ಸಾಧ್ಯವಹುದೆ?

ಮನುಜ ನೀನೊಮ್ಮೆ ಹಿಂತಿರುಗಿ ನೋಡು
ಎಲ್ಲಿಯದು ಆ ನಿನ್ನ ಪೂರ್‍ವ ಧಾಮ
ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ
ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ

ಜನರನ್ನು ಮೆಚ್ಚಿಸಿ ನೀನೇನು ಮಾಡುವುದು
ಸೌಂದರ್‍ಯತೆ ಕಂಡು ನೀನೇನು ಬಯಸುವುದು
ನಿನ್ನಲ್ಲಿದಿಯೇ ಅಂತಹ ಮಹಾ ಸತ್ವ
ಮತ್ತೇಕೆ ಆಸೆಗಳಿಗೆ ಇಷ್ಟೊಂದು ಮಹತ್ವ

ವಿಚಾರ ಶೂನ್ಯವಾಗಿ ವಿಚಾರವಂತನೆ ನೀನು
ಆಚಾರ ಶೂನ್ಯವಾಗಿ ಆಚಾರವಂತನೆ ನೀನು
ದುಡಿದು ಸಂಪಾದಿಸಿದೆ ಯಾರಿಗಾಗಿ ಸಂಪತ್ತು
ನಿನ್ನವರು ಪಡೆಯಬಲ್ಲರೆ ನಿನಗಾದ ವಿಪ್ಪತ್ತು

ಧರ್‍ಮ ಜ್ಞಾನಗಳೆಲ್ಲ ತಿಳಿದು ಮಂಕನಾಗಿದೆ
ಪೂಜೆ ಪುನಸ್ಕಾರಗಳಿಗಾಗಿ ನಿತ್ಯ ಡಾಂಬೀಕನಾದೆ
ನಿನ್ನ ಮನಸ್ಸೆ ನಿನ್ನದಲ್ಲವಾದರೆ ಅಹುದೆ
ಜಗತ್ತು ನಿನ್ನದಾಗಲು ಸಾಧ್ಯವಹುದೆ!

ಎದ್ದೇಳು ಎಚ್ಚರಗೊಳ್ಳು ಇನ್ನು ಕಾಲಮಿಂಚಿಲ್ಲ
ಒಂದೊಂದುಗಳಿಗೆ ನಿರಾಸೆ ತುಂಬಬೇಕಲ್ಲ
ಸಾರ್‍ಥಕ ಬಾಳಿಗೆ ಹರಿನಾಮ ಸ್ಮರಣೆಯೊಂದೇ
ಮಾಣಿಕ್ಯ ವಿಠಲನಾದರೇನು ಬೇಕಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೪
Next post ನಿನ್ನ ಕರುಣೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…