Home / ಲೇಖನ / ವಿಜ್ಞಾನ / ಕೊರಳಲ್ಲಿ ಹಾಕಿಕೊಳ್ಳಬಹುದಾದ ಮಿನಿಕಂಪ್ಯೂಟರ್‌!!

ಕೊರಳಲ್ಲಿ ಹಾಕಿಕೊಳ್ಳಬಹುದಾದ ಮಿನಿಕಂಪ್ಯೂಟರ್‌!!

ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳನ್ನು, ಗುರುತಿನ ಚೀಟಿಗಳನ್ನು ಕೊರಳಲ್ಲಿ ಹಾಕಿಕೊಂಡು ತಿರುಗಾಡುವವರನ್ನು ನೋಡಿದ್ದೇವೆ. ಈ ರೀತಿ ಕಂಪ್ಯೂಟರ್‌ಗಳನ್ನೇ ಕೊರಳಲ್ಲಿ ನೇತು ಹಾಕಿಕೊಂಡು ತಿರುಗಾಡುವುದನ್ನು ಕಂಡಿಲ್ಲ. ಹಾಗೇನಾದರೂ ಇದ್ದರೆ ಸೂಕ್ಷ್ಮ ಯಂತ್ರಗಳನ್ನು ತಯಾರಿಸುವ ಜಪಾನ್ ದೇಶಕ್ಕೆ ಮೀಸಲು ಎನ್ನಬಹುದು. ನಿಜ ಜಪಾನ್ ದೇಶದ National Electronic Corporation ಸಂಸ್ಥೆಯು ದೇಹದ ಮೇಲೆ ಧರಿಸಬಹುದಾದ ವಯಕ್ತಿಕ ಕಂಪ್ಯೂಟರ್ಗಳನ್ನು (P.C.) ವಿನ್ಯಾಸಗೊಳಿಸಿದೆ. ಈ P.C. ಗಳು ಉದ್ಯಮಿಗಳಿಗೆ ಅವಶ್ಯಕವಾಗಿಬೇಕಾಗುತ್ತವೆ ಎಂದು ಬಳಸುವವರು ಹೇಳುತ್ತಾರೆ. ಇದನ್ನು ಕತ್ತಿನಲ್ಲಿಯೂ, ಸೊಂಟದಲ್ಲಿಯೂ ಸಿಕ್ಕಿಸಿಕೊಳ್ಳಬಹುದು. ವೈದ್ಯಕೀಯ ರಂಗದಲ್ಲಿ ಇದು ಹೆಚ್ಚು ಪ್ರಯೋಜನವಾಗುತ್ತದೆ. ಚಿಕಿತ್ಸೆಯಗುಣಮಟ್ಟವನ್ನು ಹೆಚ್ಚಿಸುತ್ತದೆಂದು ಅಲ್ಲಿಯ ವೈದ್ಯರು ಹೇಳುತ್ತಾರೆ. ವೈದ್ಯರು ರೋಗಿಗಳಿಂದ ಸಾವಿರಾರು ಕಿ.ಮೀ. ಗಳ ದೂರವಿದ್ದರೂ ರೋಗಿಯ ಶರೀರದ ಮೇಲೆ ಅಳವಡಿಸಿದ ಕಂಪ್ಯೂಟರ್ ಮೂಲಕ ರೋಗಿಯ ದೇಹಸ್ಥಿತಿಯ ಬಗೆಗೆ ಮಾಹಿತಿಗಳನ್ನು ಸಂಗ್ರಹಿಸಿ ಕಂಪ್ಯೂಟರ್ ಮೂಲಕವೇ ಪರಿಹಾರ ನೀಡಬಲ್ಲದು.

ಈ ಕಂಪ್ಯೂಟರ್‌ ಮಿನಿಕೀರ್ಬೊರ್ಡ್‌, ಡಾಯ್ಸ್‌ಬೋರ್ಡ್, ಟೆಲಿಫೋನ್, ಫ್ಯಾಕ್ಸ್ ಸಿ.ಡಿ. ರೋಮ್ಸ್ ಕ್ಯಾಮರಾ ಇಂಥಹ ವೈವಿಧ್ಯಮಯ ವಸ್ತುಗಳನ್ನು ಹೊಂದಿದೆ, ಎಂದರೆ ಆಶ್ಚರ್ಯವಾಗಬಹುದು. ಇವೆಲ್ಲವೂ ಸೇರಿ ಕೊರಳಲ್ಲಿ ಒಂದು ಕೆ.ಜಿ. ಭಾರವಾಗಬಹುದೆಂದು ಹೇಳುತ್ತಾರೆ. ಇವು ಬಲಿಷ್ಟವಾದ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ. ಮಾತ್ರವಲ್ಲ ಶರೀರ ಸೆನ್ಸರ್‌ಗಳು, ರೋಗಿಯ ಚಿತ್ರಗಳನ್ನು ರವಾನಿಸಲು ವಿಡಿಯೋ ಕ್ಯಾಮರಾ ವೈದ್ಯಕೀಯ ವಿಶ್ವಕೋಶ ಇವುಗಳನ್ನು ಸಹ ಇದರಲ್ಲಿ ಅಳವಡಿಸಲಾಗಿದೆ. ಇದೊಂದು ಕ್ರಾಂತಿಕಾರಿ ಶೋಧನೆಯಲ್ಲವೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...