Home / ಕವನ / ಕವಿತೆ / ಪರದೇಶಿ

ಪರದೇಶಿ

ಹೊತ್ತು ಮೂಡುವ ಮುನ್ನ
ಕೂಡಿ ಹಾಕಿಕೊಂಡ ಕನಸುಗಳನ್ನು
ಎಳೆ ಬಿಸಿಲಿನಲ್ಲಿ ವಿಮಾನವೇರಿದ
ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್‌ (ಏಕಾಂಗಿ)
ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು
ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ
ಬಣ್ಣಬಣ್ಣದ ಹೂವುಗಳೂಡೆಸುತ್ತ ಕುಣಿಯುವರು
ಶತ ಶತಮಾನದಿ ಕೂಡಿ ಬಿದ್ದ
ಧರ್ಮ, ಬಸಿಲಿನ ಹೊಡೆತ, ಮರುಭೂಮಿ,
ಒಂದಕ್ಕೊಂದು ಸ್ಪರ್ಧಿಸುತ
ಅರ್ಥ ಹುಡುಕುವುದರಲ್ಲಿ ಬಿದ್ದಿರುವಾಗ
ಬಂಜರು ಭೂಮಿ ಸಾವಿರ ಸಾವಿರ
ಲಕ್ಷ ಲಕ್ಷ ಜನರನ್ನು ದತ್ತುಕೊಂಡಿದೆ.
ಹಸಿದು ಹಂಬಲಿಸಿದ ಬಂಜೆಯೊಡಲು
ತುಂಬದೆ ತೆಕ್ಕೆ ಬದ್ದಿದೆ
ಒತ್ತಾಗಿ ಬೆಳೆಯುತಿದೆ
ಏನೋ! ನಿಜ, ಈಗ…
ಮಾಳಿ, ಮೇಸ್ತ್ರಿ ಡ್ರೈವರ್, ದೋಬಿ…
ನಿಟ್ಟಿಸಿರಿಡುವರು.
ಹೆಂಡತಿಯ ಮೃದು ಮಾತು ಬಣ್ಣದ ಬಳೆಗಳಲ್ಲಿ
ಮಕ್ಕಳ ಕಿರುಚಾಟ ತುಂಟಾಟಗಳಲ್ಲಿ
ತಾಯಿ ಕೈತುತ್ತಿನಲಿ
ಚಿತ್ರಗಳು ಒಂದೊಂದೇ ಮೂಡಿಸಿಕೊಂಡು
ಹಗಲು ಧಗೆಯಾಗಿ ರಾತ್ರಿ ನೀರಸವಾಗಿ
ಅಬ್ಬರದ ಉಬ್ಬರದ ಅರಬ್ಬರ
ತೊತ್ತುಗಳಾಗಿ
ಪ್ರವಾಹದೇರುಬ್ಬದಲಿ ಸೆಣಸಾಟ
ಬದುಕು ಅಪೂರ್ಣ
ಊರಿನ ಪತ್ರಗಳು
ಮದುವೆ ಮುಂಜುವೆ ಹಬ್ಬ ಹರಿದಿನಗಳು
ಮನದಾಳ ಬಿರಿದು ಬಿಸಿಲಿಗೆ ತತ್ತರಿಸುವುದು
ಬಂಧುಗಳ, ಕರುಳುಗಳ ಸಾವಿನ ಸುದ್ದಿ
ಗಳ ಗಳನೇ ಕಣ್ಣೀರುರುಳಿ
ಅನಾಥ ಪ್ರಜ್ಞೆಯ ನೋವು ಕೂಡಾ
ಅನಾಥವಾದಾಗ
ಯಾವ ಕನಸು ಚಿಗಿತು ಚಿತ್ತಾರವಾಗಿ
ನಿಂತು ಮನ ಆರಳಿಸಿಯಾವು!
ಇವರು ಅನಾಥರು
ಮರಳುಗಾಡಿನ ಮರೀಚಿಕೆ
ಭಾವನೆಗಳು ಅಲ್ಲೇ ಹರಿದು ಕಮರಿ
ಮುಚ್ಚಿ ಬಿಡುವುವು
ತಾನಿಲ್ಲಿ ಯಂತ್ರ, ಗೊತ್ತಾದಾಗ
ಆಸೆ ಸತ್ತು ಕಣ್ಣು ಬತ್ತಿ
ದಿನ ರಾತ್ರಿಗಳಿಗೆ ಬದುಕೇ ಇಲ್ಲ
ನಿಟ್ಟಿಸಿರಿಡುವಾಗ
ದೂರದ ತಾಯ್ನಾಡು ಕೈ ಬೀಸಿ ಕರೆಯುತಿದೆ
ಬಾ ಬಾ ಎಂದು
ಅಂಗಲಾಚುತ್ತಿದೆ ಹೆಂಡತಿಯ
ಏಕಾಂತದ ಕಣ್ಣೀರು
ಬಿಸಿಲಿನುಬ್ಬುಬ್ಬರ ಇಳಿಸಿ ಸೂರ್ಯ
ಕಡಲು ಸೇರಲೇಬೇಕು
ಸತ್ತು ಬದುಕಿಯೋ
ಬದುಕಿ ಸತ್ತೋ
ಕೊನಗೆ ಸಮಾಧಿಗೆ ಬರುತ್ತಾರೆ
ತಾಯ್ನಾಡಿಗೆ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್