ ಸ್ವಾರ್ಥಗಳಿಲ್ಲ
ಇಲ್ಲಿ ಕುಳಿತವರೆಲ್ಲ ಪರಶಿವನ ರೂಪ
ನಿನ್ನ ಮುಕ್ತಿ ಧಾಮಕ್ಕೆ ಇವರೆಲ್ಲ ಸೋಪಾನರು
ಮಾಣಿಕ್ಯ ವಿಠಲನೆರಗಿದವರೇ ದಾಸರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೭
Next post ಭಾರತ ಮಾತೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys