Home / ಕವನ / ಕವಿತೆ / ಪರದೇಶಿ

ಪರದೇಶಿ

ಹೊತ್ತು ಮೂಡುವ ಮುನ್ನ
ಕೂಡಿ ಹಾಕಿಕೊಂಡ ಕನಸುಗಳನ್ನು
ಎಳೆ ಬಿಸಿಲಿನಲ್ಲಿ ವಿಮಾನವೇರಿದ
ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್‌ (ಏಕಾಂಗಿ)
ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು
ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ
ಬಣ್ಣಬಣ್ಣದ ಹೂವುಗಳೂಡೆಸುತ್ತ ಕುಣಿಯುವರು
ಶತ ಶತಮಾನದಿ ಕೂಡಿ ಬಿದ್ದ
ಧರ್ಮ, ಬಸಿಲಿನ ಹೊಡೆತ, ಮರುಭೂಮಿ,
ಒಂದಕ್ಕೊಂದು ಸ್ಪರ್ಧಿಸುತ
ಅರ್ಥ ಹುಡುಕುವುದರಲ್ಲಿ ಬಿದ್ದಿರುವಾಗ
ಬಂಜರು ಭೂಮಿ ಸಾವಿರ ಸಾವಿರ
ಲಕ್ಷ ಲಕ್ಷ ಜನರನ್ನು ದತ್ತುಕೊಂಡಿದೆ.
ಹಸಿದು ಹಂಬಲಿಸಿದ ಬಂಜೆಯೊಡಲು
ತುಂಬದೆ ತೆಕ್ಕೆ ಬದ್ದಿದೆ
ಒತ್ತಾಗಿ ಬೆಳೆಯುತಿದೆ
ಏನೋ! ನಿಜ, ಈಗ…
ಮಾಳಿ, ಮೇಸ್ತ್ರಿ ಡ್ರೈವರ್, ದೋಬಿ…
ನಿಟ್ಟಿಸಿರಿಡುವರು.
ಹೆಂಡತಿಯ ಮೃದು ಮಾತು ಬಣ್ಣದ ಬಳೆಗಳಲ್ಲಿ
ಮಕ್ಕಳ ಕಿರುಚಾಟ ತುಂಟಾಟಗಳಲ್ಲಿ
ತಾಯಿ ಕೈತುತ್ತಿನಲಿ
ಚಿತ್ರಗಳು ಒಂದೊಂದೇ ಮೂಡಿಸಿಕೊಂಡು
ಹಗಲು ಧಗೆಯಾಗಿ ರಾತ್ರಿ ನೀರಸವಾಗಿ
ಅಬ್ಬರದ ಉಬ್ಬರದ ಅರಬ್ಬರ
ತೊತ್ತುಗಳಾಗಿ
ಪ್ರವಾಹದೇರುಬ್ಬದಲಿ ಸೆಣಸಾಟ
ಬದುಕು ಅಪೂರ್ಣ
ಊರಿನ ಪತ್ರಗಳು
ಮದುವೆ ಮುಂಜುವೆ ಹಬ್ಬ ಹರಿದಿನಗಳು
ಮನದಾಳ ಬಿರಿದು ಬಿಸಿಲಿಗೆ ತತ್ತರಿಸುವುದು
ಬಂಧುಗಳ, ಕರುಳುಗಳ ಸಾವಿನ ಸುದ್ದಿ
ಗಳ ಗಳನೇ ಕಣ್ಣೀರುರುಳಿ
ಅನಾಥ ಪ್ರಜ್ಞೆಯ ನೋವು ಕೂಡಾ
ಅನಾಥವಾದಾಗ
ಯಾವ ಕನಸು ಚಿಗಿತು ಚಿತ್ತಾರವಾಗಿ
ನಿಂತು ಮನ ಆರಳಿಸಿಯಾವು!
ಇವರು ಅನಾಥರು
ಮರಳುಗಾಡಿನ ಮರೀಚಿಕೆ
ಭಾವನೆಗಳು ಅಲ್ಲೇ ಹರಿದು ಕಮರಿ
ಮುಚ್ಚಿ ಬಿಡುವುವು
ತಾನಿಲ್ಲಿ ಯಂತ್ರ, ಗೊತ್ತಾದಾಗ
ಆಸೆ ಸತ್ತು ಕಣ್ಣು ಬತ್ತಿ
ದಿನ ರಾತ್ರಿಗಳಿಗೆ ಬದುಕೇ ಇಲ್ಲ
ನಿಟ್ಟಿಸಿರಿಡುವಾಗ
ದೂರದ ತಾಯ್ನಾಡು ಕೈ ಬೀಸಿ ಕರೆಯುತಿದೆ
ಬಾ ಬಾ ಎಂದು
ಅಂಗಲಾಚುತ್ತಿದೆ ಹೆಂಡತಿಯ
ಏಕಾಂತದ ಕಣ್ಣೀರು
ಬಿಸಿಲಿನುಬ್ಬುಬ್ಬರ ಇಳಿಸಿ ಸೂರ್ಯ
ಕಡಲು ಸೇರಲೇಬೇಕು
ಸತ್ತು ಬದುಕಿಯೋ
ಬದುಕಿ ಸತ್ತೋ
ಕೊನಗೆ ಸಮಾಧಿಗೆ ಬರುತ್ತಾರೆ
ತಾಯ್ನಾಡಿಗೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...