ಕೊರಳಲ್ಲಿ ಹಾಕಿಕೊಳ್ಳಬಹುದಾದ ಮಿನಿಕಂಪ್ಯೂಟರ್‌!!

ಕೊರಳಲ್ಲಿ ಹಾಕಿಕೊಳ್ಳಬಹುದಾದ ಮಿನಿಕಂಪ್ಯೂಟರ್‌!!

ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳನ್ನು, ಗುರುತಿನ ಚೀಟಿಗಳನ್ನು ಕೊರಳಲ್ಲಿ ಹಾಕಿಕೊಂಡು ತಿರುಗಾಡುವವರನ್ನು ನೋಡಿದ್ದೇವೆ. ಈ ರೀತಿ ಕಂಪ್ಯೂಟರ್‌ಗಳನ್ನೇ ಕೊರಳಲ್ಲಿ ನೇತು ಹಾಕಿಕೊಂಡು ತಿರುಗಾಡುವುದನ್ನು ಕಂಡಿಲ್ಲ. ಹಾಗೇನಾದರೂ ಇದ್ದರೆ ಸೂಕ್ಷ್ಮ ಯಂತ್ರಗಳನ್ನು ತಯಾರಿಸುವ ಜಪಾನ್ ದೇಶಕ್ಕೆ ಮೀಸಲು ಎನ್ನಬಹುದು. ನಿಜ ಜಪಾನ್ ದೇಶದ National Electronic Corporation ಸಂಸ್ಥೆಯು ದೇಹದ ಮೇಲೆ ಧರಿಸಬಹುದಾದ ವಯಕ್ತಿಕ ಕಂಪ್ಯೂಟರ್ಗಳನ್ನು (P.C.) ವಿನ್ಯಾಸಗೊಳಿಸಿದೆ. ಈ P.C. ಗಳು ಉದ್ಯಮಿಗಳಿಗೆ ಅವಶ್ಯಕವಾಗಿಬೇಕಾಗುತ್ತವೆ ಎಂದು ಬಳಸುವವರು ಹೇಳುತ್ತಾರೆ. ಇದನ್ನು ಕತ್ತಿನಲ್ಲಿಯೂ, ಸೊಂಟದಲ್ಲಿಯೂ ಸಿಕ್ಕಿಸಿಕೊಳ್ಳಬಹುದು. ವೈದ್ಯಕೀಯ ರಂಗದಲ್ಲಿ ಇದು ಹೆಚ್ಚು ಪ್ರಯೋಜನವಾಗುತ್ತದೆ. ಚಿಕಿತ್ಸೆಯಗುಣಮಟ್ಟವನ್ನು ಹೆಚ್ಚಿಸುತ್ತದೆಂದು ಅಲ್ಲಿಯ ವೈದ್ಯರು ಹೇಳುತ್ತಾರೆ. ವೈದ್ಯರು ರೋಗಿಗಳಿಂದ ಸಾವಿರಾರು ಕಿ.ಮೀ. ಗಳ ದೂರವಿದ್ದರೂ ರೋಗಿಯ ಶರೀರದ ಮೇಲೆ ಅಳವಡಿಸಿದ ಕಂಪ್ಯೂಟರ್ ಮೂಲಕ ರೋಗಿಯ ದೇಹಸ್ಥಿತಿಯ ಬಗೆಗೆ ಮಾಹಿತಿಗಳನ್ನು ಸಂಗ್ರಹಿಸಿ ಕಂಪ್ಯೂಟರ್ ಮೂಲಕವೇ ಪರಿಹಾರ ನೀಡಬಲ್ಲದು.

ಈ ಕಂಪ್ಯೂಟರ್‌ ಮಿನಿಕೀರ್ಬೊರ್ಡ್‌, ಡಾಯ್ಸ್‌ಬೋರ್ಡ್, ಟೆಲಿಫೋನ್, ಫ್ಯಾಕ್ಸ್ ಸಿ.ಡಿ. ರೋಮ್ಸ್ ಕ್ಯಾಮರಾ ಇಂಥಹ ವೈವಿಧ್ಯಮಯ ವಸ್ತುಗಳನ್ನು ಹೊಂದಿದೆ, ಎಂದರೆ ಆಶ್ಚರ್ಯವಾಗಬಹುದು. ಇವೆಲ್ಲವೂ ಸೇರಿ ಕೊರಳಲ್ಲಿ ಒಂದು ಕೆ.ಜಿ. ಭಾರವಾಗಬಹುದೆಂದು ಹೇಳುತ್ತಾರೆ. ಇವು ಬಲಿಷ್ಟವಾದ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ. ಮಾತ್ರವಲ್ಲ ಶರೀರ ಸೆನ್ಸರ್‌ಗಳು, ರೋಗಿಯ ಚಿತ್ರಗಳನ್ನು ರವಾನಿಸಲು ವಿಡಿಯೋ ಕ್ಯಾಮರಾ ವೈದ್ಯಕೀಯ ವಿಶ್ವಕೋಶ ಇವುಗಳನ್ನು ಸಹ ಇದರಲ್ಲಿ ಅಳವಡಿಸಲಾಗಿದೆ. ಇದೊಂದು ಕ್ರಾಂತಿಕಾರಿ ಶೋಧನೆಯಲ್ಲವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪವಾರಿದೆ ಹಣತೆ ಉಳಿದಿದೆ
Next post ನಮ್ಮ ಕೇರಿಯ ಚಂದ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…