Home / ಕವನ / ಕವಿತೆ / ಬುಗುರಿಹುಳದ ಧ್ಯಾನ

ಬುಗುರಿಹುಳದ ಧ್ಯಾನ

ನಡೆವುದೆಂದರೆ ಹೀಗೆ….
ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ
ಗಿರಗಿರನೆ ಗುಂಡಗೆ
ಬುಗುರಿಹುಳದ
ಇಡೀ ದೇಹವೇ
ವೃತ್ತಾಕಾರ ತಿರುಗುತ್ತಾ
ಗಾಳಿಯಿಲ್ಲದೆಯೂ ಗಿರಗಟ್ಟೆ.

ತಿರುಗುತ್ತಲೇ ಒಂದಿಷ್ಟು ಮುಂದೆ
ಯಾರಿಗೆ ಗೊತ್ತು?
ಹಿಂದಕ್ಕೂ ಆಗಿರಬಹುದು ಆ ನಡಿಗೆ!

ಅದರ ದಾರಿಯುದ್ದಕ್ಕೂ
ಕಲ್ಲು ಮುಳ್ಳು.
ಗುಡುಗುಡಿಸುತ್ತಾ
ಅದನೇರಿ ಇಳಿದು
ತನ್ನ ಸುತ್ತಲೇ ತಾನು
ಗಿರಿಗಿಟ್ಟಲೆ ಆಡಿ
ಖುಷಿಯ ಚಪ್ಪಾಳೆ.

ಬೆನ್ನು ಕೆಳಗಾಗಿ
ಬಿದ್ದು ಕೊಂಡು
ತೊಪ್ಪೆಯ ಗುಪ್ಪೆಯಿಂದ
ಜೊಯ್ಯನೆ ಜಾರಾಟ
ದೇಹವೇ ಪಾದವಾಗಿ
ಬೆನ್ನು ಸವೆಸಿ ಗಿರ್ರನೆ
ಸುತ್ತುತ್ತಾ ಸುತ್ತುತ್ತಾ
ಅಷ್ಟ ದಿಕ್ಕಿಗೂ ನಮಸ್ಕಾರ.

ತೇವದ ಮೆದು
ಮಣ್ಣು ಸ್ಪರ್ಶಿಸಿದೊಡನೇ
ಇಡೀ ದೇಹ ತನ್ನ
ಹೊರ ಕವಚದೊಳಗೆ
ಎಳೆದು ಮುದುರಿಸಿ
ಇಡಿಕಿರಿದು ತುರುಕಿ
ಒಮ್ಮೆ ದೇಹ
ಠರ್ರನೆ ಗುಂಡಗೆ ತಿರುಗಿಸಿ
ಹದ ಮಾಡಿಕೊಂಡು
ದೇಹವೇ ತಾನಾಗಿ
ಸೊಯ್ಯನೊಮ್ಮೆ ಸುತ್ತಿ
ಮಣ್ಣು ಕುಳಿ ಮಾಡಿ
ಅದರೊಳಗೆ ಕಣ್ಣು ಕಿವಿಮುಚ್ಚಿ
ಕಿರ್ರೋ ಧ್ವನಿ ಕೆಲ ಕ್ಷಣ
ಮತ್ತೆ ಗಾಢ ನಿಶ್ಯಬ್ಧ
ದೇಹ ಉರುಟುವ
ಸದ್ದೂ ಇಲ್ಲ!
ಸತ್ತೇ ಹೋಯ್ಯ್ತೋ ಏನೋ?

ಎಷ್ಟು ಕಾಲ ಕಳೆಯಿತೋ ಹೀಗೇ…
ಕೊನೆಗೊಮ್ಮೆ
ಬುಗುರಿಹುಳು
ಮಲ್ಲೊಳಗಿಂದೆದ್ದು
ಹಾರಿತು ಪುರ್ರನೆ
ತನ್ನ ಹೊಸ ರೆಕ್ಕೆ ಬಡಿಯುತ್ತಾ….

ಹೊಸ ಧ್ಯಾನಕ್ಕೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...