ಸಾಧ್ಯವಹುದೆ?

ಮನುಜ ನೀನೊಮ್ಮೆ ಹಿಂತಿರುಗಿ ನೋಡು
ಎಲ್ಲಿಯದು ಆ ನಿನ್ನ ಪೂರ್‍ವ ಧಾಮ
ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ
ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ

ಜನರನ್ನು ಮೆಚ್ಚಿಸಿ ನೀನೇನು ಮಾಡುವುದು
ಸೌಂದರ್‍ಯತೆ ಕಂಡು ನೀನೇನು ಬಯಸುವುದು
ನಿನ್ನಲ್ಲಿದಿಯೇ ಅಂತಹ ಮಹಾ ಸತ್ವ
ಮತ್ತೇಕೆ ಆಸೆಗಳಿಗೆ ಇಷ್ಟೊಂದು ಮಹತ್ವ

ವಿಚಾರ ಶೂನ್ಯವಾಗಿ ವಿಚಾರವಂತನೆ ನೀನು
ಆಚಾರ ಶೂನ್ಯವಾಗಿ ಆಚಾರವಂತನೆ ನೀನು
ದುಡಿದು ಸಂಪಾದಿಸಿದೆ ಯಾರಿಗಾಗಿ ಸಂಪತ್ತು
ನಿನ್ನವರು ಪಡೆಯಬಲ್ಲರೆ ನಿನಗಾದ ವಿಪ್ಪತ್ತು

ಧರ್‍ಮ ಜ್ಞಾನಗಳೆಲ್ಲ ತಿಳಿದು ಮಂಕನಾಗಿದೆ
ಪೂಜೆ ಪುನಸ್ಕಾರಗಳಿಗಾಗಿ ನಿತ್ಯ ಡಾಂಬೀಕನಾದೆ
ನಿನ್ನ ಮನಸ್ಸೆ ನಿನ್ನದಲ್ಲವಾದರೆ ಅಹುದೆ
ಜಗತ್ತು ನಿನ್ನದಾಗಲು ಸಾಧ್ಯವಹುದೆ!

ಎದ್ದೇಳು ಎಚ್ಚರಗೊಳ್ಳು ಇನ್ನು ಕಾಲಮಿಂಚಿಲ್ಲ
ಒಂದೊಂದುಗಳಿಗೆ ನಿರಾಸೆ ತುಂಬಬೇಕಲ್ಲ
ಸಾರ್‍ಥಕ ಬಾಳಿಗೆ ಹರಿನಾಮ ಸ್ಮರಣೆಯೊಂದೇ
ಮಾಣಿಕ್ಯ ವಿಠಲನಾದರೇನು ಬೇಕಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೪
Next post ನಿನ್ನ ಕರುಣೆ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…